ಬಂಟ್ವಾಳ: ಬಂಟ್ವಾಳ ಕ.ಸಾಪ, ಅಭಿರುಚಿ ಜೋಡುಮಾರ್ಗ ಸಹಯೋಗದಲ್ಲಿ ‘ಶ್ರೀ ಏರ್ಯ ಒಂದು ನೆನಪು’ ಕಾವ್ಯವಾಚನ, ವ್ಯಾಖ್ಯಾನ ಕಾರ್ಯಕ್ರಮ ಭಾನುವಾರ ಆಗಸ್ಟ್ 27ರಂದು ನಡೆಯಲಿದೆ. ಸಂಜೆ 4 ಗಂಟೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕಾರಾಮ ಪೂಜಾರಿ ಏರ್ಯ ಸಂಸ್ಮರಣೆ ಮಾಡಲಿದ್ದಾರೆ. ಗಮಕಿ ಮಂಜುಳಾ ಸುಬ್ರಹ್ಮಣ್ಯ ಗಮಕವಾಚನ ಮಾಡಲಿದ್ದರೆ, ವ್ಯಾಖ್ಯಾನವನ್ನು ಉಪನ್ಯಾಸಕಿ ರೇಷ್ಮಾ ಜಿ. ಭಟ್ ಮಾಡುವರು ಎಂದು ಅಭಿರುಚಿ ಅಧ್ಯಕ್ಷ ಸುಂದರ ರಾವ್ ಮತ್ತು ಕಸಾಪ ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
![](https://i0.wp.com/bantwalnews.com/wp-content/uploads/2019/10/bantwalnews.png?w=400&ssl=1)
Be the first to comment on "27ರಂದು ಕಸಾಪ, ಅಭಿರುಚಿ ಜೋಡುಮಾರ್ಗ ಸಹಯೋಗದಲ್ಲಿ ‘ಶ್ರೀ ಏರ್ಯ ಒಂದು ನೆನಪು’"