ಕಬ್ಬಿಣದ ಗೇಟ್ ಮುರಿದು ದನ ಕದ್ದಾಗಲೂ ಯಾರಿಗೂ ಗೊತ್ತಾಗ್ಲಿಲ್ಲ

ಸೌತಡ್ಕ ದೇವಸ್ಥಾನದಲ್ಲಿ ಗೋಕಳವು ನಡೆಯುತ್ತಿರುವುದು ಇದೇ ಮೊದಲಲ್ಲ.

ಹೀಗಾಗಿ ಇಲ್ಲಿ ಬಿಗು ಭದ್ರತೆಗೆ ಕ್ರಮ ಕೈಗೊಳ್ಳಲಾಗಿತ್ತು. ಆದರೂ ಮಂಗಳವಾರ ರಾತ್ರಿ ಮತ್ತೆ ದನಗಳನ್ನು ಕದ್ದೊಯ್ಯಲಾಗಿದೆ. ಇದಕ್ಕೇನು ಕಾರಣ?

ಇಂಥದ್ದೊಂದು ಪ್ರಶ್ನೆ ಈಗ ಮೂಡಿರುವುದು ಸೌತಡ್ಕದವರಿಗಷ್ಟೇ ಅಲ್ಲ, ಹೊರಗಿನವರಿಗೂ. ಏಕೆಂದರೆ ಸೌತಡ್ಕದಲ್ಲಿ ಗೋಶಾಲೆಗಾಗಿಯೇ ಒಂದೂ ಕಾಲು ಎಕ್ರೆ ವಿಸ್ತೀರ್ಣದ ಜಾಗವಿದೆ.

ಜಾಹೀರಾತು

www.bantwalnews.com report

ಏನೆಲ್ಲ ವ್ಯವಸ್ಥೆ ಇಲ್ಲಿದೆ ನೋಡಿ.

ಜಾಹೀರಾತು

ಕಬ್ಬಿಣದ ಗೇಟು. ಕಣ್ಗಾವಲು ಇರಿಸಲು ಸಿಸಿ ಕ್ಯಾಮರಾ. ಅದೂ ಸಾಲದು ಎಂಬಂತೆ ಬಂದೂಕು ಹಿಡಿದ ಮನುಷ್ಯ. ಹೀಗೆಲ್ಲ ಇದ್ದಾಗ ಸೌತಡ್ಕದಲ್ಲಿ ದನಕಳವು ನಡೆಯಲೇ ಬಾರದಿತ್ತು. ಆದರೆ 17ರಂದು ರಾತ್ರಿ ಕಳೆದು 18ರ ಬೆಳಕು ಹರಿದಾಗ ನಾಲ್ಕು ದನಗಳು ಇಲ್ಲದೇ ಇರುವುದು ಗೊತ್ತಾಗಿದೆ. ಖುದ್ದು ಗನ್ ಮ್ಯಾನ್ ಗೂ ಹೇಗೆ ಕಳವಾಯಿತು ಎಂಬುದೇ ಅರಿವಾಗಲಿಲ್ಲ.

ಕಾಮಧೇನು ಎಂಬ ಹೆಸರಿನ ಈ ಗೋಶಾಲೆಯಲ್ಲಿ ಆಗಾಗ್ಗೆ ದನಕಳವು ಮಾಡಲಾಗುತ್ತಿದೆ ಎಂಬ ಕಾರಣಕ್ಕೇ ಇಲ್ಲಿ ಸಿಸಿ ಕ್ಯಾಮರಾ ಹಾಕಲಾಗಿತ್ತು. ಅದೂ ಸರಿಯಿಲ್ಲ.

ಜಾಹೀರಾತು

2006 ಜನವರಿ 5ರಂದು ಇಲ್ಲಿದ್ದ ನಾಲ್ಕು ಕೋಣಗಳನ್ನು ಕದ್ದೊಯ್ಯಲಾಗಿತ್ತು. ಮಂಗಳವಾರ ರಾತ್ರಿ ಕಬ್ಬಿಣದ ಗೇಟು ಮುರಿದೇ ಮತ್ತೆ ನಾಲ್ಕು ಗೋವುಗಳನ್ನು ಯಾವುದೇ ಹೆದರಿಕೆ ಇಲ್ಲದೆ ಕದ್ದೊಯ್ಯಲಾಗಿದೆ. ಮೂರು ಹಾಲು ಕರೆಯುವ ಹಸುಗಳು ಮತ್ತು ಒಂದು ಹೋರಿಯನ್ನು ಕಳ್ಳರು ಏನು ಮಾಡಿದರೋ ಗೊತ್ತಿಲ್ಲ.

ಆದರೆ ಇಷ್ಟೆಲ್ಲ ಬಂದೋಬಸ್ತ್ ಏರ್ಪಡಿಸಿದರೂ ಯಾಕೆ ಇಲ್ಲಿ ಕಳವು ನಡೆಯುತ್ತೆ ಎಂಬುದು ನಿಗೂಢ.

ಜಾಹೀರಾತು

ಸಾಮಾನ್ಯವಾಗಿ ಸಮೀಪದ ಪೊಲೀಸ್ ಠಾಣಾ ವ್ಯಾಪ್ತಿಗೆ ಒಪ್ಪಿಸಲಾಗುವ ಜಾನುವಾರುಗಳನ್ನು ಇಲ್ಲಿಗೆ ತಂದು ಬಿಡಲಾಗುತ್ತದೆ. ಆದರೆ ಇಲ್ಲೂ ಜಾನುವಾರುಗಳಿಗೆ ಭದ್ರತೆ ಇಲ್ಲ.

ಈ ವರೆಗೆ ನಡೆದ ಗೋಕಳ್ಳತನ ಪ್ರಕರಣಗಳ ಬಗ್ಗೆ ಕಟ್ಟುನಿಟ್ಟಾದ ಪೋಲೀಸ್ ತನಿಖೆ ನಡೆಸಲೇಬೇಕು. ಈ ಕೃತ್ಯದಲ್ಲಿ ಯಾರು ಭಾಗಿಗಳಾಗಿದ್ದರೂ ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ಸೂಕ್ತ ಕಾನೂನು ಕ್ರಮ ಪೋಲೀಸ್ ಇಲಾಖೆ ಕೈಗೊಳ್ಳಬೇಕು ಎಂದು ಕೊಕ್ಕಡ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ತುಕ್ರಪ್ಪ ಶೆಟ್ಟಿ ನೂಜೆ, ನೆಲ್ಯಾಡಿ ಹಿಂದೂ ಜಾಗರಣ ವೇದಿಕೆ ಸಂಚಾಲಕ ರವಿಪ್ರಸಾದ್ ಶೆಟ್ಟಿ ಹೇಳಿಕೆ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಕಬ್ಬಿಣದ ಗೇಟ್ ಮುರಿದು ದನ ಕದ್ದಾಗಲೂ ಯಾರಿಗೂ ಗೊತ್ತಾಗ್ಲಿಲ್ಲ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*