ಆಗಸ್ಟ್ 13ರಂದು ವಿಟ್ಲ ಯಕ್ಷೋತ್ಸವ: ಯಕ್ಷಗಾನ ರಸದೌತಣ, ಸನ್ಮಾನ ಸಮಾರಂಭ

ವಿಟ್ಲದ ಜೇಸಿ ಪೆವಿಲಿಯನ್ ಸಭಾಂಗಣ, ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಗಸ್ಟ್ 13ರ ಭಾನುವಾರ  ಯಕ್ಷಮಿತ್ರರು ವಿಟ್ಲ ವಾಟ್ಸಾಪ್ ಬಳಗ ಸಹಯೋಗದೊಂದಿಗೆ ಸ್ವಾತಂತ್ರ್ಯೋತ್ಸವ ಪ್ರಯುಕ್ತ ವಿಟ್ಲ ಯಕ್ಷೋತ್ಸವ ಕಾರ್ಯಕ್ರಮ ನಡೆಯಲಿದೆ.

ಜಾಹೀರಾತು

ಅಪರಾಹ್ನ 1.30ರಿಂದ ವಾಚಿಕೋತ್ಸವ – ಅರುಣಾಸುರ, ಬೃಹಸ್ಪತಿ, ಅರ್ಜುನ – ಊರ್ವಶಿ, ಈಶ್ವರ – ಹನುಮಂತ (ತೆಂಕು ಬಡಗು ದ್ವಂದ್ವ ಭಾಗವತಿಕೆಯೊಂದಿಗೆ) ನಡೆಯಲಿದೆ. ಸತೀಶ್ ಪುಣಿಂಚಿತ್ತಾಯ, ಸತ್ಯನಾರಾಯಣ ಪುಣಿಂಚಿತ್ತಾಯ, ಸುರೇಶ್ ಶೆಟ್ಟಿ, ಗಣೇಶ್ ಕುಮಾರ್ ಹೆಬ್ರಿ, ಮಹೇಶ್ ಕನ್ಯಾಡಿ ಭಾಗವತರಾಗಿ ಭಾಗವಹಿಸಲಿದ್ದು, ಅರ್ಥಧಾರಿಗಳಾಗಿ ಶಂಭು ಶರ್ಮ ವಿಟ್ಲ, ರಾಧಾಕೃಷ್ಣ ಕಲ್ಚಾರ್, ಸುಣ್ಣಂಬಳ ವಿಶ್ವೇಶ್ವರ ಭಟ್, ವಾಸುದೇವ ರಂಗ ಭಟ್, ಗಣಪತಿ ಭಟ್ ಸಂಕದಗುಂಡಿ, ಗಣೇಶ್ ಶೆಟ್ಟಿ ಕನ್ನಡಿಕಟ್ಟೆ ಭಾಗವಹಿಸುವರು.

ಸಂಜೆ ತುಳು ಕಲೋತ್ಸವದಲ್ಲಿ ಕಾಡಮಲ್ಲಿಗೆ ಪ್ರಸಂಗ ಪ್ರದರ್ಶನಗೊಳ್ಳಲಿದೆ. ರವಿಚಂದ್ರ ಕನ್ನಡಿಕಟ್ಟೆ, ಶಿವಪ್ರಸಾದ್ ಎಡಪದವು ಭಾಗವತಿಕೆ ಇರಲಿದ್ದು, ಅಶೋಕ್ ಶೆಟ್ಟಿ ಸಹಿತ ಪ್ರಮುಖರು ಪಾತ್ರವರ್ಗದಲ್ಲಿದ್ದಾರೆ.

ಉತ್ಸವದ ಗೌರವಾರ್ಪಣೆಯಾಗಿ, ಕಲಾಪೋಷಕ ಗೌರವ ಪುರಸ್ಕಾರವನ್ನು ದಿನಕರ ಭಟ್ ಅವರಿಗೆ ನೀಡಲಾಗುವುದು. ಹುಟ್ಟೂರ ಗೌರವ ಪುರಸ್ಕಾರವನ್ನು ಹಿರಿಯ ಅರ್ಥಧಾರಿ ಶಂಭು ಶರ್ಮ ವಿಟ್ಲ ಅವರಿಗೆ ನೀಡಲಾಗುವುದು. ಗೌರವ ಪುರಸ್ಕಾರವನ್ನು ಹವ್ಯಾಸಿ ಹಿಮ್ಮೇಳ ವಾದಕ ಪಿ.ಬಿ.ಜಗನ್ನಿವಾಸ ರಾವ್ ಮತ್ತು ರಾಜ್ಯೋತ್ಸವ ರಾಜ್ಯ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ಸರಪಾಡಿ ಅಶೋಕ ಶೆಟ್ಟಿ ಅವರಿಗೆ ನೀಡಲಾಗುವುದು. ಇತ್ತೀಚೆಗೆ ನಮ್ಮನ್ನಗಲಿದ ಕಲಾವಿದ ದಿ.ಜಗದೀಶ ನಲ್ಕ ಕುಟುಂಬಕ್ಕೆ ಯಕ್ಷ ಸಾಂತ್ವನ ನಿಧಿ ಸಮರ್ಪಿಸಲಾಗುವುದು.ಧನಸಹಾಯಕ್ಕೆ 9740669531 ನಂಬರ್ ಗೆ ಗೂಗಲ್ ಪೇ ಅಥವಾ ಫೊನ್ ಪೇ ಮಾಡಬಹುದು ಎಂದು ಕಾರ್ಯಕ್ರಮ ಸಂಯೋಜಕ ಮುರಾರಿ ಭಟ್ ಪಂಜಿಗದ್ದೆ ಹೇಳಿದ್ದಾರೆ.

ಜಾಹೀರಾತು

ಚಿತ್ರ: ಅಶ್ವಿತ್ ಶೆಟ್ಟಿ

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಆಗಸ್ಟ್ 13ರಂದು ವಿಟ್ಲ ಯಕ್ಷೋತ್ಸವ: ಯಕ್ಷಗಾನ ರಸದೌತಣ, ಸನ್ಮಾನ ಸಮಾರಂಭ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*