ಕರಾವಳಿ ನಿವೃತ್ತ ಬಿಎಸ್ ಎಫ್ ಯೋಧರ ಕ್ಷೇಮಾಭಿವೃದ್ಧಿ ಸಂಘದ ರಚನಾ ಸಭೆ ಭಾನುವಾರ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು.
ಬಿ.ಸಿ.ರೋಡಿನ ಹಿರಿಯ ವಕೀಲ ಜಯರಾಮ ರೈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ನಾವು ಸಂಘಟನೆಯಲ್ಲಿ ನಾವು ತೊಡಗಿಸಿಕೊಳ್ಳುತ್ತೇವೆಯೋ ಅದು ಅತ್ಯಂತ ಮುಖ್ಯವಾಗಿರುತ್ತದೆ ಕಷ್ಟಗಳು ಬಂದಾಗ ಎಂದಿಗೂ ಸದಸ್ಯರನ್ನು ಸಂಘ ಬಿಡವುದಿಲ್ಲ. ಅದು ನಮ್ಮಸಂಸ್ಥೆಯ ಸದಸ್ಯ ಎನ್ನುವ ಮನೋಭಾವದಿಂದ ನೆರವಾಗುತ್ತದೆ. ಸದಸ್ಯರಲ್ಲಿ ಸಕರಾತ್ಮಕ ಚಿಂತನೆ, ನಂಬಿಕೆ, ಭರವಸೆ, ವಿಶ್ವಾಸ ಇದ್ದಾಗ ಸಂಘಟನೆ ಯಶಸ್ವಿಯಾಗಿ ಮುನ್ನಡೆಯಲು ಸಾಧ್ಯ ಎಂದರು.
ನಿವೃತ್ತ ಬಿಎಸ್ ಎಫ್ ಡೆಪ್ಯೂಟಿ ಕಮಾಂಡೆಂಟ್ ಚಂದಪ್ಪ ಮೂಲ್ಯ.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತವಿಕವಾಗಿ ಮಾತನಾಡಿ ನಿವೃತ್ತ ಯೋಧರು ತಮ್ಮ ಪಿಂಚಣಿ, ಮಕ್ಕಳ ವಿದ್ಯಾಭ್ಯಾಸ, ಕುಟುಂಬ ವ್ಯವಸ್ಥೆ, ಸಮಾಜ ಸೇವೆ ಮೊದಲಾದ ಕಾರ್ಯಗಳನ್ನು ಸೂಸೂತ್ರವಾಗಿ ಮಾಡಲು ಸಂಘ ಅಗತ್ಯ. ಹಲವು ಸಂದರ್ಭಗಳಲ್ಲಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಲು ಕಾನೂನಿನ ಅರಿವು ಇರುವುದಿಲ್ಲ ಆಗ ಸಂಘ ನೆರವಿಗೆ ಬರುತ್ತದೆ ಎಂದರು.
ನಿವೃತ್ತ ಬಿಎಸ್ ಎಫ್ ಡೆಪ್ಯೂಟಿ ಕಮಾಂಡೆಂಟ್ ಕಿರಣ್ ಗೋವಿಂದ್, ನಿವೃತ್ತ ಸಹಾಯಕ ಕಮಾಂಡೆಂಟ್ ಮೊಯ್ದೀನ್, ಇನ್ಸ್ ಪೆಕ್ಟರ್ ಮಿನಿಸ್ಟ್ರೀಯಲ್ ಮಹೇಶ್ ಕರ್ಕೆರ, ಸಂಜೀವ ಕುಲಾಲ್,ಕೆ.ಪಿ.ಗೌಡ, ಸಂಯೋಜಕ ವಿದೀಪ್ ಕುಮಾರ್ ಉಪಸ್ಥಿತರಿದ್ದರು. ಲಕ್ಷ್ಮಣ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಡಯಾನ ವೇಗಸ್ ವಂದಿಸಿದರು.
ನೂತನ ಪದಾಧಿಕಾರಿಗಳ ಆಯ್ಕೆ: ಕರಾವಳಿ ನಿವೃತ್ತ ಬಿ ಎಸ್ ಎಫ್ ಯೋಧರ ಕ್ಷೇಮಾಭಿವೃದ್ಧಿ ಸಂಘ ರಚಿಸಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಚಂದಪ್ಪ ಮೂಲ್ಯ, ಅಧ್ಯಕ್ಷರಾಗಿ ಕಿರಣ್ ಗೋವಿಂದ, ಪ್ರಧಾನ ಕಾರ್ಯದರ್ಶಿಯಾಗಿ ವಿದೀಪ್ ಕುಮಾರ್, ಕೋಶಾಧಿಕಾರಿಯಾಗಿ ಕೆ.ಪಿ. ಗೌಡ ಆಯ್ಕೆಯಾದರು.11 ಮಂದಿಯ ಕಾರ್ಯಕಾರಿ ಸಮಿತಿಯನ್ನು ಈ ಸಂದರ್ಭ ರಚಿಸಲಾಯಿತು.
Be the first to comment on "ಕರಾವಳಿ ನಿವೃತ್ತ ಬಿ.ಎಸ್.ಎಫ್. ಯೋಧರ ಕ್ಷೇಮಾಭಿವೃದ್ಧಿ ಸಂಘದ ರಚನಾ ಸಭೆ"