ಜಾಹೀರಾತು
ಖ್ಯಾತ ಯಕ್ಷಗಾನ ಕಲಾವಿದ, ಸುರತ್ಕಲ್ ಕ್ಷೇತ್ರ ಮಾಜಿ ಶಾಸಕ, ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ, ಪ್ರಾಸಬದ್ಧ ಮಾತುಗಳ ಮೂಲಕ ತೆಂಕುತಿಟ್ಟು ಯಕ್ಷಗಾನ ಅಭಿಮಾನಿಗಳ ಮನೆಮಾತಾಗಿದ್ದ ಕುಂಬಳೆ ಸುಂದರ ರಾವ್ (88) ಬುಧವಾರ ನಿಧನ ಹೊಂದಿದರು.
ಸುದೀರ್ಘ ಕಾಲ ಧರ್ಮಸ್ಥಳ ಮೇಳದಲ್ಲಿ ಕಲಾವಿದರಾಗಿದ್ದ ಅವರು ತಾಳಮದ್ದಳೆ ಕೂಟಗಳಲ್ಲೂ ಜನಪ್ರಿಯರಾಗಿದ್ದರು. ಹಿಂದೆ ಕ್ಯಾಸೆಟ್ ಗಳ ಮೂಲಕ ಟೇಪ್ ರೆಕಾರ್ಡರ್ ಗಳಲ್ಲಿ ಯಕ್ಷಗಾನ ಮನೆ ಮನೆಗಳಲ್ಲಿ ಕೇಳಿಬರುತ್ತಿದ್ದ ಸಂದರ್ಭ ಕುಂಬಳೆ ಸುಂದರ ರಾವ್ ಧ್ವನಿ ಇದ್ದೇ ಇರುತ್ತಿತ್ತು. ಹಲವು ಪ್ರಶಸ್ತಿ ಸನ್ಮಾನಗಳು ಅವರಿಗೆ ಸಂದಿವೆ. ಇಬ್ಬರು ಪುತ್ರರು, ಮೂವರು ಪುತ್ರಿಯರನ್ನು ಅವರು ಅಗಲಿದ್ದಾರೆ.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಮಾತಿನ ಮೂಲಕವೇ ಪ್ರೇಕ್ಷಕರ ಮನಸೆಳೆದ ಹಿರಿಯ ಯಕ್ಷಗಾನ ಕಲಾವಿದ ಕುಂಬಳೆ ಸುಂದರ ರಾವ್ ಇನ್ನಿಲ್ಲ"