ಏರ್ಯ ಆಳ್ವ ಫೌಂಡೇಶನ್ ಹಾಗೂ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ವಿದ್ಯಾರ್ಥಿಗಳ ಸಾಹಿತ್ಯ ಸಾಂಸ್ಕೃತಿಕ ಕಮ್ಮಟ ಏರ್ಯಬೀಡುವಿನಲ್ಲಿ ನಡೆಯಿತು.

ಆನಂದಿ ಎಲ್ ಆಳ್ವ ಕಾರ್ಯಕ್ರಮ ಉದ್ಘಾಟಿಸಿದರು. ಮಹಾಬಲೇಶ್ವರ ಹೆಬ್ಬಾರ್ ಮಕ್ಕಳಲ್ಲಿ ಸಾಹಿತ್ಯದ ಆಸಕ್ತಿ, ಅರವಿಂದ ಕುಡ್ಲ ಒರಿಗಾಮಿ, ಗೋಪಾಲಕೃಷ್ಣ ನೇರಳಕಟ್ಟೆ ಸೃಜನಶೀಲ ಸಾಹಿತ್ಯದ ಕಾರ್ಯಾಗಾರ ನಡೆಸಿಕೊಟ್ಟರು.

ಏರ್ಯ ಬಾಲಕೃಷ್ಣ ಹೆಗ್ಡೆ, ಬಂಟ್ವಾಳ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ದ ಅಧ್ಯಕ್ಷ ಡಾ ತುಕಾರಾಮ ಪೂಜಾರಿ, ಬಂಟ್ವಾಳ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಶ್ವನಾಥ ಬಂಟ್ವಾಳ, ರತ್ನಾಕರ ಶೆಟ್ಟಿ ಮುಂಡಡ್ಕ ಗುತ್ತು,ಅಮ್ಟಾಡಿ ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ವಿಜಯ ಕುಮಾರ್, ಮಕ್ಕಳ ಕಲಾ ಸಾಹಿತ್ಯ ಪರಿಷತ್ ಅಧ್ಯಕ್ಷರು ಶ್ರೀಕಲಾ ಕಾರಂತ್, ಸ್ಕಿಲ್ ಕೋರ್ಸ್ ನ ಶಿಕ್ಷಕರಾದ ಅಭಿನಂದನ್ ಉಪಸ್ಥಿತರಿದ್ದರು.

ಕೇಶವ ಎಚ್ ಕಟೀಲು ಏರ್ಯರ ನೆನಪು ನಡೆಸಿಕೊಟ್ಟರು. ಶಿಕ್ಷಕ ಜಗನ್ನಾಥ್ ಸ್ವಾಗತಿಸಿದರು. ಯೋಗೀಶ್ ಎಚ್ ವಂದಿಸಿದರು ಕಾರ್ಯಕ್ರಮದ ಸಂಯೋಜಕ ದಾಮೋದರ್ ಮಾಸ್ಟರ್ ಏರ್ಯ ಕಾರ್ಯಕ್ರಮ ನಿರೂಪಿಸಿದರು.

ವಿದ್ಯಾರ್ಥಿಗಳಿಗೆ ಶ್ರೀಕಲಾ ಕಾರಂತ್ ಅವರು ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು. ಸ್ವರಚಿತ ಕವನ ರಚನೆ ಮತ್ತು ವಾಚನ ಸ್ಪರ್ಧೆಯ ವಿಜೇತರು ಇವರು.
ಪ್ರಾಥಮಿಕ : ದೀಪ್ತಾ ಶೆಟ್ಟಿ, ಸ್ಯಾಮ್ ನೋರ್ಬರ್ಟ್ ಲೋಬೊ,, ಮದ್ವಿಕ್,ಸೋಹಮ್, ಹಂಸಿಕಾ ಪಿ ಶೆಟ್ಟಿ.
ಪ್ರೌಢಶಾಲಾ ವಿಭಾಗ : ದೃತಿ, ಶರಣ್ಯ, ಲಿಖಿತ, ಶೀರ್ಷಿಕಾ ಕಾರಂತ್,
ಕಾಲೇಜು ವಿಭಾಗ : ದಿಶಾ, ಹೇಮಲತಾ, ತುಳಸಿ, ಗೌತಮಿ, ಧನ್ವಿತಾ ಕಾರಂತ್. ಬಹುಮಾನ ಪಡಕೊಂಡರು.


Be the first to comment on "ಏರ್ಯಬೀಡುವಿನಲ್ಲಿ ವಿದ್ಯಾರ್ಥಿಗಳ ಸಾಹಿತ್ಯ, ಸಾಂಸ್ಕೃತಿಕ ಕಮ್ಮಟ"