ಒಡಿಯೂರು: ತ್ಯಾಗದ ಬದುಕಿನಲ್ಲಿ ನಿಜವಾದ ಸುಖವಿದೆ. ಆದ್ಯಾತ್ಮದ ಬದುಕಿನಲ್ಲಿ ಶ್ರೆಯಸ್ಸಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು. ತನ್ನ ಜನ್ಮದಿನೋತ್ಸವ ಅಂಗವಾಗಿ ಒಡಿಯೂರಿನ ಸಂಸ್ಥಾನದಲ್ಲಿ ಸರಳವಾಗಿ ನಡೆದ ಪಾದಪೂಜೆಯ ಬಳಿಕ ಆಶೀರ್ವಚನ ನೀಡಿದರು.
ಸಾಧ್ವಿ ಶ್ರೀ ಮಾತಾನಂದಮಯಿ ಪಾದಪೂಜೆ ನೆರವೇರಿಸಿದರು. ಒಡಿಯೂರು ಶ್ರೀ ಷಷ್ಠಬ್ದ ಸಮಿತಿಯ ಪದಾಧಿಕಾರಿಗಳಾದ ವಾಮಯ್ಯ ಶೆಟ್ಟಿ ಮುಂಬೈ, ರೇವತಿ ವಾಮಯ್ಯ ಶೆಟ್ಟಿ, ಕೃಷ್ಣ ಎಲ್ ಶೆಟ್ಟಿ, ಪ್ರಕಾಶ್ ಶೆಟ್ಟಿ ಪೇಟೆಮನೆ, ಎ. ಸುರೇಶ್ ರೈ, ರೋಹಿತ್ ಶೆಟ್ಟಿ ನಗ್ರಿಗುತ್ತು, ಅಜಿತ್ ಕುಮಾರ್ ಪಂದಳಂ, ಅಶೋಕ್ ಕುಮಾರ್ ಬಿಜೈ, ಸರ್ವಾಣಿ ಪಿ.ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶ್ರೀಗಳು ತುಳು ಲಿಪಿಯಲ್ಲಿ ಬರೆದ ಹನುಮಾನ್ ಚಾಲೀಸ್ ಹಾಗೂ ರಾಜಶ್ರೀ ಟಿ ರೈ ಪೆರ್ಲ ಬರೆದ ಮೂಲಿಕಾ ಗಿಡಗಳ ಪರಿಚಯದ ‘ಕಲ್ಪತರು’ ಪುಸ್ತಕವನ್ನು ಬಿಡುಗಡೆಗೊಳಿಸಿದರು. ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.
Be the first to comment on "ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಜನ್ಮದಿನೋತ್ಸವ: ತ್ಯಾಗದ, ಆಧ್ಯಾತ್ಮದ ಬದುಕಿನಲ್ಲಿ ಶ್ರೇಯಸ್ಸು –ಶ್ರೀಗಳು"