ಹೆದ್ದಾರಿ ಸಂಚಾರ, ಎಚ್ಚರ ತಪ್ಪಿದರೆ ಸಂಚಕಾರ

Pic: Venkatramana Pai Maani (FILE PHOTO)
ಕಲ್ಲಡ್ಕ ಪೇಟೆ ಫ್ಲೈಓವರ್ ಬಂದಾಗ ರಸ್ತೆ ಅಪಘಾತದ ಅಪಾಯ ಕಡಿಮೆ ಆಗಬಹುದೇ (ಇದು ವಾಹನ ಸಂಚಾರ ಇಲ್ಲದಾಗ ತೆಗೆದ ಕಡತಚಿತ್ರ)

ಹರೀಶ ಮಾಂಬಾಡಿ

ಸಂಚಾರ ಮತ್ತು ಸಂಚಕಾರ ಶಬ್ದಗಳ ಹಾಗೆಯೇ ವಾಹನ ಚಾಲನೆಯಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಎಚ್ಚರ ತಪ್ಪಿದರೂ ಆಪತ್ತು ತಪ್ಪಿದ್ದಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ.  ವಾಹನ ಚಲಾಯಿಸುವವರ ಬಳಿ ಜಾಗ್ರತೆ ಮಾರ್ರೆ ಎಂದರೆ ನಿಮಗೆಷ್ಟು ಗೊತ್ತುಂಟು ಎಂದು ಮಾರುತ್ತರ ಕೊಡುವವರೇ ಅಧಿಕ. ಹೆಲ್ಮೆಟ್ ಹಾಕಿ ಎಂದು ಬಿಸಿಲಲ್ಲಿ ನಿಲ್ಲುವ ಪೊಲೀಸರು ಹೇಳುವುದು ತಮ್ಮ ಒಳ್ಳೆಯದಕ್ಕೆಂದು ಭಾವಿಸುವ ಸೀಟ್ ಬೆಲ್ಟ್ ಹಾಕಿ ವಾಹನ ಚಲಾಯಿಸಿದರೆ ಅಪಘಾತ ಸಂದರ್ಭ ಅಪಾಯ ಕಡಿಮೆ ಮಾಡಬಹುದು ಎಂಬ ಬುದ್ಧಿವಂತಿಕೆ ಎಲ್ಲರಿಗೂ ಇದ್ದರೂ ಅತಿಬುದ್ಧಿವಂತಿಕೆ ಪ್ರದರ್ಶಿಸಿ ಮಾಡಬಾರದ ಜಾಗದಲ್ಲೆಲ್ಲಾ ಓವರ್ ಟೇಕ್, ಓವರ್ ಸ್ಪೀಡ್ ಹೋಗಿ ಎಡವಟ್ಟಾಗುವುದು ಉಂಟು.

ರಸ್ತೆಯ ಓರೆಕೋರೆಗಳು, ಅವೈಜ್ಞಾನಿಕ ತಿರುವುಗಳು, ರಚನೆಗಳು, ಕಣ್ಣಿಗೆ ರಾಚುವಂಥ ಹೆಡ್ ಲೈಟ್ ಗಳು ಇದಕ್ಕೆ ಪೂರಕವಾದ ವಾತಾವರಣ ನೀಡುತ್ತವೆ. ಹೀಗಾಗಿ ಬಂಟ್ವಾಳದಲ್ಲಿ ಹಾದುಹೋಗುವ ಹೆದ್ದಾರಿಯಲ್ಲಿ ಅಪಘಾತಗಳು ಆಗಾಗ್ಗೆ ಕಂಡುಬರುತ್ತಿವೆ. ರಸ್ತೆ ಸಾಮರ್ಥ್ಯಕ್ಕಿಂತ ದುಪ್ಪಟ್ಟು ವಾಹನಗಳು ಸಂಚರಿಸುವ, ತೀರಾ ಅಪಾಯಕಾರಿಯಾಗಿ ಓವರ್ ಟೇಕ್ ಮಾಡುವ ಸನ್ನಿವೇಶಗಳನ್ನು ಹೊಂದಿರುವ ಬಿ.ಸಿ.ರೋಡ್ ಅಡ್ಡಹೊಳೆ ರಸ್ತೆಯ ವಿಸ್ತರಣೆ, ಅಭಿವೃದ್ಧಿ ಕಾಮಗಾರಿ ಇನ್ನೂ ವೇಗ ಪಡೆದುಕೊಂಡಿಲ್ಲ. ಪುತ್ತೂರು, ಮೈಸೂರುಗಳಿಗೆ ಕವಲೊಡೆಯುವ ಮಾಣಿ, ವಿಟ್ಲಕ್ಕೆ ದಾರಿ ತೋರಿಸುವ ಕಲ್ಲಡ್ಕ ಹಾಗೂ ಕೊಣಾಜೆಗೆ ತಿರುಗುವ ಮೇಲ್ಕಾರ್ ಶರವೇಗದ ವಾಹನಗಳಿಗೆ ಬ್ರೇಕ್ ಹಾಕಿಸುವ ತಿರುವುಗಳು ಹಾಗೂ ಜಂಕ್ಷನ್ ಗಳು ಸದಾ ಮೃತ್ಯುವಿಗೆ ಬಾಯ್ದೆರೆಯುತ್ತಿವೆ. ಈ ಮೂರು ಕಡೆಗಳಲ್ಲೂ ಕಳೆದ ಕೆಲ ವರ್ಷಗಳಲ್ಲಿ ಅಪಘಾತಗಳು ಸಂಭವಿಸುತ್ತಲೇ ಇದೆ. ವರ್ಷದ ಹಿಂದೆ ಕಲ್ಲಡ್ಕದಲ್ಲಿ ಇಂಜಿನಿಯರ್ ಒಬ್ಬರು ಮೃತಪಟ್ಟಿದ್ದರೆ, ಇದೀಗ ಮೆಲ್ಕಾರ್ ನಲ್ಲಿ ಮಂಗಳವಾರ ರಾತ್ರಿ ಸರ್ವೀಸ್ ಸ್ಟೇಶನ್ ನಲ್ಲಿ ಕೆಲಸ ಮಾಡುವ ಯುವಕನೋರ್ವನನ್ನು ಅಪಘಾತ ಬಲಿ ತೆಗೆದುಕೊಂಡಿದೆ. ಎಲ್ಲಿಯವರೆಗೆ ಎಂದರೆ ಲಾರಿ ಚಾಲಕ ಅಪಘಾತ ತಪ್ಪಿಸಲು ಹರಸಾಹಸಪಟ್ಟ ವೇಳೆ ಸರ್ಕಲ್ ಕಟ್ಟೆಗೇ ಡಿಕ್ಕಿಹೊಡೆದು, ಸರ್ಕಲ್ ಹುಡಿಯಾಗಿದೆ.

ಜಾಹೀರಾತು

ಅಪಘಾತ ಪಾಯಿಂಟ್ ಗಳು: ಬಂಟ್ವಾಳದ ಬ್ರಹ್ಮಶ್ರೀ ನಾರಾಯಣಗುರು ವೃತ್ತದ ಬಳಿ ಬಂಟ್ವಾಳ ಪೇಟೆಗೆ ತಿರುಗುವ ಜಾಗ, ಬಿ.ಸಿ.ರೋಡ್ ಪೊಳಲಿ ಕೈಕಂಬಕ್ಕೆ ತಿರುಗುವ ಜಾಗ, ಬಿ.ಸಿ.ರೋಡಿನ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಿಂದ ಸಂಚಯಗಿರಿ (ಪೋಸ್ಟ್ ಆಫೀಸ್) ಕಡೆಗೆ ತಿರುಗುವ ಜಾಗ, ಬಂಟ್ವಾಳ ಪೇಟೆ, ಮೂಡುಬಿದಿರೆಗೆ ತಿರುಗುವ ತುಂಬ್ಯ ಜಂಕ್ಷನ್ ಹಾಗೂ ಪಾಣೆಮಂಗಳೂರು ಕಲ್ಲುರ್ಟಿ ಸನ್ನಿಧಿಯ ಎದುರು ಇರುವ ನರಿಕೊಂಬು ಕಡೆಗೆ ತಿರುಗುವ ರಸ್ತೆಯ ಮುಂಭಾಗ ಸಣ್ಣಪುಟ್ಟ ಅಪಘಾತಗಳು, ಒಮ್ಮೊಮ್ಮೆ ಮೃತ್ಯುಪಾಶಕ್ಕೆ ಸಿಲುಕುವ ಮಟ್ಟಕ್ಕೆ ಹೋಗುವ ಆಕ್ಸಿಡೆಂಟ್ ಗಳಿಗೆ ಹೆಸರುವಾಸಿ. ಹೈವೇ ಎಂದ ಮೇಲೆ ವಾಹನಗಳು ವೇಗವಾಗಿ ಸಾಗುವುದು ಸಹಜ. ಆದರೆ ಇದು ದ್ವಿಪಥವಾಗಿರುವ ಕಾರಣ, ವೇಗನಿಯಂತ್ರಣ ಅಗತ್ಯ. ಹೈವೇ ಪಾಟ್ರೋಲಿಂಗ್ ಪೊಲೀಸ್ ತೀರಾ ಕಾಳಜಿರಹಿತ ಚಾಲನೆ ಮಾಡುವ ವಾಹನಗಳನ್ನು ಗುರುತಿಸಿ ಸಮರ್ಪಕ ದಂಡ ವಿಧಿಸುವುದು, ಜಂಕ್ಷನ್ ಗಳಲ್ಲಿ ಪೊಲೀಸ್ ಮತ್ತು ಹೋಂ ಗಾರ್ಡ್ ಗಳು ಮಾರ್ಗದತ್ತಲೇ ಕಣ್ಣಿಟ್ಟು ಕಾಯುವುದನ್ನು ಮಾಡಬೇಕಾಗುತ್ತದೆ.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಹೆದ್ದಾರಿ ಸಂಚಾರ, ಎಚ್ಚರ ತಪ್ಪಿದರೆ ಸಂಚಕಾರ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*