ಎಳೆಯರ ಬಳಗ ರಾಮಲ್ ಕಟ್ಟೆ, ಎಳೆಯರ ಬಳಗ ಮಹಿಳಾ ಮಂಡಳಿ ಹಾಗೂ ಎಳೆಯರ ಬಳಗ ಭಜನಾ ಮಂಡಳಿಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ 2ನೇ ವರ್ಷದ ಭಜನೆದ ವೊಟ್ಟಿಗೆ – ಆಟಿದ ನೆಂಪು ಕಾರ್ಯಕ್ರಮದಲ್ಲಿ ಊರಿನ ಶಿಕ್ಷಕರನ್ನು ಸನ್ಮಾನಿಸಲಾಯಿತು.

ದೀಪ ಪ್ರಜ್ವಲನೆಯನ್ನು ವಸಂತಿ ಸುರೇಶ್, ನೊಣಯ್ಯ ಪೂಜಾರಿ ರಾಮಲ್ ಕಟ್ಟೆ, ಶೇಖರ್ ಭಂಡಾರಿ ಹಾಗೂ ಭಜನಾ ಮಂಡಳಿಯ ಸಂಚಾಲಕರಾದ ಸಂತೋಷ್ ಕುಮಾರ್ ರಾಮಲ್ ಕಟ್ಟೆ ಧೂಮ ವಳವೂರು, ನವೀನ್ ರಾಮಲ್ ಕಟ್ಟೆ, ಅನಿಲ್ ರಾಮಲ್ ಕಟ್ಟೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಅಶ್ವಿನಿ ಜಯಪ್ರಕಾಶ್, ರಮಣಿ ಮೋಹನ್,ಯೋಗಿನಿ ಪ್ರವೀಣ್, ಕುಮಾರಿ ಸೌಮ್ಯ ಹಾಗೂ ಧನಶ್ರೀ ಪುಷ್ಪರಾಜ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಅಧ್ಯಕ್ಷತೆಯನ್ನು ಎಸ್.ವಿ.ಎಸ್. ಟೆಂಪಲ್ ಸ್ಕೂಲ್ನ ಮುಖ್ಯೋಪಾಧ್ಯಾಯರಾದ ರೋಶನಿ ತಾರಾ ಡಿಸೋಜ ವಹಿಸಿದ್ದರು. ಮಕ್ಕಳಲ್ಲಿ ಚಿಕ್ಕ ವಯಸ್ಸಿನಿಂದಲೇ ಶಿಸ್ತು, ಸಂಯಮ ಹಾಗೂ ಉತ್ತಮ ಮೌಲ್ಯಗಳನ್ನು ಬೆಳೆಸುವ ಅಗತ್ಯವನ್ನು ತಿಳಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿಸಾರ್ ಅಹ್ಮದ್ ತುಂಬೆ, ಪ್ರಕಾಶ್ ಆಚಾರ್ಯ ರಾಮಲ್ ಕಟ್ಟೆ ಮಾತನಾಡಿದರು.

ಎಳೆಯರ ಬಳಗದ ಅಧ್ಯಕ್ಷರಾದ ಪೂಜೇಶ್ ರಾಮಲ್ ಕಟ್ಟೆ, ಪ್ರಧಾನ ಕಾರ್ಯದರ್ಶಿ ವಸಂತ ಅಮೀನ್ ಗಾಣದ ಕೊಟ್ಯ, ಮಹಿಳಾ ಮಂಡಳಿ ಅಧ್ಯಕ್ಷರಾದ ವಸಂತಿ ವಸಂತ, ಕ್ಷೇತ್ರದ ಅರ್ಚಕರಾದ ಗುರುಪ್ರಸಾದ್ ಆಚಾರ್ಯ ಹಾಗೂ ಊರಿನ ಹಿರಿಯರಾದ ಗಂಗಾಧರ ಅಮೀನ್ ಗಾಣದ ಕೊಟ್ಯ ಮತ್ತು ಪದ್ಮನಾಭ ಬೆಳ್ಚಡ ಕಲ್ಲಗುಡ್ಡೆ ಉಪಸ್ಥಿತರಿದ್ದರು.
ತ್ರಿಷಾ ಸತೀಶ್ ಸ್ವಾಗತಿಸಿ, ನಿಶಿಕಾ ಸುಶೀಲ್ ಪ್ರಸ್ತಾವಿಕ ಭಾಷಣ ಮಾಡಿದರು. ಹರ್ಷಿತಾ ಹರೀಶ್ ಅತಿಥಿಗಳ ಸನ್ಮಾನ ಹಾಗೂ ನುಡಿ ನಮನವನ್ನು ನಿರ್ವಹಿಸಿದರು. ಖುಷಿ ತಿಲಕ್ ಧನ್ಯವಾದ ಸಮರ್ಪಿಸಿದರು. ಮಲ್ಲಿಕಾ ಧನಂಜಯ್ ಕಾರ್ಯಕ್ರಮ ನಿರೂಪಿಸಿದರು.


Be the first to comment on "ರಾಮಲ್ ಕಟ್ಟೆ: ಎಳೆಯರ ಬಳಗ ಅಶ್ರಯದಲ್ಲಿ ಭಜನೆದ ವೊಟ್ಟಿಗೆ ಆಟಿದ ನೆಂಪು"