ಮಳೆಗಾಲಕ್ಕೆ ಸಿದ್ಧತೆಯೇ ಮಾಡಿಲ್ಲ. ಹೂಳೆತ್ತದ ಕಾರಣ ಚರಂಡಿಗಳ ಮೋರಿಗಳ ನೀರು ರಸ್ತೆಯ ಮೇಲೆ!

ಗಣೇಶ ಪ್ರಸಾದ ಪಾಂಡೇಲು

ವಿಟ್ಲ-ಕಬಕ ನಡುವಿನ ಲೋಕೋಪಯೋಗಿ ಇಲಾಖೆ ರಸ್ತೆಯನ್ನುರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಹಂತ ೩ ಪ್ಯಾಕೇಜ್ ೨೫೧ರಲ್ಲಿ ಮರು ಗುತ್ತಿಗೆ ನಡೆಸಿ ಸುಮಾರು ೧೩ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿತ್ತು., ಆದರೆ ರಸ್ತೆಯ ಹಲವು ಕಡೆಯಲ್ಲಿ ಹೊಂಡಗಳು ಉಳಿದುಕೊಂಡಿವೆ.

ಚರಂಡಿ ಹಾಗೂ ಮೋರಿಗಳಿದ್ದರೂ, ಮಳೆ ನೀರು ಮಾತ್ರ ರಸ್ತೆಯಲ್ಲೇ ಹರಿಯುತ್ತಿದೆ. ಕೆಲವು ಭಾಗದಲ್ಲಿ ಕೆಸರು ಮಣ್ಣು ರಸ್ತೆಯನ್ನು ಆವರಿಸಿದೆ‌ ವಾಹನ ಸವಾರರು ಕೆಸರು ನೀರಿನಲ್ಲಿ ಪರದಾಟ ಸ್ಥಿತಿಯಿದೆ. ಎಸ್. ಎಚ್. ಡಿ. ಪಿ. ಮೂಲಕ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆದಿದ್ದು, ಎರಡನೇ ಬಾರಿ ಟೆಂಡರ್ ನಡೆಸಿ ಕಾಮಗಾರಿಯನ್ನು ನಡೆಸಲಾಗಿತ್ತು. ಕಬಕ ಸಮೀಪದ ಎರಡು ಕಡೆಗಳಲ್ಲಿ, ಇಡ್ಕಿದು ಗ್ರಾಮ ಪಂಚಾಯಿತಿಯ ಮುಂಭಾಗ, ಕಂಬಳಬೆಟ್ಟು ಮೋರಿಯ ಸಮೀಪ ಎರಡು ಕಡೆ, ಕಂಬಳ ಬೆಟ್ಟು ದರ್ಗಾ  ಶರೀಪ್ ಸಮೀಪ, ಬದನಾಜೆ, ನಿಡ್ಯ ಚಂದಳಿಕೆ ತಿರುವು ಹೀಗೆ ರಸ್ತೆಯುದ್ದಕ್ಕೂ ಮಳೆಯ ನೀರು ರಸ್ತೆಯಲ್ಲೇ ಹರಿಯುತ್ತಿದೆ

ಮೋರಿಯಲ್ಲಿ ನೀರಿಗೆ ಅವಕಾಶ ಇಲ್ಲ!

ಕಂಬಳಬೆಟ್ಟು ಧರ್ಮನಗರ ಶ್ರೀ ಜಯದುರ್ಗಾ ಪರಮೇಶ್ವರಿ ಭಜನಾ ಮಂದಿರ ಸಮೀಪದಲ್ಲಿ ಹೊಸದಾಗಿ ಮೋರಿ ನಿರ್ಮಾಣ ಮಾಡಿದ್ದು, ಅದರಲ್ಲಿ ಹೋಗಬೇಕಾದ ನೀರು ರಸ್ತೆಯಲ್ಲಿ ಹರಿಯುತ್ತಿದೆ. ವಾಹನದ ಓಡಾಟದ ವೇಗಕ್ಕೆ ಅಕ್ಕಪಕ್ಕದ ಪಾದಚಾರಿಗಳ ಮೇಲೆ ನೀರು ಹಾಯುತ್ತದೆ. ಅದಕ್ಕಿಂತ ನೂರು ಮೀಟರ್ ದೂರದಲ್ಲಿ ಹೊಸದಾಗಿ ಅಳವಡಿಸಿದ ಮೋರಿಯಲ್ಲಿ ಕೂಡ ಸಾಗಬೇಕಾದ ನೀರು ರಸ್ತೆಯಲ್ಲಿ ಹೋಗುತ್ತಿದೆ. ಮಳೆಗಾಲ ಮುಗಿಯುವ ಸಂದರ್ಭಕ್ಕೆ ರಸ್ತೆಗಳ ಡಾಮರು ಹುಡುಕುವ ಸ್ಥಿತಿ ನಿರ್ಮಾಣವಾಗಲಿದೆ.

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಮಳೆಗಾಲಕ್ಕೆ ಸಿದ್ಧತೆಯೇ ಮಾಡಿಲ್ಲ. ಹೂಳೆತ್ತದ ಕಾರಣ ಚರಂಡಿಗಳ ಮೋರಿಗಳ ನೀರು ರಸ್ತೆಯ ಮೇಲೆ!"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*