ವಿಶ್ವ ಹಿಂದು ಪರಿಷತ್ ಬಜರಂಗದಳ ಭದ್ರಕಾಳಿ ಶಾಖೆ ಏರಮಲೆ ಘಟಕ ನರಿಕೊಂಬು ಇದರ ವತಿಯಿಂದ ಮಹಾತ್ಮ ಗಾಂಧಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿ ಜನ್ಮದಿನ ಹಾಗೂ ನಮ್ಮ ಪ್ರಧಾನಿ ನರೇಂದ್ರ ಮೋದಿಜಿಯವರ 71ನೇ ಜನ್ಮದಿನಾಚರಣೆ ಪ್ರಯುಕ್ತ ಸೇವೆ ಮತ್ತು ಸಮರ್ಪಣಾ ಅಭಿಯಾನದ ಅಂಗವಾಗಿ ಸ್ವಚ್ಛ ಭಾರತ ಅಭಿಯಾನವು ಮಹಿಳಾ ಹಾಲು ಉತ್ಪಾದಕರ ಸಂಘ ಅಂತರದಿಂದ ಕೋದಂಡರಾಮ ಭಜನಾಮಂದಿರ ಏರಮಲೆ ವರಗೆ ನಡೆಯಿತು ಈ ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ಸಂಚಾಲಕರಾದ ದಯಾನಂದ್ ನೆಲ್ಯಡ್ಕ ಬಜರಂಗದಳ ಸಂಚಾಲಕ ಲೋಹಿತ್ ಪೂಜಾರಿ ಬೋಳಂತೂರು ಸಂಘಟನಾ ಪ್ರಮುಖರಾದ ಜಗದೀಶ್ ಸನಿಲ್, ಭಾಜಪ ನರಿಕೊಂಬು ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ಯಶೋಧರ ಕರ್ಬೆಟ್ಟು ಮಾತನಾಡಿ ಇಂತಹ ಕಾರ್ಯಕ್ರಮವನ್ನು ನಮ್ಮ ದಿನಚರಿಯಲ್ಲಿ ಅಳವಡಿಸಿಕೊಂಡಲ್ಲಿ ಮೋದಿಜಿಯವರ ಕಲ್ಪನೆಯನ್ನು ಸಾಕಾರಗೊಳಿಸಲು ಸಾಧ್ಯ ಎಂದು ಹೇಳಿದರು ಪಂಚಾಯತ್ ಸದಸ್ಯರುಗಳಾದ ಕಿಶೋರ್ ಶೆಟ್ಟಿ ಅಂತರ ರವಿ ಅಂಚನ್ ಅರುಣ್ ಬೋರುಗುಡ್ಡೆ ನಾರಾಯಣ ದರ್ಖಾಸು, ಚೇತನ್ ದಿಂಡಿಕೆರೆ ಉಷಾಲಾಕ್ಷಿ ರಮಾನಂದ್, ಮಮತಾ ಸುಧೀರ್, ಪ್ರಮುಖರಾದ ವಾಮನ್ ಕುಲಾಲ್, ಪುರುಷೋತ್ತಮ್ ಬಂಗೇರ ನಾಟಿ, ಅಶೋಕ್ ಮರ್ದೊಳಿ, ಪ್ರಭಾಕರ್ ನೆಲ್ಯಡ್ಕ ಕಿಷನ್ ಅಂತರ ಪ್ರವೀಣ್ ಅಂತರ ಶಶಾಂಕ್ ಶೆಟ್ಟಿ ಮನೋಜ್ ಅಂತರ ಕಾರ್ತಿಕ್ ನೆಲ್ಯಡ್ಕ ದೀಕ್ಷಣ್ ಏರಮಲೆ ಮೊದಲಾದ ಸಂಘಟನಾ ಕಾರ್ಯಕರ್ತರು ಉಪಸ್ಥಿತರಿದ್ದರು
ವಿಹಿಂಪ, ಬಜರಂಗದಳ ಶಾಖೆ ವತಿಯಿಂದ ಸ್ವಚ್ಛತಾ ಕಾರ್ಯ
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ವಿಹಿಂಪ, ಬಜರಂಗದಳ ಶಾಖೆ ವತಿಯಿಂದ ಸ್ವಚ್ಛತಾ ಕಾರ್ಯ"