ಕಲ್ಲಡ್ಕ ಸಮೀಪ ನೆಟ್ಲದ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದ ವಠಾರದಲ್ಲಿ ಮೇ 2ರಿಂದ 4ವರೆಗೆ ಅತಿಮಹಾರುದ್ರಯಾಗ ನಡೆಯಲಿದ್ದು, ಇದನ್ನು ಸಾರ್ವಜನಿಕವಾಗಿ ನಡೆಸುತ್ತಿರುವುದು ದಕ್ಷಿಣ ಭಾರತದಲ್ಲೇ ಮೊದಲು, ಯಾಗಕ್ಕೆ ನಾನಾ ಸಂತರು, ಗಣ್ಯರು ಯಾಗಕ್ಕೆ ಆಗಮಿಸಲಿದ್ದಾರೆ ಎಂದು ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಬುಧವಾರ ಸಂಜೆ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ಸಮಿತಿ ಕಾರ್ಯಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ ತಿಳಿಸಿದರು.
ಕಾಶಿ ಸಂಸ್ಥಾನ ಮಠಾಧೀಶ್ವರ ಶ್ರೀ 1008 ಜಗದ್ಗುರು ಕಾಶೀಪೀಠ ವಾರನಾಸಿಯ ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯ ಹಾಗೂ ಮಾರ್ಗದರ್ಶನದಲ್ಲಿ ತಂತ್ರಿಗಳಾದ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ನೇತೃತ್ವದಲ್ಲಿ ಕಾರ್ಯಕ್ರಮಗಳು ನಡೆಯಲಿದ್ದು, 24 ಸಂತರು ಹಾಗೂ ನಾನಾ ಕ್ಷೇತ್ರಗಳ ಗಣ್ಯರು ಆಗಮಿಸಲಿದ್ದಾರೆ ಎಂದವರು ಹೇಳಿದರು. ಈಗಾಗಲೇ 11 ಹೋಮಕುಂಡಗಳನ್ನು ಸ್ಥಾಪಿಸಲಾಗಿದ್ದು, ಮಾರ್ಚ್ 30ರಿಂದಲೇ ರುದ್ರಪಠಣ ಆರಂಭಗೊಂಡಿದೆ. ಅತಿರುದ್ರ (೧೪,೬೪೧ ಬಾರಿ) ಪಾರಾಯಣ ಮಾಡಿ ಈ ಜಪದ ದಶಾಂಶದಲ್ಲಿ ಯಾಗವನ್ನು ಮಾಡಲಾಗುತ್ತದೆ. ಮೇ 3 ಮತ್ತು 4ರಂದು ಸುಮಾರು 260ಕ್ಕೂ ಹೆಚ್ಚು ಋತ್ವಿಜರು ಆಗಮಿಸಿ ರುದ್ರ ಪಾರಾಯಣವನ್ನು ಮಾಡಿ 4ರಂದು 11 ಪ್ರತ್ಯೇಕ ಕುಂಡಗಳಲ್ಲಿ ರುದ್ರ ದೇವರಿಗೆ ಸುವಸ್ತುಗಳಿಂದ ಹವಿಸ್ಸನ್ನು ಸಮರ್ಪಿಸಲಿದ್ದಾರೆ ಎಂದು ಚೌಟ ಹೇಳಿದರು.
2ರಂದು ಶುಕ್ರವಾರವೇ ಕಾರ್ಯಕ್ರಮಗಳು ಆರಂಭಗೊಳ್ಳುತ್ತವೆ. 3ರಂದು ಸಂಜೆ ೪ರಿಂದ ಕಲ್ಲಡ್ಕ ಪೇಟೆಯಿಂದ ಹಸಿರು ಹೊರೆಕಾಣಿಕೆ ಶೋಭಾಯಾತ್ರೆ ಮತ್ತು ಶ್ರೀ ೧೦೦೮ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ಆಗಮನವಾಗುತ್ತದೆ. 4ರಂದು ಭಾನುವಾರ 4ರಂದು ಬೆಳಗ್ಗೆ ಗಂಟೆ ೫ರಿಂದ ಅತಿಮಹಾರುದ್ರಯಾಗ ಪ್ರಾರಂಭ ಬೆಳಗ್ಗೆ ೧೧ಕ್ಕೆ ಪೂರ್ಣಾಹುತಿ, ಮಹಾಪೂಜೆ, ಕಲಶಾಭಿಷೇಕ, ಮಹಾಮಂತ್ರಾಕ್ಷತೆ. ಮಧ್ಯಾಹ್ನ ೧೨.೩೦ಕ್ಕೆ ಮಹಾಅನ್ನಸಂತರ್ಪಣೆ. ಸಾಂಸ್ಕೃತಿಕ ಕಾರ್ಯಕ್ರಮ: ಸಂಜೆ ೬ರಿಂದ ಕಟೀಲು ಮೇಳದಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಗಣೇಶ್ ಶೆಟ್ಟಿ ಗೋಳ್ತಮಜಲು, ಸಮಿತಿ ಉಪಾಧ್ಯಕ್ಷ ಸಚಿನ್ ರೈ ಮಾಣಿ, ಪ್ರಮುಖರಾದ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ, ಅಜಿತ್ ಕುಮಾರ್ ಬರಿಮಾರು ಉಪಸ್ಥಿತೆರಿದ್ದರು. ಯಾಗದ ವಿವರಗಳೇನು? ಯಾರ್ಯಾರು ಬರ್ತಾರೆ? ಮುಂದೆ ಓದಿರಿ
ಕಾಶಿ ಸಂಸ್ಥಾನ ಮಠಾಧೀಶ್ವರ ಶ್ರೀ 1008 ಜಗದ್ಗುರು ಕಾಶೀಪೀಠ ವಾರನಾಸಿಯ ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯ ಹಾಗೂ ಮಾರ್ಗದರ್ಶನದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ತಂತ್ರಿಗಳಾದ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ, ತಿರುಪತಿ ತಿರುಮಲ ದೇವಸ್ಥಾನದ ಆಡಳಿತ ಸಮಿತಿ ಸದಸ್ಯ ಜಿ.ಭಾನುಪ್ರಕಾಶ್ ರೆಡ್ಡಿ, ತಿರುಪತಿ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠದ ವಿದ್ವಾನ್ ಗಣಪತಿ ಭಟ್, ಕಟೀಲು ಕ್ಷೇತ್ರದ ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ವಾಸುದೇವ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ನಂತಪದ್ಮನಾಭ ಆಸ್ರಣ್ಣ, ಕಮಲಾದೇವಿಪ್ರಸಾದ ಆಸ್ರಣ್ಣ, ಹರಿನಾರಾಯಣ ಆಸ್ರಣ್ಣ, ಶರವಿ ಕ್ಷೇತ್ರದ ಆಡಳಿತ ಮೊಕ್ತೇಸರ ರಾಘವೇಂದ್ರ ಶಾಸ್ತಿಗಳ ಗೌರವ ಉಪಸ್ಥಿತಿ ಮಾರ್ಗದರ್ಶನ ಇರಲಿದೆ.
ಯತಿಗಳಾದ ಉಡುಪಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥರು, ಫಲಿಮಾರು ಮಠದ ವಿದ್ಯಾಧೀಶತೀರ್ಥರು, ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥರು, ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥರು, ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥರು, ಅದಮಾರು ಮಠದ ಶ್ರೀ ವಿಶ್ವಪ್ರಿಯತೀರ್ಥರು, ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥರು, ಶಿರೂರು ಮಠದ ಶ್ರೀ ವೇದವರ್ಧನತೀರ್ಥ ಶ್ರೀಗಳು, ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥರು, ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಚಿತ್ರಾಪುರ ಮಠದ ಶ್ರೀ ವಿದ್ಯೇಂದುತೀರ್ಥ ಶ್ರಿಪಾದರು, ಮೂಡುಬಿದಿರೆ ಜೈನಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಕನ್ಯಾಡಿ ಶ್ರೀರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ, ಆದಿಚುಂಚನಗಿರಿ ಶಾಖಾ ಮಠದ ಡಾ. ಧರ್ಮಪಾಲನಾಥ ಸ್ವಾಮೀಜಿ, ರಾಮಕೃಷ್ಣ ತಪೋವನದ ಶ್ರೀ ವಿವೇಕಚೈತನ್ಯಾನಂದ ಸ್ವಾಮೀಜಿ, ಕೇಮಾರು ಮಠದ ಶ್ರೀ ಈಶವಿಠಲದಾಸ ಸ್ವಾಮೀಜಿ, ಸೋಲೂರು ಆರ್ಯ ಈಡಿಗ ಮಹಾಸಂಸ್ಥಾನದ ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಕದ್ರೀ ಯೋಗೀಶ್ವರಮಠದ ಶ್ರೀ ಯೋಗಿ ನಿರ್ಮಲನಾಥ ಸ್ವಾಮೀಜಿ, ಕೊಂಡೆವೂರು ಮಠದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಹಾಗೂ ಗುರುಪುರ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಗಮಿಸಲಿದ್ದಾರೆ.
ಕಾರ್ಯಕ್ರಮಗಳ ವಿವರ ಹೀಗಿದೆ:
2ರಂದು ಶುಕ್ರವಾರ ಬೆಳಗ್ಗೆ 9ಕ್ಕೆ ಗಣಪತಿ ಹವನ, ನಿಟಿಲಾಕ್ಷ ಸದಾಶಿವ ದೇವರಿಗೆ ಶತರುದ್ರಾಭಿಷೇಕ, ಕಲಶಪ್ರತಿಷ್ಠೆ, ಪರಿವಾರ ದೇವತೆಗಳಿಗೆ ಕಲಶ ಪ್ರತಿಷ್ಠೆ, ಶತರುದ್ರ ಪಾರಾಯಣ, ಕಲಶಾಭಿಷೇಕ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ 6ರಿಂದ ದೇವತಾ ಪ್ರಾರ್ಥನೆ, ಯಾಗ ಮಂಟಪದಲ್ಲಿ ತೋರಣ ಮುಹೂರ್ತ, ವಾಸ್ತು ರಕ್ಷೋಘ್ನ ಹೋಮ, ಶ್ರೀ ನಿಟಿಲಾಕ್ಷ ಸದಾಶಿವ ದೇವರಿಗೆ ರಂಗಪೂಜೆ. ಸಂಜೆ 8ರಿಂದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಲ್ಜಿಗದ ಮಾಯಾರೆ ಪಂಜುರ್ಲಿ ಎಂಬ ನಾಟಕ ಪ್ರದರ್ಶನ ನಡೆಯಲಿದೆ.
ಮೇ 3ರಂದು ಬೆಳಗ್ಗೆ ೮ರಿಂದ ಪುಣ್ಯಾಹನಾಂದಿ, ಮಹಾಸಂಕಲ್ಪ, ಅರಣಿಮಥನ, ಅಗ್ನಿಜನನ, ಬ್ರಹ್ಮಕೂರ್ಚ ಹೋಮ, ಮಹಾಗಣಪತಿ ಹೋಮ, ಪವಮಾನ ಪ್ರಾಯಶ್ಚಿತ ಹೋಮ, ಕೂಸ್ಮಾಂಡ ಹೋಮ, ಮಂಟಪ ಸಂಸ್ಕಾರ. ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ ನಂತರ ಅನ್ನಸಂತರ್ಪಣೆ. ಸಂಜೆ ೪ರಿಂದ ಕಲ್ಲಡ್ಕ ಪೇಟೆಯಿಂದ ಹಸಿರು ಹೊರೆಕಾಣಿಕೆ ಶೋಭಾಯಾತ್ರೆ ಮತ್ತು ಶ್ರೀ ೧೦೦೮ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ಆಗಮನ. ಲಿಂಗತೋಭದ್ರ ಮಂಡಲ ಪೂಜೆ, ಕಲಶ ಪ್ರತಿಷ್ಠೆ, ಶತರುದ್ರ ಪಾರಾಯಣ, ಅಷ್ಟಾವಧಾನ. ಬೆಳಗ್ಗೆ ೬ರಿಂದ ಸಂಜೆ ೬ವರೆಗೆ ವಿವಿಧ ತಂಡಗಳಿಂದ ಭಜನೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಾತ್ರಿ ೮ಕ್ಕೆ ಜಗದೀಶ ಆಚಾರ್ಯ ಪುತ್ತೂರು ಮತ್ತು ಬಳಗದವರಿಂದ ಸಂಗೀತ ಗಾನ ಶಂಭ್ರಮ ನಡೆಯಲಿದೆ.
ಭಾನುವಾರ 4ರಂದು ಬೆಳಗ್ಗೆ ಗಂಟೆ ೫ರಿಂದ ಅತಿಮಹಾರುದ್ರಯಾಗ ಪ್ರಾರಂಭ ಬೆಳಗ್ಗೆ ೧೧ಕ್ಕೆ ಪೂರ್ಣಾಹುತಿ, ಮಹಾಪೂಜೆ, ಕಲಶಾಭಿಷೇಕ, ಮಹಾಮಂತ್ರಾಕ್ಷತೆ. ಮಧ್ಯಾಹ್ನ ೧೨.೩೦ಕ್ಕೆ ಮಹಾಅನ್ನಸಂತರ್ಪಣೆ. ಸಾಂಸ್ಕೃತಿಕ ಕಾರ್ಯಕ್ರಮ: ಸಂಜೆ ೬ರಿಂದ ಕಟೀಲು ಮೇಳದಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ..
ಅತಿಮಹಾರುದ್ರಯಾಗ ಎಂದರೇನು?
ರುದ್ರ (ಒಂದು ಬಾರಿ) ಏಕಾದಶ ರುದ್ರ (೧೧ ಬಾರಿ) ಶತರುದ್ರ (೧೨೧ ಬಾರಿ), ಮಹಾರುದ್ರ, (೧೩೩೧ ಬಾರಿ), ಅತಿರುದ್ರ (೧೪,೬೪೧ ಬಾರಿ) ಪಾರಾಯಣ ಮಾಡಿ ಈ ಜಪದ ದಶಾಂಶದಲ್ಲಿ ಯಾಗವನ್ನು ಮಾಡುವುದು ಶಿಷ್ಟ ಸಮಾಜದಲ್ಲಿ ಆಚರಣೆಯಲ್ಲಿ ಕಂಡು ಬಂದಿದೆ. ನಿಟಿಲಾಕ್ಷ ಸನ್ನಿಧಿಯಲ್ಲಿ ಅತಿಮಹಾರುದ್ರಯಾಗಕ್ಕಾಗಿ ಮಾ.30ರಿಂದಲೇ ರುದ್ರಪಠಣ ಆರಂಭಗೊಂಡಿದೆ. ಮೇ 3 ಮತ್ತು 4ರಂದು ಸುಮಾರು 300ಕ್ಕೂ ಹೆಚ್ಚು ಋತ್ವಿಜರು ಆಗಮಿಸಿ ರುದ್ರ ಪಾರಾಯಣವನ್ನು ಮಾಡಿ 4ರಂದು 11 ಪ್ರತ್ಯೇಕ ಕುಂಡಗಳಲ್ಲಿ ರುದ್ರ ದೇವರಿಗೆ ಸುವಸ್ತುಗಳಿಂದ ಹವಿಸ್ಸನ್ನು ಸಮರ್ಪಿಸಿ ಯಾಗದ ಪರಿಪೂರ್ಣತೆ ಎಂಬ ಮಹಾಸಂಕಲ್ಪ ಮಾಡಲಾಗಿದೆ.
Be the first to comment on "ಮೇ2ರಿಂದ 4ವರೆಗೆ ನಿಟಿಲಾಕ್ಷ ಸನ್ನಿಧಿಯಲ್ಲಿ ಅತಿಮಹಾರುದ್ರಯಾಗ: ಏನಿದು ಕಾರ್ಯಕ್ರಮ? ವಿವರ ಹೀಗಿದೆ"