ನಿಧಿ ಶೋಧಕ್ಕೆ ಬಂದವರು ಅಂದರ್

  • ಕರೋಪಾಡಿ ಗ್ರಾಮದ ಅರಸಳಿಕೆ ಮನೆಗೆ ಬಂದು ಮನೆಯವರ ಬೆದರಿಸಿ ನಿಧಿಗಾಗಿ ಅಗೆದಿದ್ದರು ಇವರು
  • ಕೃತ್ಯಕ್ಕೆ ಬಳಸಿದ ಇನ್ನೋವ , ಆಲ್ಟೋ ಕಾರು ವಶಕ್ಕೆ
  • ಆರೋಪಿಗಳಲ್ಲಿ ಮೂವರು ಸ್ಥಳೀಯರು

 https://bantwalnews.com report

 

 

ಜಾಹೀರಾತು

ಕರೋಪಾಡಿ ಗ್ರಾಮದ ಅರಸಳಿಕೆ ವಿಘ್ನರಾಜ ಭಟ್ ಮನೆ ಸಮೀಪ ಜನವರಿ 24ರಂದು ಬೆಳಗ್ಗೆ 2ರಿಂದ 4 ಗಂಟೆಯ ಒಳಗೆ ಆಗಮಿಸಿ, ಮನೆಯವರನ್ನು ಬೆದರಿಸಿ ನಿಧಿಶೋಧ ಮಾಡಿದ ಐವರು ಆರೋಪಿಗಳನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.

ಸಾಲೆತ್ತೂರು ಸಮೀಪ ಐವರನ್ನು ಕೃತ್ಯಕ್ಕೆ ಬಳಸಿದ ಇನ್ನೋವ ಕಾರು, ಆಲ್ಟೊ ಕಾರು, ಹತ್ಯಾರುಗಳ ಸಮೇತ ಬಂಧಿಸಲಾಗಿದೆ ಎಂದು ಪೊಲೀಸರು  ತಿಳಿಸಿದ್ದಾರೆ.

ಬಂಧಿತ ಆರೋಪಿಗಳು ಇವರು

ಜಾಹೀರಾತು
  1. ಇಕ್ಬಾಲ್ ಯಾನೆ ಇಕ್ಕು (22) ಪೊಯ್ಯೆಕಂಡ ಮನೆ, ಕನ್ಯಾನ ಗ್ರಾಮ ಬಂಟ್ವಾಳ ತಾಲೂಕು
  2. ಮಹಮ್ಮದ್ ಆಲಿ ಯಾನೆ ಅಲಿ ಮೋನು (29), ಕೋಡ್ಲ ಮನೆ, ಕರೋಪಾಡಿ ಗ್ರಾಮ, ಬಂಟ್ವಾಳ ತಾಲೂಕು
  3. ಅಬ್ಬಾಸ್ (26), ಮಂಡ್ಯೂರು ಮನೆ, ಕನ್ಯಾನ ಗ್ರಾಮ, ಬಂಟ್ವಾಳ ತಾಲೂಕು.
  4. ಅಶ್ರಫ್ ಯಾನೆ ಎಲ್ ಟಿಟಿ ಅಶ್ರಫ್ (21), ಕುಲಾಲಕೋಡಿ ಮನೆ, ಕುಡ್ತಮುಗೇರು, ಕೊಳ್ನಾಡು ಗ್ರಾಮ, ಬಂಟ್ವಾಳ ತಾಲೂಕು
  5. ಆಶಿಕ್ ಪಿ. (190, ಬಾಯಿಕಟ್ಟೆ ಮನೆ, ಪೈವಳಿಕೆ, ಕಾಸರಗೋಡು, ಕೇರಳ.

ಪ್ರಕರಣದಲ್ಲಿ ಪೈವಳಿಕೆ ವಾಸಿ ಶಾಫಿ ಯಾನೆ ಕಲಂದರ್ ಯಾನೆ ಎಂಎಲ್ ಎ ಶಾಫಿ, ಕೇರಳದ ಶಾಫಿ ಯಾನೆ ಚೋಟು ಶಾಫಿ, ಮಿತ್ತನಡ್ಕ ಹ್ಯಾರಿಸ್ ಸಹಿತ ಕೆಲವರಿದ್ದು, ಅವರ ಪತ್ತೆಗೆ ಬಲೆ ಬೀಸಲಾಗಿದೆ.

 ಘಟನೆ ವಿವರ:

 

ಜಾಹೀರಾತು

ಅರಸಳಿಕೆ ನಿವಾಸಿ ವಿಘ್ನರಾಜ ಭಟ್ (47) ಹಾಗೂ ಅವರ ಸಂಬಂಧಿ ವಿಖ್ಯಾತ್(18) ಮನೆಯಲ್ಲಿ ನಿದ್ರೆಯಲ್ಲಿದ್ದ ವೇಳೆ ಸುಮಾರು ರಾತ್ರಿ 2.30ರ ವೇಳೆ ನಾಯಿ ಬೊಗಳಿದ ಶಬ್ದ ಕೇಳಿತು. ಇಬ್ಬರೂ ಎಚ್ಚರಗೊಂಡಾಗ, ಓರ್ವ ಬಾಗಿಲು ಮುರಿದು ಒಳಗೆ ನುಗ್ಗಿದ. ಇದರಿಂದ ಭಯಭೀತರಾದ ಅವರು ಬೊಬ್ಬೆ ಹೊಡೆದಾಗ ಮತ್ತೆ ಮೂರು ನಾಲ್ಕು ಮಂದಿ ಒಳಗೆ ಬಂದರು.  ಇಬ್ಬರನ್ನೂ ಮನೆಯೊಳಗೆ ಹಗ್ಗದಲ್ಲಿ ಕಟ್ಟಿ ಕೂಡಿ ಹಾಕಿದರು.ಬಳಿಕ ಮನೆಯ ಅಂಗಳದ ಗೇಟಿನ ಪಕ್ಕದಲ್ಲಿರುವ ಭೂಮಿಯನ್ನು ಅಗೆದು ನಿಧಿಗಾಗಿ ವಿಫಲ ಯತ್ನ ನಡೆಸಿದ್ದರು. ಸುಮಾರು 9ರಿಂದ 12 ಮಂದಿಯಷ್ಟಿದ್ದ ತಂಡ, ಪಿಸ್ತೂಲ್, ತಲವಾರು, ಕಬ್ಬಿಣದ ರಾಡ್ ಹಿಡಿದುಕೊಂಡು ಬಂದಿದ್ದರು. ಎರಡು ಕಾರುಗಳಲ್ಲಿ ಈ ತಂಡ ಬಂದಿತ್ತು. ಸುಮಾರು ಎರಡು ಗಂಟೆ ನಿಧಿಗಾಗಿ ಭೂಮಿ ಅಗೆದರು. ಬೆಳಗ್ಗೆ ಸುಮಾರು 4.30 ಆಗುತ್ತಿದ್ದಂತೆ ಮರಳಿದರು. ಬರಿಗೈಯಲ್ಲಿ ಮರಳದ ಆಗಂತುಕರು, ಪೊಲೀಸರಿಗೆ ಸುಳಿವು ಸಿಗಬಾರದು ಎಂದು ಸಿಸಿ ಕ್ಯಾಮಾರದ ಡಿವಿಆರ್ ಹಾಗೂ ಎರಡು ಮೊಬೈಲ್‌ನಲ್ಲಿದ್ದ ನಾಲ್ಕು ಸಿಮ್‌ಗಳನ್ನು ಕದ್ದಿದ್ದರು. ವಿಷಯ ತಿಳಿಯುತ್ತಿದ್ದಂತೆ ದ.ಕ ಜಿಲ್ಲಾ ಎಸ್.ಪಿ ಭೂಷಣ್ ರಾವ್ ಬೊರಸೆ, ಬಂಟ್ವಾಳ ಡಿವೈಎಸ್‌ಪಿ ರವೀಶ್ ಸಿ.ಆರ್, ವಿಟ್ಲ ಎಸೈ ನಾಗರಾಜ್, ಶ್ವಾನದಳ, ಬೆರಳಚ್ಚು ತಜ್ಞರೊಂದಿಗೆ ಪೊಲೀಸ್ ತಂಡ ಭೇಟಿ ನೀಡಿತ್ತು ಅರಸಳಿಕೆಯ ಈ ಮನೆಯಲ್ಲಿ ನಿಧಿಗಾಗಿ ಶೋಧ ನಡೆಯುತ್ತಿರುವುದು ಒಂದೆರಡು ಬಾರಿಯಲ್ಲ. ಆರು ಬಾರಿ ಇಲ್ಲಿ ನಿಧಿ ಶೋಧ ನಡೆದಿತ್ತು. ಆದರೆ ಯಾರಿಗೂ ಏನೂ ಸಿಕ್ಕಿರಲಿಲ್ಲ. ಹೀಗಾಗಿ ಈ ಕುರಿತು ಮನೆಯವರು ಪೊಲೀಸರಿಗೆ ಮಾಹಿತಿ ನೀಡಿ ರಕ್ಷಣೆ ಕೋರಿದ್ದರು. ಪೊಲೀಸರು ಅವರಿಗೆ ಸಿಸಿ ಕ್ಯಾಮರಾ ಅಳವಡಿಸಲು ಸೂಚಿಸಿದ್ದರು. ಆದರೂ ಕಳ್ಳರು ಜಾಣ್ಮೆ ಮೆರೆದು ಸಿಸಿ ಕ್ಯಾಮರಾದ ಡಿವಿಆರ್ ಅನ್ನೇ ಹೊತ್ತೊಯ್ದಿದ್ದರು.

 ಹೇಗೆ ತನಿಖೆ:

ಎಸ್ಪಿ ಡಾ. ಭೂಷಣ್ ಜಿ.ಬೊರಸೆ ಹೆಚ್ಚವರಿ ಪೊಲೀಸ್ ಅಧೀಕ್ಷಕರು ಡಾ ವೇದಮೂರ್ತಿ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಬಂಟ್ವಾಳ ರವೀಶ್ ಸಿ ಆರ್ ನೇತೃತತ್ವದಲ್ಲಿ ಬಂಟ್ವಾಳ ಪೊಲೀಸ್ ವೃತ್ತ ನಿರೀಕ್ಷಕರಾದ ಬಿ ಕೆ ಮಂಜಯ್ಯ ,ವಿಟ್ಲ ಪಿಎಸ್‌ಐ ನಾಗರಾಜ್ ಹೆಚ್‌ಇ, ಬೆಳ್ತಂಗಡಿ ಪಿಎಸ್‌ಐ ರವಿ ಬಿಎಸ್ಸಿಬ್ಬಂಧಿಗಳಾದ ಬಾಲಕೃಷ್ಣ , ಗಿರೀಶ್, ಉದಯ್, ಸಿಜು ,ಜಯ ಕುಮಾರ್ಜರ್ನಾದನ್ , ಪ್ರವೀಣ್ ರೈ, ರಮೇಶ್, ಪ್ರವೀಣ್ ಕುಮಾರ್ ,ಭವಿತ್ ರೈ, ಸತೀಶ್  ಮತ್ತು ಜಿಲ್ಲಾ ಗಣಕಯಂತ್ರ ವಿಭಾಗದ ಸಂಪತ್ , ದಿವಾಕರ್ ಮತ್ತು ಚಾಲಕರಾದ ರಘುರಾಮ , ವಿಜಯೇಶ್ವರ, ಸತ್ಯಪ್ರಕಾಶ್, ಯೋಗಿಶ್ ಕಾರ್ಯಾಚರಣೆ ನಡೆಸಿದ್ದರು.

ಜಾಹೀರಾತು

ಈ ತಂಡ ವಿವಿದ ಆಯಾಮಗಳಿಂದ ತನಿಖೆ  ನಡೆಸಿ ಕೇರಳ ರಾಜ್ಯ ದ ಕಾಸರಗೋಡು, ಕುಂಬಳೆ, ಪೈವಳಿಕೆ, ಮಂಜೇಶ್ವರ, ಕಡೆಗಳಲ್ಲಿ ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಶನಿವಾರ  ಖಚಿತ ವರ್ತಮಾನದಂತೆ ಸಾಲೆತ್ತೂರು ಸಮೀಪ ಕೃತ್ಯಕ್ಕೆ ಉಪಯೋಗಿಸಿದ ಇನೋವಾ  ಕಾರು , ಆಲ್ಟೋ ಕಾರು , ಹತ್ಯಾರುಗಳು ಸಮೇತ 5 ಜನ ಆರೋಪಿಗಳನ್ನು ಬಂದಿಸುವಲ್ಲಿ ಯಶಸ್ವಿಯಾದರು.

ಕ್ರಿಮಿನಲ್ ಹಿನ್ನೆಲೆ ಉಳ್ಳವರು

ಕೃತ್ಯದಲ್ಲಿ ಭಾಗಿಯಾದವರು ಸಾಮಾನ್ಯರೇನಲ್ಲ. ಕೊಲೆಯಂಥ ಕೃತ್ಯಗಳ ಆರೋಪ ಇರುವ ಕ್ರಿಮಿನಲ್ ಹಿನ್ನೆಲೆ ಉಳ್ಳವರು. ಇಕ್ಬಾಲ್ ಯಾನೆ ಇಕ್ಕು ಮೇಲೆ ವಿಟ್ಲ ಪೊಲಿಸ್ ಠಾಣೆಯಲ್ಲಿ 2015 ರಲ್ಲಿ   ಯುವತಿಯೊಬ್ಬಳನ್ನು ಅಪಹರಿಸಿದ ಪ್ರಕರಣ ಮತ್ತು  ಕನ್ಯಾನದಲ್ಲಿ ನಡೆದ ಆಸೀಪ್ ಯಾನೆ ಬಾಯಿಕಟ್ಟೆ ಆಸೀಪ್  ಕೊಲೆ ಪ್ರಕರಣದಲ್ಲಿ ಹಾಗೂ 2016 ರಲ್ಲಿ ಮಂಗಳುರು ಜಿಲ್ಲಾ ಕಾರಾಗ್ರಹದಲ್ಲಿರುವ ಸಮಯ ಜೈಲಿನೊಳಗಡೆ ನಡೆದ ಗಣೇಶ್ ಶೆಟ್ಟಿ ಕೊಲೆ ಪ್ರಕರಣದ ಆರೋಪವಿದೆ.

ಜಾಹೀರಾತು

ಮಹಮ್ಮದ್ ಆಲಿ ಯಾನೆ ಅಲಿ ಮೋನು ಮೇಲೆ 2011 ರಲ್ಲಿ ವಿಟ್ಲ ಠಾಣೆಯಲ್ಲಿ  ಒಂದು ಗಲಾಟೆ ಪ್ರಕರಣ , ಮತ್ತು ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಕಿಡ್ನಾಪ್ ಪ್ರಕರಣ , 2015 ನೇ ಇಸವಿಯಲ್ಲಿ ಕನ್ಯಾನದಲ್ಲಿ ನಡೆದ ಆಸೀಪ್ ಯಾನೆ ಬಾಯಿಕಟ್ಟೆ ಆಸೀಪ್  ಕೊಲೆ ಪ್ರಕರಣದಲ್ಲಿ, ಪಾಂಡೇಶ್ವರ ಠಾಣೆಯಲ್ಲಿ ಕೊಲೆಯತ್ನ ಪ್ರಕರಣಗಳ ಆರೋಪಿ.  ಪ್ರಕರಣ ಬೇಧಿಸುವ ತಂಡಕ್ಕೆ ಮಾನ್ಯ ಪೊಲೀಸ್ ಅಧೀಕ್ಷಕರು ಪ್ರಶಂಸನಸ ಪತ್ರ ಮತ್ತು ನಗದು ಬಹುಮಾನ ಘೋಷಿಸಿದ್ದಾರೆ.  

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ನಿಧಿ ಶೋಧಕ್ಕೆ ಬಂದವರು ಅಂದರ್"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*