ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಜನ್ಮ ದಿನದ ಹಾಗೂ ಸೇವಾ ಮತ್ತು ಸಮರ್ಪಣಾ ದಿನದ ಅಂಗವಾಗಿ ಭಾರತೀಯ ಜನತಾ ಪಾರ್ಟಿ 125 ನೇ ವಾರ್ಡ್ ನಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು. ಮಂಡಲ ಪ್ರಾಧಾನ ಕಾರ್ಯದರ್ಶಿಗಳಾದ ಡೊಂಬಯ ಅರಳ ಮಾತನಾಡಿ ಪಂಡಿತ್ ಜಿ ಯವರ ರಾಷ್ಟ್ರ ಸಮರ್ಪಿತ ಬದುಕು ಹಾಗೂ ಆದರ್ಶಗಳನ್ನು ಕಾರ್ಯಕರ್ತರು ಅಳವಡಿಸಿಕೊಳ್ಳಬೇಕೆಂದು ಹೇಳಿದರು. ಬೂತ್ ನ ಆರ್ಥಿಕವಾಗಿ ಹಿಂದುಳಿದ ಕೆಲವೊಂದು ಕುಟುಂಬಗಳಿಗೆ ಪುರಸಭಾ ಸದಸ್ಯರಾದ ವಿದ್ಯಾವತಿ ಪ್ರಮೋದ್ ಕುಮಾರ್ ,ಮಾಜಿ ಪುರಸಭಾ ಸದಸ್ಯ ಗೋಪಾಲ್ ಸುವರ್ಣರವರ ನೇತ್ರತ್ವದಲ್ಲಿ ಆಹಾರ ಸಾಮಗ್ರಿಗಳ ಕಿಟ್ ವಿತರಿಸಲಾಯಿತು.ಇದೇ ಸಂದರ್ಭದಲ್ಲಿ ಗಿಡ ನೆಡಲಾಯಿತು. ಪ್ರಮುಖರಾದ ರಾಜೇಶ್ ಬಿ.ಸಿ ರೋಡ್,ಪ್ರದೀಪ್ ಅಜ್ಜಿಬೆಟ್ಟು, ಶಿವಾನಂದ್ ಶೆಣೈ, ಆಶಿಶ್ ಅಜ್ಜಿಬೆಟ್ಟು, ಮನೋಜ್ ಅಜ್ಜಿಬೆಟ್ಟು, ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಬಿ.ಸಿ.ರೋಡು ಅಜ್ಜಿಬೆಟ್ಟುವಿನಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಹುಟ್ಟುಹಬ್ಬಆಚರಣೆ"