ಮಹಾತ್ಮಾ ಗಾಂಧೀಜಿ ತತ್ವ ಪ್ರಸಾರ: ಬದಲಾವಣೆ ನಮ್ಮಿಂದಲೇ ಎಂದ ಕಾನತ್ತಡ್ಕದ ಶಾಲಾ ವಿದ್ಯಾರ್ಥಿಗಳು

ಜಾಹೀರಾತು

ಮಹಾತ್ಮಾ ಗಾಂಧೀಜಿ ಹೇಳಿದ ಸುಮಾರು ಹತ್ತು ಸಂದೇಶಗಳನ್ನು ಬರೆದ ಕರಪತ್ರಗಳನ್ನು ಮನೆ ಮನೆಗೆ ಹಂಚಿ ಗಮನ ಸೆಳೆದವರು ಬಂಟ್ವಾಳ ತಾಲೂಕು ಅಳಿಕೆ ಗ್ರಾಮದ ಕಾನತ್ತಡ್ಕದ ಶ್ರೀಕೃಷ್ಣ ವಿದ್ಯೋದಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು.

ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆಯನ್ನು ಮಾಡಿದ ಸಾಹಿತಿ, ಶಾಲೆ ಸಲಹೆಗಾರ ಭಾಸ್ಕರ ಅಡ್ವಳ ಅವರ ಮಾರ್ಗದರ್ಶನದಲ್ಲಿ ಜನವರಿ 16ರಂದು ಗಾಂಧೀಜಿ ಸ್ಮರಣೆ ಪಕ್ಷಾಚರಣೆ ಆರಂಭಗೊಂಡಿತು. ಅದರ ಅಂಗವಾಗಿ ಮಕ್ಕಳು ಶಾಲೆಯಲ್ಲಿ ನಡೆದ ನಾನಾ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಪಡೆದುಕೊಂಡದ್ದಲ್ಲದೆ, ಪರಿಸರದ ಮನೆ ಮನೆಗಳಿಗೆ ಗಾಂಧೀಜಿ ಸಂದೇಶವಿರುವ ಕರಪತ್ರಗಳನ್ನು ನೀಡುವುದರ ಮೂಲಕ ಗಾಂಧೀಜಿ ಸಂದೇಶವನ್ನು ಜನರಿಗೆ ಮತ್ತೆ ನೆನಪಿಸಿದರು.

ಜಾಹೀರಾತು

ಈ ಸಂದರ್ಭ ಹದಿನೈದು ದಿನಗಳ ಕಾಲ ನಡೆದ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಪ್ರತಿದಿನ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ್ದಷ್ಟೇ ಅಲ್ಲ, ಪುಸ್ತಕಗಳನ್ನು ಓದುವುದು, ಸಂದೇಶಗಳ ಅರ್ಥ, ಮಾಹಿತಿಯನ್ನು ಪಡೆದುಕೊಳ್ಳುವುದು, ಗಾಂಧೀಜಿ ಚಿತ್ರ ಬಿಡಿಸುವುದು, ಆತ್ಮಕಥನದ ಅನುಭವಗಳನ್ನು ಹಂಚಿಕೊಳ್ಳುವುದು, ಚಿತ್ರಪ್ರದರ್ಶನ, ಮೌಲ್ಯಗಳನ್ನು ಅರಿಯುವುದು ಸಹಿತ ಮಹಾತ್ಮಾ ಗಾಂಧೀಜಿ ಜೀವನಪದ್ಧತಿಯನ್ನು ಅರಿತರು. ಗಾಂಧೀ ಸ್ಮರಣೆ ಕುರಿತ ಗೀತೆಗಳನ್ನು ಹಾಡಿದರು. ಇವುಗಳೊಂದಿಗೆ ನೆರೆಕರೆಗೆ ಗಾಂಧೀಜಿ ಸಂದೇಶವನ್ನು ಹೊತ್ತುಕೊಂಡು ಹೋಗುವ ಕಾರ್ಯವನ್ನು ಮಾಡುವುದರ ಮೂಲಕ ಊರವರ ಕುತೂಹಲಕ್ಕೂ ಕಾರಣರಾದರು.

ನಮ್ಮ ಶಾಲೆಗೆ 78 ವರ್ಷಗಳ ಇತಿಹಾಸವಿದ್ದು, ಮಕ್ಕಳ ಸಂಖ್ಯೆ ಕಡಿಮೆಯಾದರೂ ಗುಣಮಟ್ಟದ ಶಿಕ್ಷಣ ಪಡೆಯುತ್ತಿದ್ದಾರೆ. ನೈತಿಕವಾಗಿ ಮಕ್ಕಳಿಗೆ ಮೌಲ್ಯಗಳ ಅರಿವು ಆಗಬೇಕು  ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ  ಹುಸೈನ್ ಸಹಿತ ಹೆತ್ತವರು ಪ್ರೋತ್ಸಾಹ ನೀಡುತ್ತಿದ್ದಾರೆ ಎನ್ನುತ್ತಾರೆ ಶಿಕ್ಷಕ ಸುಂದರ ಭಟ್ ಕಾನ

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಮಹಾತ್ಮಾ ಗಾಂಧೀಜಿ ತತ್ವ ಪ್ರಸಾರ: ಬದಲಾವಣೆ ನಮ್ಮಿಂದಲೇ ಎಂದ ಕಾನತ್ತಡ್ಕದ ಶಾಲಾ ವಿದ್ಯಾರ್ಥಿಗಳು"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*