![](https://i0.wp.com/bantwalnews.com/wp-content/uploads/2022/09/128172436_3859346387409072_3292409642019619311_n.jpg?resize=1024%2C1024&ssl=1)
![](https://i0.wp.com/bantwalnews.com/wp-content/uploads/2022/08/WhatsApp-Image-2022-08-25-at-7.55.14-AM-1.jpeg?resize=1024%2C1024&ssl=1)
ಕನ್ನಡದ ಕಿರುತೆರೆಯ ಭರವಸೆಯ ನಟ, ಮಗಳು ಜಾನಕಿ ಮೂಲಕ ಪ್ರಸಿದ್ಧರಾಗಿದ್ದ ರವಿಪ್ರಸಾದ್ ಮಂಡ್ಯ ಇನ್ನಿಲ್ಲ. ತಂದೆ ಡಾ. ಎಚ್.ಎಸ್.ಮುದ್ದೇಗೌಡ, ತಾಯಿ, ತಂಗಿಯರು, ಪತ್ನಿ, ಪುತ್ರ ಹಾಗೂ ಅಪಾರ ಸ್ನೇಹಿತ ಬಳಗವನ್ನು ಅವರು ಬಿಟ್ಟುಹೋಗಿದ್ದಾರೆ. ಬಹುಅಂಗಾಂಗ ವೈಫಲ್ಯದಿಂದ ಅವರು ನಿಧನ ಹೊಂದಿದ್ದಾರೆ. ಕಳೆದ ಹಲವು ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜಾಂಡಿಸ್ ಎಂದು ಆಸ್ಪತ್ರೆ ದಾಖಲಾಗಿದ್ದರು.
![](https://i0.wp.com/bantwalnews.com/wp-content/uploads/2022/09/306580237_1724051344735598_1867700521490369582_n.jpg?resize=1000%2C915&ssl=1)
ಮಂಡ್ಯದಲ್ಲಿ ರಂಗಭೂಮಿಯತ್ತ ಆಸಕ್ತರಾಗಿದ್ದ ಅವರು ಓದಿದ್ದು ಇಂಗ್ಲೀಷ್ ಎಂ.ಎ, ಎಲ್.ಎಲ್.ಬಿ. ಟಿ.ಎಸ್.ನಾಗಾಭರಣ ಅವರ ಮಹಾಮಾಯಿ ಧಾರಾವಾಹಿಯಲ್ಲಿ ಅಭಿನಯಿಸುವ ಮೂಲಕ ನಟನೆ ಆರಂಭ. ಮಿಂಚು, ಮುಕ್ತ ಮುಕ್ತ, ಚಿತ್ರಲೇಖ ಸೇರಿ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದ ಅವರು ಇತ್ತೀಚಿಗಿನ ಮಗಳು ಜಾನಕಿ ಧಾರಾವಾಹಿಯ ಚಂದು ಭಾರ್ಗಿ ಪಾತ್ರದ ಮೂಲಕ ಗಮನ ಸೆಳೆದಿದ್ದರು. ಟಿ.ಎನ್.ಸೀತಾರಾಮ್ ಅವರ ನಿರ್ದೇಶನದ ಕಾಫಿ ತೋಟ ಸಿನಿಮಾದಲ್ಲೂ ಅವರು ಅಭಿನಯಿಸಿದ್ದರು.
![](https://i0.wp.com/bantwalnews.com/wp-content/uploads/2022/09/AANIYA-DARBAR.jpg?resize=729%2C1024&ssl=1)
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
![](https://i0.wp.com/bantwalnews.com/wp-content/uploads/2019/10/bantwalnews.png?w=400&ssl=1)
Be the first to comment on "‘ಮಗಳು ಜಾನಕಿ’ ಖ್ಯಾತಿಯ ಮಂಡ್ಯ ರವಿಗೆ ಆಗಿದ್ದೇನು?"