ಛತ್ತಿಸ್ ಗಡದಲ್ಲಿ ನಡೆದ ರಾಷ್ಟ್ರೀಯ ಮಟ್ಟದ 19 ರ ವಯೋಮಿತಿಯ ಬಾಲಕರ ವಾಲಿಬಾಲ್ ಪಂದ್ಯಾಟದಲ್ಲಿ ಸಾಲೆತ್ತೂರು ಗೌರಿಕೋಡಿ ನಿವಾಸಿ ಷಷ್ಠೀಶ್ ಪಿ ಶೆಟ್ಟಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.
ಜಾಹೀರಾತು
ಇವರು ಮಂಗಳೂರಿನ ಶಾರದಾ ಪಿ.ಯು. ಕಾಲೇಜ್ ನ ದ್ವಿತೀಯ ವರ್ಷದ ವಿಜ್ಞಾನ ವಿಭಾಗದಲ್ಲಿ ಕಲಿಯುತ್ತಿದ್ದಾರೆ. ವಾಲಿಬಾಲ್ ನಲ್ಲಿ ರಾಷ್ಟ್ರೀಯ ಮಟ್ಟದ ಸ್ಕೂಲ್ ಗೇಮ್ ಫೆಡರೇಶನ್ ಅಪ್ ಇಂಡಿಯಾ ಎಂಬ ಸಂಸ್ಥೆಗೆ ಆಯ್ಕೆಯಾಗಿದ್ದಾರೆ. ಸಾಲೆತ್ತೂರು ಗೌರಿಕೋಡಿ ನಿವಾಸಿ ಮಾಜಿ ಕಬ್ಬಡಿ ಹಾಗೂ ವಾಲಿಬಾಲ್ ಆಟಗಾರ ಪ್ರವೀಣ್ ಶೆಟ್ಟಿ ಮತ್ತು ಅಭಿಮತ ಟಿವಿ ಮಂಗಳೂರು ಆಡಳಿತ ಪಾಲುದಾರೆ ಮಮತಾ ಪಿ ಶೆಟ್ಟಿ ದಂಪತಿ ಪುತ್ರರಾಗಿದ್ದಾರೆ.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ರಾಷ್ಟ್ರೀಯ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಷಷ್ಠೀಶ್ ಪಿ ಶೆಟ್ಟಿಗೆ ಪ್ರಶಸ್ತಿ"