![This image has an empty alt attribute; its file name is WhatsApp-Image-2022-05-12-at-1.21.08-PM-723x1024.jpeg](https://i0.wp.com/bantwalnews.com/wp-content/uploads/2022/05/WhatsApp-Image-2022-05-12-at-1.21.08-PM.jpeg?resize=723%2C1024&ssl=1)
![This image has an empty alt attribute; its file name is Bantwalnews-ad3.png](https://i0.wp.com/bantwalnews.com/wp-content/uploads/2016/10/Bantwalnews-ad3.png?ssl=1)
![This image has an empty alt attribute; its file name is Bantwalnews-ad4.png](https://i0.wp.com/bantwalnews.com/wp-content/uploads/2016/10/Bantwalnews-ad4.png?ssl=1)
![](https://i0.wp.com/bantwalnews.com/wp-content/uploads/2022/06/Todays-news-8.jpg?resize=1024%2C766&ssl=1)
ಬಂಟ್ವಾಳ: ಬೋಳಂತೂರಿನ ದ.ಕ.ಜಿಪಂ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಎಲ್.ಕೆ.ಜಿ., ಯು.ಕೆ.ಜಿ. ತರಗತಿ ಉದ್ಘಾಟನೆ ಮತ್ತು ಪುಸ್ತಕ ವಿತರಣೆ ಕಾರ್ಯಕ್ರಮ ನಡೆಯಿತು.
ಈ ಹಿನ್ನೆಲೆಯಲ್ಲಿ ಹಳೆ ವಿದ್ಯಾರ್ಥಿಗಳು ಒಟ್ಟಾಗಿ ಹೊಸ ಕೊಠಡಿಗಳಿಗೆ ಚಿತ್ರ ಬರೆಯುವ ಮೂಲಕ ಸಹಕರಿಸಿದರು. ಅಧ್ಯಕ್ಷತೆಯನ್ನು ಗ್ರಾಪಂ ಮಾಜಿ ಅಧ್ಯಕ್ಷ ಚಂದ್ರಶೇಖರ ರೈ ನಾರ್ಶ ವಹಿಸಿದ್ದರು. ತರಗತಿಯನ್ನು ಅನಂತಪದ್ಮನಾಭ ಬಳ್ಳಕರಾಯ ಮತ್ತು ಇಸ್ಮಾಯಿಲ್ ಉದ್ಘಾಟಿಸಿದರು.
ಮುಖ್ಯ ಶಿಕ್ಷಕಿ ಗೀತಾ ಎಸ್. ಶಾಲಾಭಿವೃದ್ಧಿ ಕುರಿತ ಮಾಹಿತಿ ನೀಡಿದರು. ಹಿರಿಯರಾದ ಕೇಶವಯ್ಯ ಎಸ್, ಸುರೇಶಿನಿ, ಇಸ್ಮಾಯಿಲ್, ಸಂದೇಶ್.ಎಚ್.ನಾಯ್ಕ್, ಅವರನ್ನು ಸನ್ಮಾನಿಸಲಾಯಿತು. ಉಚಿತ ನೋಟ್ ಪುಸ್ತಕಗಳನ್ನು ಉದ್ಯಮಿ ಬಶೀರ್ ಆಹ್ಮದ್ ಶಾಲೀಮರ್ ಅವರು ನೀಡಿ ಸಹಕರಿಸಿದರು. ಬೋಳಂತೂರು ಪರಿಸರದ ಬಿ.ಕೆ. ಬಾಯ್ಸ್ ಬಂಗಾರ ಕೋಡಿ, ವತಿಯಿಂದ ಶಾಲೆಗೆ ಕಂಪ್ಯೂಟರ್ ಕೊಡುಗೆ ನೀಡಲಾಯಿತು. ಶಾಲಾಭಿವೃದ್ಧಿ ಸಮಿತಿ ಗೌರವಾಧ್ಯಕ್ಷರಾದ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಆಬ್ಬಾಸ್ ಆಲಿ, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಬಶೀರ್ ನಾರಂಕೋಡಿ, ಬೋಳಂತೂರು ಗ್ರಾಮ.ಪಂಚಾಯತ್ ಅಭಿವೃದ್ದಿ ಅಧಿಕಾರಿ ಪುಷ್ಪ.ಎಂ, ಬೊಳಂತೂರು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಚಂದ್ರಶೇಖರ್ ರೈ ನಾರ್ಶ, ಅಶ್ರಪ್ ಸುರಿಬೈಲ್, ಯಾಕೂಬ್ ದಂಡೆಮಾರ್, ಹಳೆ ವಿದ್ಯಾರ್ಥಿ ಹಾಗೂ ಸಾಮಾಜಿಕ ಮುಖಂಡ ಜಯರಾಮ್ ರೈ ಗುಡ್ಡೆಮಾರ್, ಹಳೆ ವಿದ್ಯಾರ್ಥಿ ಸಂಘದ ನೂತನ ಅದ್ಯಕ್ಷರಾದ ತಮೀಮ್ ಬೊಳಂತೂರು, ಇಸ್ಮಾಯಿಲ್ ಬೊಳಂತೂರು, ಉಸ್ಮಾನ್ ಬಂಗಾರಕೋಡಿ , ಮಹಮ್ಮದ್ ಮಾಡದ ಬಳಿ, ಅಮೀನ್ ಬೀಡಿ ಮಾಲಕರಾದ ಸುರೇಂದ್ರ ಅಮೀನ್, ಪವಿತ್ರ ಬೀಡಿ ಮಾಲಕ ರಪೀಕ್.ಕೆ.ಪಿ.ಬೈಲ್, ಯುವ ಉದ್ಯಮಿ ಸಲೀಂ ಕುಡುಂಬಕೋಡಿ, ಸಲೀಂ, ಶಫೀಕ್ ಬೊಟ್ಟಿಗದ್ದೆ, ಹಸೈನಾರ್ ಟಿ.ತಾಳಿತ್ತನೂಜಿ, ಆವೀರ್ ಹಾಗೂ ರವಿ ಇನ್ನಿತರರು ಉಪಸ್ಥಿತರಿದ್ದರು. ಜಾತಿ-ಮತ ಬೇದವಿಲ್ಲದೆ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘಟಿತ ಒಗ್ಗೂಡಿಕೆ ಕಾರ್ಯಕ್ರಮದ ಯಶಸ್ವಿಗೆ ಕಾರಣವಾಯಿತು. ದೈಹಿಕ ಶಿಕ್ಷಕ ಹರೀಶ್ ವಿ ಸ್ವಾಗತಿಸಿದರು, ಹಮೀದ್ ಗೋಳ್ತಮಜಲ್ ನಿರೂಪಿಸಿದರು, ಶಿಕ್ಷಕಿ ಉಷಾ ಧನ್ಯವಾದ ಸಲ್ಲಿಸಿದರು.
![](https://i0.wp.com/bantwalnews.com/wp-content/uploads/2019/10/bantwalnews.png?w=400&ssl=1)
Be the first to comment on "ಬೋಳಂತೂರು ಶಾಲೆಯಲ್ಲಿ ಕೆಜಿ ತರಗತಿ ಉದ್ಘಾಟನೆ, ಪುಸ್ತಕ ವಿತರಣೆ"