ಕೇರಳಕ್ಕೆ ಸಾಗುವ ವಿದ್ಯುತ್ ಲೈನ್ ಗೆ ಕೃಷಿಭೂಮಿ ಕೊಡೋದಿಲ್ಲ – ಬಂಟ್ವಾಳದ ರೈತಸಂಘ ಖಡಕ್ ಎಚ್ಚರಿಕೆ

ಬಂಟ್ವಾಳ: ರಾಜ್ಯ ರೈತ ಸಂಘ ನೇತೃತ್ವದಲ್ಲಿ ಬಂಟ್ವಾಳ ತಾಲೂಕಿನ ಅರಳ, ಪಂಜಿಕಲ್ಲು, ನೀರಪಲ್ಕೆ, ಸೊರ್ನಾಡು, ಲೊರೆಟ್ಟೊ ಸಹಿತ ವಿವಿಧ ಭಾಗಗಳ ರೈತರು ಹಾಗೂ ಕೇರಳಕ್ಕೆ ಉಡುಪಿ ಜಿಲ್ಲೆಯಿಂದ ವಿದ್ಯುತ್ ಲೈನ್ ವಿರುದ್ಧ ಪ್ರತಿಭಟನೆಯನ್ನು ಮಂಗಳವಾರ ನಡೆಸಿದರು. ಸರ್ವೆ ಮಾಡಿದ ಗುರುತುಗಳನ್ನು ಅಗೆದು ತೆಗೆಯಲಾಯಿತು. ಇದೇ ಸಂದರ್ಭ ನಮ್ಮ ಭೂಮಿಯನ್ನು ಯಾರಿಗೂ ಕೊಡುವುದಿಲ್ಲ ಎಂಬ ಘೋಷಣಾ ಫಲಕವನ್ನು ಸೇರಿದ್ದ ರೈತರು ನೆಟ್ಟರು.

ಈ ಸಂದರ್ಭ ಮಾತನಾಡಿದ ರಾಜ್ಯ ರೈತಸಂಘ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ, ಗ್ರಾಮಸ್ಥರಿಗೆ ಯಾವುದೇ ಮಾಹಿತಿ ನೀಡದೆ ಎಲ್ಲಾ ಕಾನೂನುಗಳನ್ನು ಗಾಳಿಗೆ ತೂರಿ ಇಂಥ ದೊಡ್ಡಮಟ್ಟದ 400 ಕೆವಿ ವಿದ್ಯುತ್ ಪ್ರಸರಣ ಲೈನ್ ನ್ನು ಕೃಷಿ ಭೂಮಿಯ ಮೇಲೆ ಹಾದುಹೋಗಲು ಮಾರ್ಕಿಂಗ್ ಮಾಡಿರುವ ಕುರಿತು ಆಕ್ಷೇಪ ವ್ಯಕ್ತಪಡಿಸಿದರು.

ದ.ಕ.ಜಿಲ್ಲಾ ರೈತಸಂಘ ಅಧ್ಯಕ್ಷ ಓಸ್ವಾಲ್ಡ್ ಫೆರ್ನಾಂಡೀಸ್ ಮಾತನಾಡಿ, ಇಂಥ ದೊಡ್ಡ ಮಟ್ಟದ ಯೋಜನೆಗೆ ರೈತರು ಸಂತ್ರಸ್ತರಾಗುವ ವೇಳೆ ಅವರಿಗೆ ಯಾವುದೇ ಮಾಹಿತಿ ನೀಡದೆ ಹೇಗೆ ಜಾರಿ ಮಾಡಲು ಅನುಮತಿ ದೊರಕಿತು ಎಂದು ಪ್ರಶ್ನಿಸಿ, ರೈತರ ಮೇಲೆ ದಬ್ಬಾಳಿಕೆ ನೀತಿಯನ್ನು ಆಳುವ ವರ್ಗ ನಡೆಸುತ್ತಾ ಬಂದಿದೆ ಎಂದರು. ಇಂಥದ್ದು ಮುಂದುವರಿದರೆ ನಮ್ಮ ಪ್ರಾಣವನ್ನೂ ಕೊಡಲು ಲೆಕ್ಕಿಸುವುದಿಲ್ಲ ಎಂದು ಅವರು ಹೇಳಿದರು.

ಜಾಹೀರಾತು

ತಾಲೂಕು ರೈತ ಸಂಘದ ಅಧ್ಯಕ್ಷ ಪ್ರೇಮಾನಾಥ ಶೆಟ್ಟಿ ಬಾಳ್ತಿಲ ಮಾತನಾಡಿ ಟವರ್ ಗಳನ್ನು ಅಳವಡಿಸಲು ಮಾಡಿರುವ ಗುರುತುಗಳನ್ನು  ಕಿತ್ತೆಸೆದು ದೊಡ್ಡ ರೀತಿಯಲ್ಲಿ ಪ್ರತಿಭಟನೆ ನಡೆದಿದೆ ಎಂದರು. ಹೋರಾಟ  ಸಮಿತಿಯ ಸಂಚಾಲಕ ರೊಯ್ ಕಾರ್ಲೊ ಪ್ರತಿಭಟನೆ ಉದ್ದೇಶ ವಿವರಿಸಿದರು. ಕೆ.ಎಚ್. ಖಾದರ್ ಅರಳ, ಕನ್ಸೆಪ್ಟಾ ಡೇಸಾ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಕೇರಳಕ್ಕೆ ಸಾಗುವ ವಿದ್ಯುತ್ ಲೈನ್ ಗೆ ಕೃಷಿಭೂಮಿ ಕೊಡೋದಿಲ್ಲ – ಬಂಟ್ವಾಳದ ರೈತಸಂಘ ಖಡಕ್ ಎಚ್ಚರಿಕೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*