![](https://i0.wp.com/bantwalnews.com/wp-content/uploads/2022/08/BANTWALNEWS-1.jpg?resize=683%2C236&ssl=1)
![](https://i0.wp.com/bantwalnews.com/wp-content/uploads/2022/10/sambhrama.jpg?resize=640%2C640&ssl=1)
ಒತ್ತಾಯದಿಂದ ಭಾಷೆ ಉಳಿಸಲು ಸಾಧ್ಯವಿಲ್ಲ, ಅದರ ಮೇಲೆ ಪ್ರೀತಿ ಇದ್ದಾಗ ಭಾಷೆ ಅಭಿವೃದ್ಧಿಗೊಳ್ಳುತ್ತದೆ, ಉಳಿಯುತ್ತದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹೇಳಿದರು.
![](https://i0.wp.com/bantwalnews.com/wp-content/uploads/2022/11/WhatsApp-Image-2022-11-01-at-10.38.01-AM.jpeg?resize=1024%2C683&ssl=1)
ಬಂಟ್ವಾಳ ಆಡಳಿತ ಸೌಧದಲ್ಲಿ ಮಂಗಳವಾರ ತಾಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ 67ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
![](https://i0.wp.com/bantwalnews.com/wp-content/uploads/2022/11/WhatsApp-Image-2022-11-01-at-10.38.01-AM-1.jpeg?resize=1024%2C683&ssl=1)
ದಕ್ಷಿಣ ಕನ್ನಡದಲ್ಲಿ ತುಳು, ಕೊಂಕಣಿ, ಬ್ಯಾರಿ ಮಾತೃಭಾಷೆಯವರು ಅಧಿಕವಿದ್ದರೂ ಕನ್ನಡದ ಮೇಲೆ ಅಭಿಮಾನವಿರುವ ಕಾರಣ, ಸ್ಪಷ್ಟವಾಗಿ ಮಾತನಾಡುವ ಮೂಲಕ ಕನ್ನಡ ಭಾಷೆಯನ್ನು ಬೆಳೆಸುವ ಕಾರ್ಯ ಮಾಡುತ್ತಿದ್ದೇವೆ ಎಂದರು.
![](https://i0.wp.com/bantwalnews.com/wp-content/uploads/2022/11/WhatsApp-Image-2022-11-01-at-10.38.00-AM-1.jpeg?resize=1024%2C683&ssl=1)
ತಹಸೀಲ್ದಾರ್ ಡಾ. ಸ್ಮಿತಾ ರಾಮು ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕರ್ನಾಟಕವು ಕಲೆ, ಶಿಲ್ಪದ ಬೀಡಾಗಿದ್ದು, ಹಲವರ ಪರಿಶ್ರಮದಿಂದ ರಾಜ್ಯೋದಯವಾಗಿದೆ ಎಂದರು.
ಕನ್ನಡ ಭಾಷೆ, ಬೆಳವಣಿಗೆ ಮತ್ತು ಅದನ್ನು ಉಳಿಸುವ ಕುರಿತು ರಮೇಶ್ ಮೇಲ್ಕಾರ್ ಮಾತನಾಡಿದರು.
![](https://i0.wp.com/bantwalnews.com/wp-content/uploads/2022/09/AANIYA-DARBAR.jpg?resize=729%2C1024&ssl=1)
ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ, ಡಿವೈಎಸ್ಪಿ ಪ್ರತಾಪ್ ಸಿಂಗ್ ಥೋರಾಟ್ ಈ ಸಂದರ್ಭ ಉಪಸ್ಥಿತರಿದ್ದರು. ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ವಂದಿಸಿದರು. ಹಿರಿಯ ಕಲಾವಿದ ಮಂಜು ವಿಟ್ಲ ಕಾರ್ಯಕ್ರಮ ನಿರ್ವಹಿಸಿದರು. ಶಾಲೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
![](https://i0.wp.com/bantwalnews.com/wp-content/uploads/2022/11/WhatsApp-Image-2022-11-01-at-10.38.00-AM.jpeg?resize=683%2C1024&ssl=1)
![](https://i0.wp.com/bantwalnews.com/wp-content/uploads/2019/10/bantwalnews.png?w=400&ssl=1)
Be the first to comment on "ಭಾಷೆ ಉಳಿಯುವುದು ಒತ್ತಾಯದಿಂದಲ್ಲ, ಪ್ರೀತಿಯಿದ್ದರೆ ಸಾಕು: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್"