ನಮ್ಮೂರು

ದೀನಬಂಧು ವಾಟ್ಸಾಪ್ ಗ್ರೂಪಿನಿಂದ ಸಮಾಜಸೇವೆ

ಬಂಟ್ವಾಳ ತಾಲೂಕು ಬಡಗ ಬೆಳ್ಳೂರು ಗ್ರಾಮದ ಕೊಳತ್ತಮಜಲು ವಿಷ ಚಿಕಿತ್ಸಕ ಜರ್ನಾಧನ ಎಚ್.ಎಸ್. ಇವರು ತಮ್ಮಸ್ನೇಹಿತರೊಳಗೊಂಡು ಸಮಾನ ಮನಸ್ಕರು ಸೇರಿಕೊಂಡು ಪ್ರಾರಂಭಿಸಿದ ದೀನಬಂಧು ವಾಟ್ಸ್‌ಪ್ ಗ್ರೂಪಿನ ವಾರ್ಷಿಕ ಸಭೆಯು ಶ್ರೀ ಆದಿಶಕ್ತಿ ಚಾಮುಂಡೇಶ್ವರೀ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆಯಿತು.

ಜಾಹೀರಾತು

ಈ ಗ್ರೂಪಿನಲ್ಲಿ ಸೂಮಾರು 115 ಮಂದಿ ಸದಸ್ಯರು ಇದ್ದಾರೆ. ಪ್ರತಿಯೊಬ್ಬರೂ ತಮ್ಮ ತಿಂಗಳ ಉಳಿತಾಯ ಕನಿಷ್ಠ ರೂ.100 ನ್ನು ಒಟ್ಟುಮಾಡಿ ಊರಿನಲ್ಲಿರುವ ಬಡವರಿಗೆ ತಲಾ ರೂಪಾಯಿ 5000 ದಂತೆ ಸಹಾಯ ಮಾಡುತ್ತಾ ಬಂದಿರುತ್ತಾರೆ. ಈವರೆಗೆ ಸುಮಾರು 11  ಮಂದಿಗೆ ತಲಾ ರೂಪಾಯಿ ೫೦೦೦-೦೦ ದಂತೆ ಧನಸಹಾಯವನ್ನುನೀಡಿರುತ್ತಾರೆ. ಇದರಲ್ಲಿ ನಾಲ್ಕುಮಂದಿ ಕ್ಯಾನ್ಸರ್ ಪೀಡಿತರಿಗೆ ಸಹಾಯ ಮಾಡಲಾಯಿತು. ಕಿಡ್ನಿ ವೈಫಲ್ಯ ದಿಂದ ಬಳಲುತ್ತಿರುವ ವ್ಯಕ್ತಿಗೆ, ಪಕ್ಷಪಾತ ರೋಗಿಗೆ ಮತ್ತು ಬಡ ಕುಟುಂಬದ ಹುಡುಗಿ ಮದುವೆಗೆ , ಮರದಿಂದ ಬಿದ್ದು ಕಾಲು ಮುರಿತಕೊಳಗಾದ ವ್ಯಕ್ತಿಗೆ, ನೀರಲ್ಲಿ ಮುಳುಗಿ ಮರಣ ಹೊಂದಿದ ಯುವಕನ ಮನೆಯವರಿಗೆ, ಅಂಗವಿಕಲ ಮತ್ತು ಬುದ್ಧಿ ಮಾಂದ್ಯದಿಂದ ಬಳಲುತ್ತಿರುವ ಮಗುವಿನ ಮನೆಯವರಿಗೆ ಒಂದು ವರ್ಷದ ಅವಧಿಯಲ್ಲಿ ಧನ ಸಹಾಯವನ್ನು ನೀಡಿರುತ್ತಾರೆ.

ಧಾನಿಗಳಿಂದ ಹಣ ಸಂಗ್ರಹಿಸಿ ಅಥವಾ ತಮ್ಮ ಗ್ರೂಪಿನ ಸದಸ್ಯರ ಉಳಿತಾಯ ಹಣವನ್ನು ಸಂಗ್ರಹಿಸಿ ಅದನ್ನು ಬ್ಯಾಂಕಿನಲ್ಲಿ ಇಟ್ಟು ಅದರ ಬಡ್ಡಿಯಿಂದ ಬಡವರಿಗೆ ಧನಸಹಾಯವನ್ನು ಮಾಡುವ ತೀರ್ಮಾನಿಸಲಾಯಿತು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ