ಗಾನ ನೃತ್ಯ ಅಕಾಡೆಮಿ ಪ್ರಸ್ತುತಿಯಲ್ಲಿ ಏಪ್ರಿಲ್ 26ರಂದು ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ಗುರು ವಿದ್ಯಾಶ್ರೀ ರಾಧಾಕೃಷ್ಣ ಅವರ ಶಿಷ್ಯೆಯರಾದ ನಿವೇದಿತಾ ಕಾರಂತ ಮತ್ತು ಶಮಿತಾ ಕಾರಂತ ಅವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ ನಡೆಯಲಿದೆ.

ದೀಪಪ್ರಜ್ವಲನವನ್ನು ಸುರತ್ಕಲ್ ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿ ನಿರ್ದೇಶಕ ಕಲಾಶ್ರೀ ಗುರು ಚಂದ್ರಶೇಖರ ನಾವಡ ಮಾಡಲಿದ್ದಾರೆ. ಪುತ್ತೂರು ವಿಶ್ವ ಕಲಾ ನಿಕೇತನ ನಿರ್ದೇಶಕರಾದ ವಿದುಷಿ ನಯನಾ ವಿ. ರೈ ಕುದ್ಕಾಡಿ ಉಪಸ್ಥಿತರಿರುವರು. ಹಿಮ್ಮೇಳದಲ್ಲಿ ನಟುವಾಂಗದಲ್ಲಿ ಗುರು ವಿದ್ಯಾಶ್ರೀ ರಾಧಾಕೃಷ್ಣ, ಹಾಡುಗಾರಿಕೆಯಲ್ಲಿ ಚೆನ್ನೈನ ವಿದ್ವಾನ್ ಶ್ರೀಕಾಂತ್ ಗೋಪಾಲಕೃಷ್ಣನ್ , ಮೃದಂಗದಲ್ಲಿ ವಿದ್ವಾನ್ ವಿನಯ್ ನಾಗರಾಜನ್, ವೀಣೆಯಲ್ಲಿ ವಿದ್ವಾನ್ ಸೌಂದರ ರಾಜನ್, ಕೊಳಲಿನಲ್ಲಿ ವಿದ್ವಾನ್ ರಘುನಂದನ್ ಭಾಗವಹಿಸುವರು.
ಕಲ್ಲಡ್ಕದ ನಿವೃತ್ತ ಮುಖ್ಯೋಪಾಧ್ಯಾಯರಾದ ರಮೇಶ್ ಎನ್ ಹಾಗೂ ನಿವೃತ್ತ ಅಧ್ಯಾಪಕಿ ವರಮಹಾಲಕ್ಷ್ಮೀ ದಂಪತಿ ಪುತ್ರಿಯರಾದ ನಿವೇದಿತಾ ಕಾರಂತ ಮತ್ತು ಶಮಿತಾ ಕಾರಂತ ಸಹೋದರಿಯರು ಬಾಲ್ಯದಲ್ಲಿ ವಿದುಷಿ ನಯನ ಸತ್ಯನಾರಾಯಣ ಅವರಲ್ಲಿ ಭರತನಾಟ್ಯ ಅಭ್ಯಾಸ ಪ್ರಾರಂಭಿಸಿ ಸೀನಿಯರ್ ಹಂತದ ಪರೀಕ್ಷೆ ಪೂರೈಸಿದ್ದಾರೆ. ಮಂಗಳೂರಿನಲ್ಲಿ ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಅವರಲ್ಲಿ ಭರತನಾಟ್ಯ ಅಭ್ಯಾಸ ಮುಂದುವರಿಸಿದ್ದು, ಶಮಿತಾ ಕಾರಂತ್ ವಿದ್ವತ್ ಪೂರ್ವ ಪರೀಕ್ಷೆಯಲ್ಲಿ ಮಂಗಳೂರು ಕೇಂದ್ರಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ.



Be the first to comment on "ಏ.26ರಂದು ನಿವೇದಿತಾ ಕಾರಂತ, ಶಮಿತಾ ಕಾರಂತ ಭರತನಾಟ್ಯ ರಂಗಪ್ರವೇಶ"