ಬಂಟ್ವಾಳ: ಮಾಣಿ ಸಮೀಪದ ಪೆರಾಜೆ ಗ್ರಾಮದ ಬುಡೋಳಿಯಲ್ಲಿ ಭಾರೀ ಮಳೆಗೆ ಗುಡ್ಡ ಕುಸಿದು ನಾಲ್ಕು ಮನೆಗಳಿಗೆ ಹಾನಿಯಾಗಿದೆ. ಜೋಹರಾ ಅಬೂಬಕ್ಕರ್, ಬಶೀರ್, ಅವ್ವಮ್ಮ ಅಬ್ದುಲ್ ರಹಿಮಾನ್ ಮತ್ತು ಸುಲೈಮಾನ್ ಅವರ ಮನೆಯೊಳಗೆ ಮಣ್ಣು ಮತ್ತು ಕೆಸರು ನೀರು ತುಂಬಿ ವಾಸಿಸಲು ಅಯೋಗ್ಯವಾಗಿದೆ. ಗುಡ್ಡ ಕುಸಿದ ಮಣ್ಣು ಜೋಹರಾ ಅಬೂಬಕ್ಕರ್ ಅವರ ಕುಡಿಯುವ ನೀರಿನ ಬಾವಿಯನ್ನು ಮುಚ್ಚಿಬಿಟ್ಟಿದೆ. ಬಾವಿಯಿಂದ ಎದ್ದ ನೀರು ಮತ್ತು ಭಾರೀ ಮಳೆಗೆ ಬಂದ ಕೆಸರು ನೀರು ಈ ಮನೆಗಳಿಗೆ ತುಂಬಿಕೊಂಡಿದೆ. ಸ್ಥಳಕ್ಕೆ ಪೆರಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ರೋಹಿಣಿ, ಪಿಡಿಒ ಶಂಭು ಕುಮಾರ್ ಶರ್ಮ ಮತ್ತು ಗ್ರಾಮಕರಣಿಕರಾದ ಸುರಕ್ಷಾ ಭೇಟಿ ನೀಡಿದ್ದಾರೆ.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಬುಡೋಳಿ: ಗುಡ್ಡ ಕುಸಿದು 4 ಮನೆಗಳಿಗೆ ಹಾನಿ; ನುಗ್ಗಿದ ಕೆಸರು ನೀರು"