ಬಿ.ಸಿ.ರೋಡ್ ಸರ್ವೀಸ್ ರಸ್ತೆಯಿಂದ ವಿವೇಕನಗರ ರಸ್ತೆಗೆ ಟರ್ನ್ ಮಾಡುವುದು ಹೇಗೆ?

ಜಾಹೀರಾತು

 

ಜಾಹೀರಾತು

ಜಾಹೀರಾತು

ಬಿ.ಸಿ.ರೋಡ್ ಪೇಟೆಯಲ್ಲಿ ಫ್ಲೈಓವರ್ ಬಳಿ ಸರ್ವೀಸ್ ರಸ್ತೆ ನಿರ್ಮಾಣವಾಗುವ ಸಂದರ್ಭ ಸರಿಯಾಗಿ ರಸ್ತೆ ಅಗಲಗೊಳ್ಳದ ಪರಿಣಾಮ ಸಮಸ್ಯೆಯನ್ನು ಭವಿಷ್ಯದಲ್ಲಿ ಅನುಭವಿಸಬೇಕಾದೀತು ಎಂಬ ಕುರಿತ ಸರಣಿ ವರದಿಗಳು www.bantwalnews.comನಲ್ಲಿ ಪ್ರಕಟವಾಗಿದ್ದವು. ಇದೀಗ ಅದು ನಿಜ ಆಗುತ್ತಿದೆ. ಸರ್ವೀಸ್ ರಸ್ತೆಯ ಪಶ್ಚಾತ್ ಪರಿಣಾಮಗಳು ಹಾಗೂ ಒಟ್ಟಾರೆಯಾಗಿ ನಿರ್ಮಿಸಲಾದ ರಸ್ತೆಯ ಪರಿಣಾಮ, ಬಿ.ಸಿ.ರೋಡಿನ ವಿವೇಕನಗರ ಎಂಬ ಪುಟ್ಟ ಜಾಗಕ್ಕೆ ತೆರಳುವವರು ಸಂಕಟಪಡಬೇಕಾಗಿದೆ.

ಈ ರಸ್ತೆಯಲ್ಲಿ ವಾಹನಗಳನ್ನು ತಿರುಗಿಸುವುದೇ ದೊಡ್ಡ ಸವಾಲು. ಸರಕಾರಿ ನೌಕರರ ಭವನದ ಎದುರು ವಿವೇಕನಗರಕ್ಕೆ ತಿರುಗಬೇಕು. ಸರ್ವೀಸ್ ರಸ್ತೆಯಿಂದ ಅಲ್ಲಿಗೆ ತಿರುಗುವುದು ಎಂದರೆ ಅಕ್ಷರಶಃ ಯೂಟರ್ನ್ ಹೊಡೆಯುವುದು ಎಂದರ್ಥ. ಎಲ್ಲವೂ ಸರಿಯಾಗಿದ್ದರೆ, ತಿರುಗಿಸುವುದಕ್ಕೇನೂ ದೊಡ್ಡ ಸಮಸ್ಯೆ ಆಗುವುದಿಲ್ಲ. ಆದರೆ ತಿರುಗುವ ಜಾಗ ಮಾತ್ರ ಅತಿ ಡೇಂಜರ್. ಅಲ್ಲೇ ವಾಹನಗಳು ಪಾರ್ಕ್ ಮಾಡಲಾಗುತ್ತದೆ. ಅಲ್ಲೇ ಮಂಗಳೂರಿಗೆ ಬಸ್ಸುಗಳಿಗೆ ಕಾಯುವ ಜನರು ಇರುತ್ತಾರೆ, ಅದೇ ಜಾಗದಲ್ಲಿ ಮಂಗಳೂರಿಗೆ ತೆರಳುವ ಬಸ್ಸುಗಳು ನಿಲ್ಲುತ್ತವೆ. ಹೀಗಿರುವ ಪರಿಸ್ಥಿತಿಯಲ್ಲಿ ವಾಹನಗಳನ್ನು ಹೇಗೆ ತಿರುಗಿಸುವುದು ಅಥವಾ ವಿವೇಕನಗರದಿಂದ ಸರ್ವೀಸ್ ರಸ್ತೆಗೆ ಹೇಗೆ ಬರುವುದು ಎಂಬ ಪ್ರಶ್ನೆಯನ್ನು ಸ್ಥಳೀಯರು ಮುಂದಿಡುತ್ತಿದ್ದಾರೆ. ವಿವೇಕ ನಗರ ರಸ್ತೆಗೆ ಪ್ರವೇಶ ಮಾಡುವ ರಸ್ತೆಯಲ್ಲಿ ಯಾರೋ ಕಾಂಕ್ರೀಟ್  ಅಗೆದುಹಾಕಿದ್ದಾರೆ.ಬಳಿಕ ಕೇವಲ ಜಲ್ಲಿಹುಡಿ ಹಾಕಲಾಗಿದೆಯೇ ವಿನಃ ಮತ್ತಷ್ಟು ರಸ್ತೆ ಕೆಟ್ಟದಾಗಿದೆ ಎಂಬುದು ಸ್ಥಳೀಯರ ದೂರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಬಿ.ಸಿ.ರೋಡ್ ಸರ್ವೀಸ್ ರಸ್ತೆಯಿಂದ ವಿವೇಕನಗರ ರಸ್ತೆಗೆ ಟರ್ನ್ ಮಾಡುವುದು ಹೇಗೆ?"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*