ಸೌಂದರ್ಯವರ್ಧಕ, ಆರೋಗ್ಯರಕ್ಷಕ ದಾಲ್ಚೀನಿ

  • ಡಾ.ಎ.ಜಿ.ರವಿಶಂಕರ್
  • ಅಂಕಣ: ಪಾಕಶಾಲೆಯೇ ವೈದ್ಯಶಾಲೆ

 

ಪುಲಾವ್, ಘೀ ರೈಸ್ ಎಂದಾಕ್ಷಣ ದಾಲ್ಚೀನಿ ತೊಗಟೆ ಅಥವಾ ಎಲೆಯನ್ನು ಹಾಕದೇ ಇರುವುದಿಲ್ಲ .ಇದರಿಂದ ಪರಿಮಳ ಹಾಗು ರುಚಿ ಎರಡೂ ಅಧಿಕವಾಗುತ್ತದೆ. ಹಾಗೆಯೇ ದೇಹದ  ಸೌಂದರ್ಯ ಮತ್ತು ಆರೋಗ್ಯದ ವಿಷಯದಲ್ಲೂ ಸಹ  ದಾಲ್ಚಿನಿ ತನ್ನದೇ ಆದ ಸ್ಥಾನವನ್ನು ಪಡೆದಿದೆ.

  1. ಸಣ್ಣ ತುಂಡು ದಾಲ್ಚೀನಿಯನ್ನು ಜಗಿಯುವುದರಿಂದ ಅಥವಾ ದಾಲ್ಚೀನಿ ಕಷಾಯದಲ್ಲಿ ಬಾಯಿ ಮುಕ್ಕಳಿಸುವುದರಿಂದ ಬಾಯಿಯ ದುರ್ಗಂಧ ನಿವಾರಣೆಯಾಗುತ್ತದೆ.
  2. ಪ್ರತಿದಿನ ಬೆಳಗ್ಗೆ ದಾಲ್ಚೀನಿ ಕಷಾಯ ಕುಡಿಯುವುದರಿಂದ ಶರೀರದ ಬೇಡವಾದ ಕೊಬ್ಬು ಕಡಿಮೆಯಾಗುತ್ತದೆ.
  3. ದಾಲ್ಚೀನಿ ಕಷಾಯವು ಜೀರ್ಣಶಕ್ತಿಯನ್ನು ಅಧಿಕಗೊಳಿಸುತ್ತದೆ ಮತ್ತು ಹೊಟ್ಟೆಯಲ್ಲಿನ ವಾಯು ಹಾಗು ಉರಿಊತವನ್ನು ನಿವಾರಿಸುತ್ತದೆ
  4. ದಲ್ಚೀನಿ ಮತ್ತು ಜೇನುತುಪ್ಪದ ಮಿಶ್ರಣವು ಹೃದಯದ ತೊಂದರೆಗಳನ್ನು ತಡೆಕಟ್ಟಲು ಮತ್ತು ಶರೀರದ ಅಧಿಕ ತೂಕವನ್ನು ಇಳಿಸಲು ಸಹಕರಿಸುತ್ತದೆ.
  5. ದಿನಕ್ಕೆ 6 ಗ್ರಾಂ ನಷ್ಟು ದಲ್ಚೀನಿ ಬಳಕೆಯು ಮಧುಮೇಹವನ್ನು ಹತೋಟಿಯಲ್ಲಿಡಲು ಸಹಕರಿಸುತ್ತದೆ.
  6. ದಾಲ್ಚೀನಿಯನ್ನು ಜೇನುತುಪ್ಪ ಹಾಗು ಶುಂಠಿಯ ಜೊತೆ ಸೇರಿಸಿ ತಿಂದರೆ ಶೀತ, ನೆಗಡಿ ಕಡಿಮೆಯಾಗುತ್ತದೆ.
  7. ಮುಟ್ಟಿನ ಸಮಯದಲ್ಲಿ ಅಧಿಕ ರಕ್ತಸ್ರಾವ ಇದ್ದರೆ ದಲ್ಚೀನಿಯ ಕಷಾಯಮಾಡಿ ಕುಡಿಯಬೇಕು.
  8. ಒಂದು ಲೋಟ ತಣ್ಣಗಿರುವ ದಾಲ್ಚೀನಿ ಕಷಾಯಕ್ಕೆ 2 ಚಮಚ  ಜೇನುತುಪ್ಪ ಸೇರಿಸಿ ಕುಡಿಯುವುದರಿಂದ ವಾತ ಸಂಬಂಧಿತ ಸಂಧುಗಳ ನೋವು ಕಡಿಮೆಯಾಗುತ್ತದೆ.
  9. ದಾಲ್ಚೀನಿ ಸ್ತ್ರೀಯರಲ್ಲಿ ಹಾರ್ಮೋನ್ಗಳ ಸಮತೋಲನವನ್ನು ಕಾಪಾಡುವುದರ ಮೂಲಕ ಬಂಜೆ ತನವನ್ನು ನಿವಾರಿಸುತ್ತದೆ.
  10. ಮೆದುಳಿಗೆ ಬಲವನ್ನು ನೀಡುವುದರ ಮೂಲಕ ಇದು ನರಸಂಬಂಧಿ ವ್ಯಾಧಿಗಳಾದ ಮರೆಗುಳಿತನ, ಪಾರ್ಕಿನ್ಸನ್ ಇತ್ಯಾದಿಗಳನ್ನು ಹತೋಟಿಯಲ್ಲಿಡಲು ಸಹಕರಿಸುತ್ತದೆ.
  11. ದಾಲ್ಚೀನಿ ಕರುಳಿನ ಆರೋಗ್ಯಕ್ಕೆ ಉತ್ತಮ ದ್ರವ್ಯವಾಗಿದ್ದು ಮಲಬದ್ದತೆ, ನೋವು, ವಾಯುವಿನ ಒತ್ತಡ, Irritable Bowel Syndrome, ಇತ್ಯಾದಿಗಳನ್ನು ಹೋಗಲಾಡಿಸುತ್ತದೆ.
  12. ಇದು ಶರೀರದ ರಕ್ತಸಂಚಾರವನ್ನು ಅಧಿಕಗೊಲಿಸುವುದರ ಮೂಲಕ ಶರೀರವನ್ನು ಬೆಚ್ಚಗೆ ಇಡಲು ಸಹಕರಿಸುತ್ತದೆ. ಆದುದರಿಂದ ಚಳಿಗಾಲದಲ್ಲಿ ದಾಲ್ಚೀನಿ ಕಷಾಯವು ಉತ್ತಮ ದ್ರವ ಆಹಾರವಾಗಿದೆ.
  13. ದಾಲ್ಚೀನಿ ಸ್ಮರಣ ಶಕ್ತಿಯನ್ನು ವೃದ್ಧಿಸುತ್ತದೆ ಮತ್ತು ಶರೀರಕ್ಕೆ ಉಲ್ಲಾಸವನ್ನು ನೀಡುತ್ತದೆ.
  14. ರಾತ್ರಿ ಸಮಯದಲ್ಲಿ ಹಾಲಿಗೆ ದಾಲ್ಚೀನಿ ಹಾಕಿ ಕುದಿಸಿ ಕುಡಿಯುವುದರಿಂದ ನಿದ್ರಾಹೀನತೆಯನ್ನು ಹೋಗಲಾಡಿಸಬಹುದು.
  15. ದಾಲ್ಚೀನಿ ಹುಡಿಯನ್ನು ಜೇನುತುಪ್ಪದಲ್ಲಿ ಕಲಸಿ ಮುಖಕ್ಕೆ ಹಚ್ಚುವುದರಿಂದ ಮೊಡವೆಗಳು ಮಾಯವಾಗುತ್ತದೆ ಮತ್ತು ಚರ್ಮದ ಕಾಂತಿ ಅಧಿಕವಾಗುತ್ತದೆ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Dr. Ravishankar A G
ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಎಂ.ಎಸ್. (ಸ್ನಾತಕೋತ್ತರ) ಪದವೀಧರರಾಗಿರುವ ಡಾ.ರವಿಶಂಕರ ಎ.ಜಿ, ಮೂಡುಬಿದಿರೆ ಆಳ್ವಾಸ್ ಆಯುರ್ವೇದ ಮಹಾವಿದ್ಯಾಲಯ ಸ್ನಾತಕೋತ್ತರ ವಿಭಾಗ ಪ್ರಾಧ್ಯಾಪಕರು. ವಿಟ್ಲದಲ್ಲಿ ಚಿಕಿತ್ಸಾಲಯವನ್ನೂ ಹೊಂದಿದ್ದಾರೆ. ಮೂಲವ್ಯಾಧಿ, ಭಗಂಧರ, ಸೊಂಟನೋವು, ವಾತರೋಗ, ಶಿರಶೂಲ ಇತ್ಯಾದಿಗಳಲ್ಲಿ ಕ್ಷಾರಕರ್ಮ, ಅಗ್ನಿಕರ್ಮ, ರಕ್ತಮೋಕ್ಷಣ ಮೊದಲಾದ ವಿಶೇಷ ಚಿಕಿತ್ಸೆ ನೀಡುವುದರಲ್ಲಿ ಪರಿಣತರು.

Be the first to comment on "ಸೌಂದರ್ಯವರ್ಧಕ, ಆರೋಗ್ಯರಕ್ಷಕ ದಾಲ್ಚೀನಿ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*