
ಬಂಟ್ವಾಳ: ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದ ಮಧುಕರ ಸಭಾಭವನದಲ್ಲಿ ಸಂಘದ ಅಧ್ಯಕ್ಷರಾದ ಸುಜಿತ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ‘ಶ್ರೀರಾಮ ಸೌಹಾರ್ದ ಸಹಕಾರಿ ಸಂಘ ನಿಯಮಿತ’ದ 10ನೇ ವರ್ಷದ ವಾರ್ಷಿಕ ಮಹಾಸಭೆ ನಡೆಯಿತುಗ್ರಾಮೀಣ ಭಾಗದ ಆರ್ಥಿಕ ಅಭಿವೃದ್ಧಿಯಲ್ಲಿ ಸಹಕಾರಿ ಕ್ಷೇತ್ರದ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಸದಸ್ಯರ ಸಕ್ರಿಯ ವ್ಯವಹಾರವು ಸಂಸ್ಥೆ ಹಾಗೂ ಪ್ರದೇಶದ ಅಭಿವೃದ್ಧಿಗೆ ದಾರಿಯಾಗುತ್ತದೆ ಎಂದು ನಿರ್ದೇಶಕ ಡಾ. ಪ್ರಭಾಕರ ಭಟ್ ಕಲ್ಲಡ್ಕ ತಿಳಿಸಿದರು.
ಸಂಸ್ಥೆಯ ಅಭಿವೃದ್ಧಿ ಹಾಗೂ ಪ್ರಗತಿಯ ವಿವರಗಳನ್ನು ಅಧ್ಯಕ್ಷ ಸುಜಿತ್ ಕುಮಾರ್ ನೀಡಿದರು.
2025-26ನೇ ಆರ್ಥಿಕ ಸಾಲಿನಲ್ಲಿ ಸಂಸ್ಥೆಯು ಸಾಧಿಸಿದ ಪ್ರಮುಖ ಮೈಲಿಗಲ್ಲುಗಳು ಹೀಗಿವೆ:
- ಸದಸ್ಯತ್ವ ಮತ್ತು ಪಾಲು ಬಂಡವಾಳ: ಮಾರ್ಚ್ ಅಂತ್ಯದ ವೇಳೆಗೆ ಸಂಘವು 4,108 ಸದಸ್ಯರನ್ನು ಹೊಂದಿದ್ದು, ಒಟ್ಟು ರೂ 43,11,900/- ಪಾಲು ಬಂಡವಾಳ ಸಂಗ್ರಹಿಸಿದೆ.
- ದುಡಿಯುವ ಬಂಡವಾಳ: ಸಂಸ್ಥೆಯು ರೂ 19,77,70,479/- ದುಡಿಯುವ ಬಂಡವಾಳವನ್ನು ಹೊಂದಿದೆ.
- ಠೇವಣಿ ಸಂಗ್ರಹ: ಪ್ರಸಕ್ತ ವರ್ಷದಲ್ಲಿ ರೂ 17,71,96,109.30/- ಠೇವಣಿ ಸಂಗ್ರಹಿಸಲಾಗಿದ್ದು, ಕಳೆದ ಸಾಲಿಗಿಂತ 9.8 ಶೇ ಪ್ರಗತಿ ದಾಖಲಿಸಿದೆ.
- ಸಾಲ ವಿತರಣೆ: ಒಟ್ಟು ರೂ14,49,12,548/- ಸಾಲ ನೀಡಲಾಗಿದ್ದು, ಕಳೆದ ವರ್ಷಕ್ಕಿಂತ 6 ಶೇ ಏರಿಕೆ ಕಂಡಿದೆ.
- ಸುರಕ್ಷಿತ ಹೂಡಿಕೆ: ಸಂಸ್ಥೆಯ ಉಳಿಕೆ ಹಣ ರೂ 5,85,62,887/- ಅನ್ನು ಸುರಕ್ಷತೆಯ ದೃಷ್ಟಿಯಿಂದ ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿಯಮಾವಳಿಗಳ ಅನ್ವಯ ಇತರೆ ಬ್ಯಾಂಕುಗಳಲ್ಲಿ ಹೂಡಿಕೆ ಮಾಡಲಾಗಿದೆ.
- ಲಾಭ ಮತ್ತು ಡಿವಿಡೆಂಟ್: ಸಂಘವು ಈ ಆರ್ಥಿಕ ವರ್ಷದಲ್ಲಿ ರೂ 56,74,768/- ನಿವ್ವಳ ಲಾಭ ಗಳಿಸಿದ್ದು, ಕಳೆದ ಬಾರಿಗಿಂತ 13.6 ಶೇ ಪ್ರಗತಿ ಸಾಧಿಸಿದೆ. ಈ ಹಿನ್ನೆಲೆಯಲ್ಲಿ ಸದಸ್ಯರಿಗೆ 12.5 ಶೇ ಡಿವಿಡೆಂಟ್ ಘೋಷಿಸಲಾಯಿತು.
ಸಹಕಾರಿ ಸಂಘವು ತನ್ನ ಸಾಮಾಜಿಕ ಹೊಣೆಗಾರಿಕೆಯ ಭಾಗವಾಗಿ ಬಡ ವಿದ್ಯಾರ್ಥಿಗಳ ನಿಧಿಯಿಂದ ಶೈಕ್ಷಣಿಕ ಸಹಾಯಧನ ವಿತರಿಸಿತು:
- ಸಮವಸ್ತ್ರ ನೆರವು: ಶ್ರೀರಾಮ ವಿದ್ಯಾಕೇಂದ್ರದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಸಮವಸ್ತ್ರ ಖರೀದಿಗೆ ರೂ 12,31,756/- ವಿತರಿಸಲಾಯಿತು.
- ವಾಹನ ವೆಚ್ಚದ ಸಹಾಯ: 74 ಬಡ ವಿದ್ಯಾರ್ಥಿಗಳ ಶಾಲಾ ಬಸ್ ಪ್ರಯಾಣ ವೆಚ್ಚಕ್ಕಾಗಿ ರೂ 7,00,000/- ಗಳ ನೆರವು ನೀಡಲಾಯಿತು.
ಪರಿಸರ ಜಾಗೃತಿಯ ಸಂಕೇತವಾಗಿ ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಸದಸ್ಯರುಗಳಿಗೆ ಹಲಸಿನ ಗಿಡಗಳನ್ನು ವಿತರಿಸಲಾಯಿತು. ಸಂಸ್ಥೆಯ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಾರ್ಷಿಕ ವರದಿ ಮಂಡಿಸಿದರು
- ಪ್ರಮುಖರ ಉಪಸ್ಥಿತಿ: ಅನ್ಯ ಸಹಕಾರಿ ಕ್ಷೇತ್ರದ ಅಧ್ಯಕ್ಷರುಗಳಾದ ಪದ್ಮನಾಭ ಕೊಟ್ಟಾರಿ, ಸುಧಾಕರ ರೈ ಬೋಳಂತೂರು, ರವೀಂದ್ರ ಕಂಬಳಿ, ನಾಗೇಶ ಕಲ್ಲಡ್ಕ, ವಿಟ್ಲ ಪಡ್ನೂರಿನ ಗೋಪಾಲಕೃಷ್ಣ ಭಟ್, ಲೋಕಾನಂದ ಪೂಜಾರಿ ಮತ್ತು ಗೋವರ್ಧನ್ ವಿಟ್ಲ ಸಭೆಯಲ್ಲಿ ಉಪಸ್ಥಿತರಿದ್ದರು.
- ಸಂಸ್ಥೆಯ ನಿರ್ದೇಶಕರು: ನಾರಾಯಣ ಸೋಮಯಾಜಿ, ವಸಂತ ಮಾಧವ, ನಾರಾಯಣ ಶೆಟ್ಟಿ, ವಸಂತ ಬಲ್ಲಾಳ್, ಕೃಷ್ಣಪ್ರಸಾದ್ ಕೆ.ಎನ್., ರವಿರಾಜ್ ಕಣಂತೂರು, ಸತೀಶ್ ಕುಮಾರ್ ಶಿವಗಿರಿ, ನಾಗರಾಜ್ ಕೆ.ಎಸ್. ಹಾಗೂ ಮಲ್ಲಿಕಾ ಶೆಟ್ಟಿ ಸಭೆಯಲ್ಲಿ ಭಾಗವಹಿಸಿದ್ದರು.
ನಿರ್ದೇಶಕರಾದ ಕುಶಾಲಪ್ಪ ಅಮ್ಟೂರು ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಉಪಾಧ್ಯಕ್ಷರಾದ ಅಜಿತ್ ಎಮ್. ಧನ್ಯವಾದ ಸಮರ್ಪಿಸಿದರು.


Be the first to comment on "ಕಲ್ಲಡ್ಕ ಶ್ರೀರಾಮ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ 56.74 ಲಕ್ಷ ರೂ ನಿವ್ವಳ ಲಾಭ"