ಜಾಹೀರಾತು
KALLADKA ಕಲ್ಲಡ್ಕದಲ್ಲಿ ಶನಿವಾರ ಬೆಳಗ್ಗೆ ಕೆಸರಿನಿಂದ ರಸ್ತೆ ತುಂಬಿ ಹೋಗಿ, ವಾಹನಗಳು, ಪಾದಚಾರಿಗಳ ಸಹಿತ ಎಲ್ಲರಿಗೂ ತೊಂದರೆ ಉಂಟಾಗಿತ್ತು. ಈ ಕುರಿತು ಬಂಟ್ವಾಳನ್ಯೂಸ್ ವರದಿ ಮಾಡಿತ್ತು. ಇದಕ್ಕೆ ಸ್ಪಂದಿಸಿದ ಆಡಳಿತ ಮಧ್ಯಾಹ್ನದ ವೇಳೆ ಕೆಸರು ತೆರವು ಕೆಲಸ ಮಾಡಿತು. ಜೆಸಿಬಿ ಹಾಗೂ ಪೂರಕ ಯಂತ್ರಗಳನ್ನು ಬಳಸಿಕೊಂಡು ತೆರವು ಕಾರ್ಯ ನಡೆಸಿ, ಕೆಸರಿನಿಂದ ಆವೃತವಾದ ಡಾಂಬರು ರಸ್ತೆಯಲ್ಲಿ ಮತ್ತೆ ಡಾಂಬರು ಕಾಣಿಸುವ ಪ್ರಯತ್ನಗಳು ಸಾಗಿದ್ದು, ನೀರು ಹರಿದುಹೋಗುವ ಜಾಗದ ಹುಡುಕಾಟವನ್ನೂ ನಡೆಸಲಾಗುತ್ತಿದೆ. ಜನಸಾಮಾನ್ಯರಿಗೆ ಸಮಸ್ಯೆ ಆಗಿರುವ ಕುರಿತು ಸಾಮಾಜಿಕ ಜಾಲತಾಣದಲ್ಲೂ ವ್ಯಾಪಕ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
![](https://i0.wp.com/bantwalnews.com/wp-content/uploads/2019/10/bantwalnews.png?w=400&ssl=1)
Be the first to comment on "KALLADKA FOLLOWUP: ಕಲ್ಲಡ್ಕದಲ್ಲಿ ಕೆಸರು ತೆರವು ಕಾರ್ಯ ಆರಂಭ, ಬಂಟ್ವಾಳನ್ಯೂಸ್ UPDATE"