ಪರಂಪರೆಯ ಹಿನ್ನೊಟ: ಮನೆತನದ ನೋಟ

ಕಳೆದ ಬಾರಿ ಮಾಂಬಾಡಿ ನಾರಾಯಣ ಭಾಗವತರ ಪುತ್ರಿಯರ ಹಾಗೂ ಅವರ ಮಕ್ಕಳ ಕುರಿತು ಪ್ರಸ್ತಾಪಿಸಲಾಗಿತ್ತು. ಇಲ್ಲಿದೆ ಅವರ ಪುತ್ರರ ವಿವರ:

ಮಾಂಬಾಡಿ ನಾರಾಯಣ ಭಾಗವತರಿಗೆ ನಾಲ್ವರು ಪುತ್ರರು. ಗೋಪಾಲಕೃಷ್ಣ, ಸುಬ್ರಹ್ಮಣ್ಯ, ಗಣಪತಿ ಮತ್ತು ನಾರಾಯಣ. ಇವರಲ್ಲಿ ಸುಬ್ರಹ್ಮಣ್ಯ ಭಟ್ ಯಕ್ಷಗಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಭಾಗವತರ ಪರಂಪರೆಯನ್ನು ಮುಂದುವರಿಸಿದವರು. ಉಳಿದವರು ಬೇರೆ ಉದ್ಯೋಗಗಳನ್ನು ಅರಸಿಕೊಂಡು ವಿವಿಧೆಡೆ ನೆಲೆಸಿದರು. ಆದರೆ ಎಲ್ಲರಿಗೂ ಯಕ್ಷಗಾನದ ಹಿಮ್ಮೇಳದ ನಂಟಿದೆ.

ಜಾಹೀರಾತು

ಗೋಪಾಲಕೃಷ್ಣ ಭಟ್

ಮಾಂಬಾಡಿ ನಾರಾಯಣ ಭಾಗವತರ ಹಿರಿಯ ಪುತ್ರ ಮಾಂಬಾಡಿ ಗೋಪಾಲಕೃಷ್ಣ ಭಟ್. ಇವರಿಗೀಗ 71 ವರ್ಷ. ಹಿಂದಿನ ಕೆಇಬಿಯಲ್ಲಿ ಎಂಜಿನಿಯರ್ ಆಗಿ ಕೆಲಸ ನಿರ್ವಹಿಸಿ ವಿವಿಧೆಡೆ ಕಾರ್ಯನಿರ್ವಹಿಸಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಆಗಿ ನಿವೃತ್ತರಾದವರು. ಯುವಕರಾಗಿದ್ದಾಗ ಹವ್ಯಾಸಿಯಾಗಿ ತಾಳಮದ್ದಳೆ ಕೂಟಗಳಲ್ಲಿ ಭಾಗವಹಿಸಿದ್ದರು. ಪತ್ನಿ ಮನೋರಮಾ. ಇವರಿಗೆ ಇಬ್ಬರು ಪುತ್ರರು. ಹರೀಶ ಮಾಂಬಾಡಿ ಪತ್ರಕರ್ತ. ಅಶೋಕ ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಇಂಜಿನಿಯರ್. ಇಬ್ಬರೂ ವಿವಾಹಿತರು. ಹರೀಶ ಅವರಿಗೆ ಇಬ್ಬರು ಹೆಣ್ಣುಮಕ್ಕಳು. ಅಶೋಕ ಅವರಿಗೆ ಓರ್ವ ಪುತ್ರಿ. ಎಲ್ಲರೂ ಯಕ್ಷಗಾನ ಆಸಕ್ತರು. ಆದರೆ ವೃತ್ತಿಯಾಗಿ ಕ್ಷೇತ್ರದಲ್ಲಿಲ್ಲ. ಗೋಪಾಲಕೃಷ್ಣ ಭಟ್ ಅವರು ಬಿ.ಸಿ.ರೋಡಿನಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ.

ಸುಬ್ರಹ್ಮಣ್ಯ ಭಟ್

ಮಾಂಬಾಡಿ ನಾರಾಯಣ ಭಾಗವತರ ಎರಡನೇ ಪುತ್ರ ಸುಬ್ರಹ್ಮಣ್ಯ ಭಟ್ ಅವರಿಗೆ 69ರ ಹರೆಯ. ಸುಮಾರು ನಲ್ವತ್ತೈದು ವರ್ಷಕ್ಕೂ ಅಧಿಕ ಕಾಲ ಯಕ್ಷಗಾನ ಕ್ಷೇತ್ರದಲ್ಲಿ ವ್ಯವಸಾಯ. ಧರ್ಮಸ್ಥಳ, ಕದ್ರಿ, ಕಟೀಲು ಹೀಗೆ ಹಲವು ಮೇಳಗಳಲ್ಲಿ ಮದ್ದಳೆಗಾರರಾಗಿ ಸೇವೆ. ಬಳಿಕ ಯಕ್ಷಗಾನ ಅಧ್ಯಾಪನದಲ್ಲಿ ಸಾವಿರಕ್ಕೂ ಅಧಿಕ ಶಿಷ್ಯಸಂಪಾದನೆ. ಇಂದು ತೆಂಕುತಿಟ್ಟಿನ ಹೆಚ್ಚಿನ ಮೇಳಗಳಲ್ಲಿ ದುಡಿಯುವ ಹಿಮ್ಮೇಳ ವಾದಕರಲ್ಲಿ ಬಹುತೇಕ ಸುಬ್ರಹ್ಮಣ್ಯ ಭಟ್ಟರ ಶಿಷ್ಯರು. ಇವರ ಬಗ್ಗೆ ಮತ್ತಷ್ಟು ವಿವರ ಮುಂದೆ.  ಸುಬ್ರಹ್ಮಣ್ಯ ಭಟ್ಟರು ಲಕ್ಷ್ಮೀ ಅವರನ್ನು ವಿವಾಹವಾದರು. ಇವರಿಗೆ ಇಬ್ಬರು ಪುತ್ರರು. ವೇಣುಗೋಪಾಲ ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಇಂಜಿನಿಯರ್, ವಿವಾಹಿತ ಇವರಿಗೆ ಓರ್ವ ಪುತ್ರಿ. ನಾರಾಯಣ ಪ್ರಸನ್ನ ಬೆಂಗಳೂರಿನಲ್ಲಿ (ಸದ್ಯ ವಿದೇಶದಲ್ಲಿದ್ದಾರೆ) ಸಾಫ್ಟ್ ವೇರ್ ಇಂಜಿನಿಯರ್. ವಿವಾಹಿತ. ಇವರಲ್ಲಿ ವೇಣುಗೋಪಾಲ ಹಲವು ಹವ್ಯಾಸಿ ಕೂಟಗಳಲ್ಲಿ ಮಿಂಚುತ್ತಿದ್ದಾರೆ. ಬೆಂಗಳೂರಿನಲ್ಲಿ ನಡೆಯುವ ಬಹುತೇಕ ಯಕ್ಷಗಾನ ಕೂಟಗಳಲ್ಲಿ ವೇಣುಗೋಪಾಲ ಕಾಣಿಸಿಕೊಳ್ಳುತ್ತಾರೆ. ಉತ್ತಮ ಹಿಮ್ಮೇಳವಾದಕ. ಸುಬ್ರಹ್ಮಣ್ಯ ಭಟ್ಟರು ಮಾಂಬಾಡಿಯಲ್ಲಿ ನೆಲಸಿದ್ದಾರೆ.

ಗಣಪತಿ ಭಟ್

ಮಾಂಬಾಡಿ ನಾರಾಯಣ ಭಾಗವತರ ಮೂರನೇ ಪುತ್ರ ಗಣಪತಿ ಭಟ್. ಇವರು ಕೆನರಾ ಬ್ಯಾಂಕ್ ನಲ್ಲಿ ಹಿರಿಯ ಮ್ಯಾನೇಜರ್ ಆಗಿ ನಿವೃತ್ತರು. ಪತ್ನಿ ಕಲಾವತಿ. ಮಕ್ಕಳು ವಿದ್ಯಾಲಕ್ಷ್ಮಿ (ವಿವಾಹಿತರು) ಮತ್ತು ವಿಜಯಕೃಷ್ಣ. ವಿದ್ಯಾಲಕ್ಷ್ಮಿ ಸಾಫ್ಟ್ ವೇರ್ ಇಂಜಿನಿಯರ್.  ಅವರಿಗೆ ಓರ್ವ ಪುತ್ರ. ವಿಜಯಕೃಷ್ಣ ಅವರೂ ಸಾಫ್ಟ್ ವೇರ್ ಇಂಜಿನಿಯರ್ . ಅವರು ವಿವಾಹಿತರು. ಗಣಪತಿ ಭಟ್ ಅವರು ದೇಶದ ಹಲವೆಡೆ ವೃತ್ತಿಸಂಬಂಧಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಯಕ್ಷಗಾನ ಕ್ಷೇತ್ರದಲ್ಲಿ ಆಸಕ್ತರು. ಈಗ ಬೆಂಗಳೂರಿನಲ್ಲಿ ಎಲ್ಲರೂ ನೆಲಸಿದ್ದಾರೆ.

ನಾರಾಯಣ ಭಟ್

ಮಾಂಬಾಡಿ ನಾರಾಯಣ ಭಾಗವತರ ನಾಲ್ಕನೇ ಪುತ್ರ ನಾರಾಯಣ ಭಟ್. ಇವರು ಕುತ್ತಿಕ್ಕೋಲ್ (ಕೇರಳದಲ್ಲಿದೆ) ಎಂಬಲ್ಲಿರುವ ಪಾರ್ಥಸಾರಥಿ ದೇವಸ್ಥಾನದ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪತ್ನಿ ಸರಸ್ವತಿ. ನಾರಾಯಣ ಭಟ್ ಯಕ್ಷಗಾನ ಆಸಕ್ತರೂ ಹೌದು. ಪುತ್ರ ದುರ್ಗಾಪ್ರಸಾದ್ ಭಟ್ ಮಾಂಬಾಡಿ ಕಾಸರಗೋಡಿನಲ್ಲಿ ಉದ್ಯೋಗಿ. ಇವರೂ ಯಕ್ಷಗಾನ ಆಸಕ್ತರು.

(ಇವಿಷ್ಟು ಮಾಂಬಾಡಿ ನಾರಾಯಣ ಭಾಗವತರ ಮನೆತನದ ಸಂಕ್ಷಿಪ್ತ ಪರಿಚಯ. ಮುಂದಿನ ಭಾಗದಲ್ಲಿ ಮಾಂಬಾಡಿ ಭಾಗವತರ ಬಗ್ಗೆ ಇನ್ನಷ್ಟು ವಿವರ)

 

ಹಿಂದಿನ ಲೇಖನಗಳು:

ಪರಂಪರೆಯ ಹಿನ್ನೋಟ – ಮಾಂಬಾಡಿ ಮನೆತನ

ಜಾಹೀರಾತು

About the Author

Harish Mambady
ಕಳೆದ 27 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ. Harish Mambady - who has experience working as a Journalist in various Print and Digital Media in Dakshina Kannada, Udupi (Mangalore, Manipal, and Bantwal) for the past 27 years, He Started digital Media www.bantwalnews.com in 2016.

Be the first to comment on "ಪರಂಪರೆಯ ಹಿನ್ನೊಟ: ಮನೆತನದ ನೋಟ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*