NHAI – ಕೆಸರಾಯಿತು ಹೆದ್ದಾರಿ, ಈಗ ಕಲ್ಲಡ್ಕದ ಕಾಂಕ್ರೀಟ್ ರಸ್ತೆಯಲ್ಲೂ ಕೆಸರು

ಕಳೆದ ಮೂರು ದಿನಗಳಿಂದ ದಿನರಾತ್ರಿ ಎನ್ನದೆ, ಮಳೆ ಸುರಿಯುತ್ತಿರುವ ಕಾರಣ ಹೆದ್ದಾರಿ ಸಂಪೂರ್ಣ ಕೆಸರುಮಯವಾಗಿದೆ.ಇದರ ಪರಿಣಾಮ ಬಂಟ್ವಾಳ ತಾಲೂಕಿನ ಹಲವು ರಸ್ತೆಗಳು ತನ್ನ ನಿಜರೂಪ ಪ್ರದರ್ಶಿಸಿವೆ. ಪ್ರಮುಖ ನಗರಗಳನ್ನು ಹಾದುಹೋಗುವ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಿ.ಸಿ.ರೋಡ್ ನಿಂದ ಮಾಣಿವರೆಗಿನ ಸ್ಥಿತಿ ಹದಗೆಟ್ಟಿದೆ.

PHOTO: VARUN KALLADKA

ಅದರಲ್ಲೂ ಬೋಳಂಗಡಿಯಿಂದ ಕಲ್ಲಡ್ಕದವರೆಗಿನ ರಸ್ತೆ ಪರಿಸ್ಥಿತಿ ಕೇಳುವುದೇ ಬೇಡ. ಹಾಕಿದ ಡಾಂಬರು ಕರಗಿದೆ. ಹೊಂಡಗಳು ಎದ್ದು ಕಾಣಿಸುತ್ತಿವೆ. ಸರ್ವೀಸ್ ರಸ್ತೆ ಮಾಯವಾಗಿದೆ. ಎದ್ದುಬಿದ್ದು ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

PHOTO: VARUN KALLADKA

ಬಿ.ಸಿ.ರೋಡ್ ನಿಂದ ಅಡ್ಡಹೊಳೆವರೆಗೆ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದ್ದು, ಬೋಳಂಗಡಿಯಿಂದ ನರಹರಿ ಪರ್ವತದ ಭಾಗ ಹಾಗೂ ಅಲ್ಲಿಂದ ಸ್ವಲ್ಪ ಮುಂದೆ ಫ್ಲೈಓವರ್ ಆರಂಭವಾಗುವ ಜಾಗದವರೆಗೆ ರಸ್ತೆ ಕೆಸರುಮಯವಾಗಿದ್ದು ಹೊಂಡಗಳಿಂದ ಕೂಡಿದೆ. ವಾಹನಗಳು ಆ ಭಾಗದಲ್ಲಿ ಓವರ್ ಟೇಕ್ ಮಾಡಬಾರದು ಎಂದಿದ್ದರೂ ಕೆಲವೊಂದು ವಾಹನಗಳು ನಿಯಮ ಉಲ್ಲಂಘಿಸಿ ಸಂಚರಿಸುವ ಕಾರಣ ವಾಹನದಟ್ಟಣೆಯಾಗುತ್ತಿದೆ. ಇನ್ನು ಮುಂದೆ ಸಾಗಿದರೆ, ಫ್ಲೈಓವರ್ ಪಕ್ಕದ ಸರ್ವೀಸ್ ರಸ್ತೆ ಸುಮಾರು ಐನೂರು ಮೀಟರ್ ನಷ್ಟು ಸಂಪೂರ್ಣ ಹಾಳಾಗಿ, ಹೊಂಡಗುಂಡಿಗಳಿಂದ ಕೂಡಿದೆ.

PHOTO: VARUN KALLADKA

ಮೇಲ್ನೋಟಕ್ಕೆ ಪೂರ್ಣಗೊಂಡಂತೆ ಕಂಡರೂ ಕಲ್ಲಡ್ಕದ 2.1 ಕಿ.ಮೀ. ಉದ್ದದ ಫ್ಲೈಓವರ್ ನಲ್ಲಿ ಸುರಕ್ಷಿತವಾಗಿ ಓಡಾಡಬೇಕು ಎಂದಿದ್ದರೆ, ಇನ್ನಷ್ಟು ಕೆಲಗಳು ಪೂರ್ಣಗೊಳ್ಳಬೇಕು. ನಿರ್ಮಾಣ ಕಂಪನಿಯ ಇಂಜಿನಿಯರುಗಳು ಹೇಳುವ ಪ್ರಕಾರ, ಒಂದು ಪಾರ್ಶ್ವದಲ್ಲಿ ವಾಹನಗಳನ್ನು ಪ್ರಾಯೋಗಿಕವಾಗಿ ಸಂಚಾರಕ್ಕೆ ಕೆಲ ದಿನಗಳಲ್ಲಿ ಬಿಡುವ ಸಾಧ್ಯತೆ ಇದೆ. ಕಲ್ಲಡ್ಕದಲ್ಲಿ ವಾಹನದಟ್ಟಣೆ ಉಂಟಾಗುವುದು ಸಾಮಾನ್ಯ ಎಂಬಂತಾಗಿದೆ.

 

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "NHAI – ಕೆಸರಾಯಿತು ಹೆದ್ದಾರಿ, ಈಗ ಕಲ್ಲಡ್ಕದ ಕಾಂಕ್ರೀಟ್ ರಸ್ತೆಯಲ್ಲೂ ಕೆಸರು"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*