1941ರಲ್ಲಿ ಕಿನ್ನಿಗೋಳಿಯಲ್ಲಿ ನಡೆದ ಐದು ದಿನಗಳ ಶ್ರೀದೇವಿ ಮಹಾತ್ಮೆಯಲ್ಲಿ ಶ್ರೀದೇವಿ ಪಾತ್ರಧಾರಿಯಾಗಿದ್ದವರು ಕಡಂದೇಲು ಪುರುಷೋತ್ತಮ ಭಟ್ಟರು. ಅಂದು ಭಾಗವತರಾಗಿದ್ದವರು ಮಾಂಬಾಡಿ ನಾರಾಯಣ ಭಾಗವತರು. 1981ರಲ್ಲಿ ಮಾಂಬಾಡಿ ಭಾಗವತರರಿಗೆ ಸನ್ಮಾನ ಮತ್ತು ಅಭಿನಂದನಾ ಗ್ರಂಥ ‘ರಂಗವೈಖರಿ’ ಸಮರ್ಪಣೆಯಾಯಿತು. ಈ ಸಂದರ್ಭ ಪುರುಷೋತ್ತಮ ಭಟ್ಟರು ಕಿನ್ನಿಗೋಳಿಯ ಅನುಭವ ಮತ್ತು ಮಾಂಬಾಡಿಯವರ ಒಡನಾಟದ ಬಗ್ಗೆ ಬರೆದ ಸಾಲುಗಳ ಆಯ್ದ ಭಾಗವಿದು. (ಕೃಪೆ: ರಂಗವೈಖರಿ) ಬಂಟ್ವಾಳನ್ಯೂಸ್ ನಿಮಗಾಗಿ ಒದಗಿಸುತ್ತಿದೆ.
ಕಾಸರಗೋಡು ಸಮೀಪ ಕೊರಕ್ಕೋಡು ಎಂಬಲ್ಲಿ 1930ರ ಸಂದರ್ಭ ತಾವೇ ಪದ್ಯ ರಚಿಸಿ, ಶ್ರೀ ದೇವಿ ಮಹಾತ್ಮೆ ಪ್ರಸಂಗವನ್ನು ಏಳು ದಿನಗಳ ಕಾಲ ಆಡಿಸಿದವರು ಮಾಂಬಾಡಿ ನಾರಾಯಣ ಭಾಗವತರು. ಅದಾದ ಬಳಿಕ ಹಿಮ್ಮೇಳ ತರಗತಿಯತ್ತ ಕೇಂದ್ರೀಕೃತವಾಗಿಸಿ ಯಕ್ಷಗಾನ ಚಟುವಟಿಕೆಗಳನ್ನು ನಡೆಸುತ್ತಿದ್ದ ಭಾಗವತರಿಗೆ ಮತ್ತೊಮ್ಮೆ ದೇವಿಮಹಾತ್ಮೆ ಐದು ದಿನಗಳ ಆಟದ ಕುರಿತು ಕರೆ ಹೋಯಿತು. ಇದು 1941ರ ಕತೆ.
1941ನೆಯ ಇಸವಿ. ಕಟೀಲು ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀಧರ ಶೆಟ್ಟಿಯವರೇ ಮುಂದಾಗಿ ಭಕ್ತಿಯಿಂದ ಆಡಿಸಿದ ಆಟವದು. ಕಲ್ಯಾಡಿ ಕೊರಗ ಶೆಟ್ಟರ ಹೊಸ ವ್ಯವಸ್ಥಾಪಕತ್ವದ ಹುಮ್ಮಸ್ಸಿನ ಕಾಲ-ಮೇಳದಲ್ಲಿ ಯಾರೋ ಒಬ್ಬ ಪುಸ್ತಕ ಭಾಗವತ ದೇವಿ ಮಹಾತ್ಮೆಯನ್ನಾಡಿಸಲು ಒಪ್ಪದ ಕಾರಣ, ಬೇರೆಯವರ ಸಲಹೆಯಂತೆ ಮಾಂಬಾಡಿ ನಾರಾಯಣ ಭಾಗವತರನ್ನು ಆರಿಸಿ, ಬರಮಾಡಿದ್ದಾಯಿತು.
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಕಳೆದ 24 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.
Be the first to comment on "1941ರ ಐದು ದಿನಗಳ ಕಿನ್ನಿಗೋಳಿಯ ದೇವಿ ಮಹಾತ್ಮೆ ಹೇಗಿತ್ತು?"