ಬೆಳಗಿನ ಜಾವ ಮಂಗಳೂರಿನಲ್ಲಿ ಮಹಿಳೆಯೊಬ್ಬರ ಶವದ ಭಾಗಗಳು ದೊರಕಿದ ಘಟನೆ ವರದಿಯಾಗಿದ್ದು, ನಗರ ಪೊಲೀಸರು ಶವದ ಗುರುತು ಪತ್ತೆ ಹಚ್ಚಿದ್ದಾರೆ.
ಸಾಂದರ್ಭಿಕ
ಪ್ರಾಥಮಿಕ ತನಿಖೆಯ ಪ್ರಕಾರ ನಗರದ ನಿವಾಸಿ ಶ್ರೀಮತಿ ಶೆಟ್ಟಿ (ಪ್ರಾಯ ಸುಮಾರು 35ರಿಂದ 40) ಎಂಬಾಕೆಯ ಶವವಿದು ಎಂದು ಹೇಳಲಾಗಿದ್ದು, ವೈಯಕ್ತಿಕ ಕಾರಣಗಳಿಂದ ಹತ್ಯೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಈಗಾಗಲೇ ಪೊಲೀಸರು ತೀವ್ರ ತನಿಖೆ ಆರಂಭಿಸಿದ್ದು, ಶವವನ್ನು ನಿನ್ನೆ ರಾತ್ರಿ ತಂದು ರುಂಡವನ್ನು ಕದ್ರಿ ಪಾರ್ಕ್-ಕೆಪಿಟಿ ಬಳಿಯ ಅಂಗಡಿಯೊಂದರ ಬಳಿ ಹಾಕಿದ್ದರೆ, ಕೆಲ ಭಾಗಗಳನ್ನು ಅಲ್ಲೇ ಪಕ್ಕದ ಗೋಣಿ ಚೀಲವೊಂದರಲ್ಲಿ ಬಿಸಾಡಿದ ಸ್ಥಿತಿಯಲ್ಲಿತ್ತು, ದೇಹವನ್ನು ತುಂಡರಿಸಿ, ಗೋಣಿ ಚೀಲದಲ್ಲಿ ತುಂಬಿಸಿ ಮಹಿಳೆಯ ರುಂಡ ಕದ್ರಿ ಕೆಪಿಟಿ ಬಳಿ ಪಾರ್ಕಿನಲ್ಲಿ ಹೆಲ್ಮೆಟ್ನಲ್ಲಿ ಪತ್ತೆಯಾಗಿತ್ತು. ಕೆಲ ಹೊತ್ತಿನಲ್ಲಿ ಮಂಗಳೂರಿನ ನಂದಿಗುಡ್ಡ ಸಮೀಪದಲ್ಲೂ ಶವದ ಭಾಗಗಳು ಪತ್ತೆಯಾದ ಕುರಿತು ವರದಿಯಾದವು. ಈಕೆಯನ್ನು ಭೀಕರವಾಗಿ ಹತ್ಯೆ ಮಾಡಲಾಗಿದ್ದು, ವೈಯಕ್ತಿಕ ದ್ವೇಷದಿಂದ ಮಾಡಿಬಹುದೇ ಎಂಬ ಶಂಕೆಯಿಂದ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ಅಕೌಂಟ್ ನಂಬ್ರ ಹೀಗಿದೆ. For Online Transaction: Account Name: Harish M G, Bank: Karnataka bank Account No: 0712500100982501 IFSC Code: KARB0000071 ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ
Be the first to comment on "ಭೀಕರವಾಗಿ ಹತ್ಯೆಯಾದ ಮಹಿಳೆಯ ಗುರುತು ಪತ್ತೆ, ತೀವ್ರಗೊಂಡ ಪೊಲೀಸ್ ತನಿಖೆ"