![](https://i0.wp.com/bantwalnews.com/wp-content/uploads/2019/05/crime.jpg?resize=277%2C182)
ಸಾಂದರ್ಭಿಕ
ಬೆಳಗಿನ ಜಾವ ಮಂಗಳೂರಿನಲ್ಲಿ ಮಹಿಳೆಯೊಬ್ಬರ ಶವದ ಭಾಗಗಳು ದೊರಕಿದ ಘಟನೆ ವರದಿಯಾಗಿದ್ದು, ನಗರ ಪೊಲೀಸರು ಶವದ ಗುರುತು ಪತ್ತೆ ಹಚ್ಚಿದ್ದಾರೆ.
![](https://i0.wp.com/bantwalnews.com/wp-content/uploads/2019/05/MURDER.jpg?resize=797%2C478)
ಸಾಂದರ್ಭಿಕ
ಪ್ರಾಥಮಿಕ ತನಿಖೆಯ ಪ್ರಕಾರ ನಗರದ ನಿವಾಸಿ ಶ್ರೀಮತಿ ಶೆಟ್ಟಿ (ಪ್ರಾಯ ಸುಮಾರು 35ರಿಂದ 40) ಎಂಬಾಕೆಯ ಶವವಿದು ಎಂದು ಹೇಳಲಾಗಿದ್ದು, ವೈಯಕ್ತಿಕ ಕಾರಣಗಳಿಂದ ಹತ್ಯೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಈಗಾಗಲೇ ಪೊಲೀಸರು ತೀವ್ರ ತನಿಖೆ ಆರಂಭಿಸಿದ್ದು, ಶವವನ್ನು ನಿನ್ನೆ ರಾತ್ರಿ ತಂದು ರುಂಡವನ್ನು ಕದ್ರಿ ಪಾರ್ಕ್-ಕೆಪಿಟಿ ಬಳಿಯ ಅಂಗಡಿಯೊಂದರ ಬಳಿ ಹಾಕಿದ್ದರೆ, ಕೆಲ ಭಾಗಗಳನ್ನು ಅಲ್ಲೇ ಪಕ್ಕದ ಗೋಣಿ ಚೀಲವೊಂದರಲ್ಲಿ ಬಿಸಾಡಿದ ಸ್ಥಿತಿಯಲ್ಲಿತ್ತು, ದೇಹವನ್ನು ತುಂಡರಿಸಿ, ಗೋಣಿ ಚೀಲದಲ್ಲಿ ತುಂಬಿಸಿ ಮಹಿಳೆಯ ರುಂಡ ಕದ್ರಿ ಕೆಪಿಟಿ ಬಳಿ ಪಾರ್ಕಿನಲ್ಲಿ ಹೆಲ್ಮೆಟ್ನಲ್ಲಿ ಪತ್ತೆಯಾಗಿತ್ತು. ಕೆಲ ಹೊತ್ತಿನಲ್ಲಿ ಮಂಗಳೂರಿನ ನಂದಿಗುಡ್ಡ ಸಮೀಪದಲ್ಲೂ ಶವದ ಭಾಗಗಳು ಪತ್ತೆಯಾದ ಕುರಿತು ವರದಿಯಾದವು. ಈಕೆಯನ್ನು ಭೀಕರವಾಗಿ ಹತ್ಯೆ ಮಾಡಲಾಗಿದ್ದು, ವೈಯಕ್ತಿಕ ದ್ವೇಷದಿಂದ ಮಾಡಿಬಹುದೇ ಎಂಬ ಶಂಕೆಯಿಂದ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.
![](https://i0.wp.com/bantwalnews.com/wp-content/uploads/2019/10/bantwalnews.png?w=400&ssl=1)
Be the first to comment on "ಭೀಕರವಾಗಿ ಹತ್ಯೆಯಾದ ಮಹಿಳೆಯ ಗುರುತು ಪತ್ತೆ, ತೀವ್ರಗೊಂಡ ಪೊಲೀಸ್ ತನಿಖೆ"