Brahmarakootlu Toll Plaza: ಬ್ರಹ್ಮರಕೂಟ್ಲು ಸುಂಕ ವಸೂಲಿ ಕೇಂದ್ರಕ್ಕೆ ಬೇಕು ಕಾಯಕಲ್ಪ – ಇಲ್ಲಗಳೇ ಇಲ್ಲಿ ಜಾಸ್ತಿ!!!

  • ಯಾದವ ಕುಲಾಲ್ ಅಗ್ರಬೈಲು

ಬ್ರಹ್ಮರಕೂಟ್ಲು ಸುಂಕ ವಸೂಲಿ ಕೇಂದ್ರದಲ್ಲಿ ಕತ್ತಲಿನ ನಡುವೆಯೂ ಪ್ರಕಾಶಮಾನವಾಗಿ ಬರುತ್ತಿರುವ ವಾಹನಗಳನ್ನು ತಡೆದು ನಿಲ್ಲಿಸುವುದೇ ಒಂದು ಸಾಹಸ. ಮೂರು ಬೃಹತ್ ಮರ್ಕ್ಯುರಿ ಕಂಬ ಹಾಗೂ 14 ಸ್ಟ್ರೀಟ್ ಲೈಟ್ ಕಂಬಗಳಿದ್ದು ಆಗಾಗ ಉರಿದು ನಂದುತ್ತವೆ. ನೂತನ ಬೃಹತ್ ವಿದ್ಯುತ್ ಕಂಬ ಅಳವಡಿಸಲು ತೋಡಿದ ಹೊಂಡದಲ್ಲಿ ನೀರು ತುಂಬಿದೆ. ಲೈಟ್ ಉರಿಯದೇ ಕಾರ್ಮಿಕರು, ಪ್ರಯಾಣಿಕರು ಕತ್ತಲ್ಲಿ ಪರದಾಡುವಂತಾಗಿದೆ.

ಜಾಹೀರಾತು

ರಾತ್ರಿಯಾಗುತ್ತಿದ್ದಂತೆ ಸುಂಕ ವಸೂಲಿ ಮಾಡುತ್ತಿರುವ ಕಾರ್ಮಿಕರ ಸಮಸ್ಯೆ ಬಿಗಡಾಯಿಸುತ್ತದೆ. ಅತೀ ವೇಗದಿಂದ ಬರುವ ವಾಹನಗಳನ್ನು ತಡೆದು ವಸೂಲಿ ಮಾಡಬೇಕು, ಮತ್ತೊಂದೆಡೆ ಸುಂಕ ನೀಡುವುದನ್ನು ತಪ್ಪಿಸಿಕೊಳ್ಳಲು ವಿರುದ್ಧ ದಿಕ್ಕಿನಿಂದಲೂ ವಾಹನಗಳು ಸಂಚರಿಸುತ್ತಿದ್ದು, ಅದನ್ನೂ ಗಮನಿಸಬೇಕು,  ಸುಂಕ ವಸೂಲಿ ಮಾಡುವ ಜಾಗ ಮೊದಲೇ ಇಕ್ಕಟ್ಟಾಗಿದ್ದು, ಕತ್ತಲೆಯಲ್ಲಿ ವಾಹನ ಚಾಲಕರಿಂದ ಜೀವ ಪಣಕ್ಕಿಟ್ಟು ಸುಂಕ ವಸೂಲಿ ಮಾಡುವಂತಾಗಿದೆ.

ಅಫಘಾತ ತಡೆಯಲು ತಂದಿರಿಸಿದ ಕಾಂಕ್ರೀಟ್ ಬ್ಲಾಕ್‌ಗಳನ್ನು ಅಳವಡಿಸದಿರುವುದು ಬ್ರಹ್ಮರಕೂಟ್ಲು ಸರ್ವೀಸ್ ರಸ್ತೆಯಿಂದ ಟೋಲ್ ಪ್ಲಾಜಾ ಬಳಿ ಬರುವಲ್ಲಿ ವಾಹನಗಳು ಎರ್ರಾಬಿರ್ರಿಯಾಗಿ ಸಂಚರಿಸುತ್ತಿದ್ದು, ಇದರಿಂದಾಗಿ ನಿರಂತರವಾಗಿ ಅಪಘಾತವಾಗುತ್ತಿದ್ದು, ಇದಕ್ಕಾಗಿ ಸುಮಾರು 25 ಕಾಂಕ್ರೀಟ್ ರಸ್ತೆ ವಿಭಜಕ ಬ್ಲಾಕ್‌ಗಳನ್ನು ತಂದಿರಿಸಲಾಗಿತ್ತು. ಆದರೆ ಅದನ್ನು ರಾಷ್ಟ್ರೀಯ ಹೆದ್ದಾರಿಯಲ್ಲೇ ರಾಶಿ ಹಾಕಲಾಗಿದೆ.

CHESS TRAINING AT RAKTHESHWARI TEMPLE BCROAD

ಹೆದ್ದಾರಿ ಬದಿಯಲ್ಲಿ ಪ್ರವಾಸಿಗರಿಗೆ ಯೋಗ್ಯವಾದ ಶೌಚಾಲಯ ವ್ಯವಸ್ಥೆ ಇಲ್ಲ. ಈಗ ಸರ್ವೀಸ್ ರಸ್ತೆಯ ಬಳಿ ನಿರ್ಮಾಣವಾಗಿರುವ ಶೌಚಾಲಯ ಹೆದ್ದಾರಿಯಲ್ಲಿ ಪ್ರಯಾಣ ಮಾಡುವವರಿಗೆ ಪ್ರಯೋಜನಕ್ಕಿಲ್ಲದಂತಾಗಿದೆ.

OPTIC WORLD

ಪ್ರತಿ ವರ್ಷವೂ ಸುಂಕದ ದರ ಏರಿಕೆಯಾಗುತ್ತಲೇ ಇದೆ. ಆದರೆ ಬ್ರಹ್ಮರಕೂಟ್ಲು ಟೋಲ್ ಗೇಟ್ ಬಳಿ ಯಾವುದೇ ಮೂಲಭೂತ ಸೌಕರ್ಯ ಇಲ್ಲ, ಸುಂಕ ವಸೂಲಿ ಕೇಂದ್ರದ ಬಳಿಯಿಂದ ಒಂದು ಕಿಲೋ ಮೀಟರ್ ದೂರದಿಂದಲೇ ವಿದ್ಯುತ್ ಲೈಟ್‌ನ ವ್ಯವಸ್ಥೆ ಬೇಕಾಗುತ್ತದೆ. ಆದರೆ ಇಲ್ಲಿ ಟೋಲ್‌ಗೇಟ್ ಬಳಿಯೇ ಕತ್ತಲು ಆವರಿಸಿದೆ ಎಂದು ಜಿಪಂ ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಹೇಳುತ್ತಾರೆ.

ಬ್ರಹ್ಮರಕೂಟ್ಲು ಸುಂಕ ವಸೂಲಿ ಕೇಂದ್ರವು ಆರಂಭದಿಂದಲೂ ಅವ್ಯವಸ್ಥೆಯಿಂದ ಕೂಡಿದೆ. ವಸೂಲಿ ಕೇಂದ್ರದ ಬಳಿ ಒಂದು ರಸ್ತೆ ಮಾತ್ರ ಕಾಂಕ್ರಿಟೀಕರಣವಾಗಿದ್ದು, ಮತ್ತೆರಡು ಕಡೆ ಹೊಂಡಗಳಿಂದು ಕೂಡಿರುತ್ತದೆ. ರಸ್ತೆಯೂ ಹೊಂಡಗಳಿಂದ ಕೂಡಿರುತ್ತದೆ. ಸರ್ವೀಸ್ ರಸ್ತೆಯಿಂದ ವಾಹನಗಳು ಬರುವಲ್ಲಿ ಡಿವೈಡರ್ ಅಳವಡಿಸದೇ ಎಲ್ಲಾ ವಾಹನಗಳು ಒಮ್ಮೆಲೇ ಬರುತ್ತಿದ್ದು, ನಿರಂತರ ಅಪಘಾತಗಳಾಗುತ್ತಾ ಇದೆ ಎಂದು ಸುಜೀರ್ ದತ್ತನಗರದ ಗಣೇಶ್ ಅಭಿಪ್ರಾಯಪಡುತ್ತಾರೆ.

ಜಾಹೀರಾತು

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

2 Comments on "Brahmarakootlu Toll Plaza: ಬ್ರಹ್ಮರಕೂಟ್ಲು ಸುಂಕ ವಸೂಲಿ ಕೇಂದ್ರಕ್ಕೆ ಬೇಕು ಕಾಯಕಲ್ಪ – ಇಲ್ಲಗಳೇ ಇಲ್ಲಿ ಜಾಸ್ತಿ!!!"

  1. jagadeesh yadapadithaya | July 23, 2025 at 9:25 am | Reply

    Our Brahmarakotlu toll gate is collecting tolls without providing any basic facilities—not even proper roads, which are in a completely damaged condition. This amounts to daylight robbery. I would like to ask the concerned officials one clear question: Do vehicles registered in Mangalore and Bantwal have to pay toll here? There is still no clarity on this. Some people say that local vehicles are exempt, but the toll is still being collected regularly. As a media person, I kindly request an official response to my concerns. Thank you.

  2. jagadeesh yadapadithaya | July 23, 2025 at 9:27 am | Reply

    ನಮ್ಮ ಬ್ರಹ್ಮರಕೋಟಲು ಟೋಲ್ ಗೇಟು ಯಾವುದೇ ಮೂಲಭೂತ ಸೌಕರ್ಯಗಳನ್ನು ನೀಡದೇ, ಕೇವಲ ಟೋಲ್ ಸಂಗ್ರಹಿಸುತ್ತಿದೆ—ರಸ್ತೆಗಳು ಕೂಡ ಸಂಪೂರ್ಣವಾಗಿ ಹಾನಿಗೊಂಡಿವೆ. ನಾನು concerned ಅಧಿಕಾರಿಗಳಿಗೆ ಒಂದು ಸ್ಪಷ್ಟ ಪ್ರಶ್ನೆ ಕೇಳಲು ಬಯಸುತ್ತೇನೆ: ಮಂಗಳೂರು ಮತ್ತು ಬಂಟ್ವಾಳ ನೋಂದಣಿ ಹೊಂದಿದ ವಾಹನಗಳು ಇಲ್ಲಿ ಟೋಲ್ ಪಾವತಿಸಬೇಕೇ? ಇದರಲ್ಲಿ ಇನ್ನೂ ಸ್ಪಷ್ಟತೆ ಇಲ್ಲ. ಕೆಲವರು ಸ್ಥಳೀಯ ವಾಹನಗಳಿಗೆ ಟೋಲ್ ಇಲ್ಲ ಎಂದು ಹೇಳುತ್ತಿದ್ದಾರೆ, ಆದರೆ ಈವರು ನಿರಂತರವಾಗಿ ಟೋಲ್ ಸಂಗ್ರಹಿಸುತ್ತಿದ್ದಾರೆ. ದಯವಿಟ್ಟು ನನ್ನ ಅನುಮಾನಗಳಿಗೆ ಅಧಿಕಾರಿಗಳಿಂದ ಉತ್ತರವನ್ನು ಕೇಳುತ್ತೇನೆ. ಧನ್ಯವಾದಗಳು.

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*