ವ್ಯಾಕ್ಸಿನ್ ಪಡೆಯೋಣ ಕೊರೋನಾ ಓಡಿಸೋಣ: ವೈ.ಸಿ.ಎಸ್. ಸೂರಿಕುಮೇರು ಘಟಕದಿಂದ ಲಸಿಕೆ ಅಭಿಯಾನ

ಬಂಟ್ವಾಳ: ಕೊರೋನಾದ ನಿಗ್ರಹಕ್ಕೆ ಸರ್ಕಾರಿ ಲಸಿಕೆ ಪಡೆದುಕೊಳ್ಳುವಂತೆ ಸರ್ಕಾರ ಎಚ್ಚರಿಸುತ್ತಿರುವ ಮಧ್ಯೆ ಸೂರಿಕುಮೇರು ಸೈಂಟ್ ಜೋಸೆಫ್ ಚರ್ಚ್ ನ ವೈ.ಸಿ.ಎಸ್. ಘಟಕ ವ್ಯಾಕ್ಸಿನ್ ಪಡೆಯೋಣ ಕೊರೋನಾ ಓಡಿಸೋಣ ಎನ್ನುವ ಘೋಷ ವಾಕ್ಯದಡಿ ಲಸಿಕಾ ಅಭಿಯಾನವನ್ನು ಹಮ್ಮಿಕೊಂಡಿದೆ. ಮೊಗರ್ನಾಡು ವಲಯ ವ್ಯಾಪ್ತಿಗೆ ಒಳಪಟ್ಟ ಮೊಗರ್ನಾಡ್, ಸೂರಿಕುಮೇರು, ಶಂಭೂರು, ವಿಟ್ಲ, ಪೆರುವಾಯಿ, ಸಾಲೆತ್ತೂರು, ಮಣಿಲ ಹಾಗೂ ದೇಲಂತಬೆಟ್ಟು ಚರ್ಚ್ ವ್ಯಾಪ್ತಿಯ ಕ್ರೈಸ್ತ ಬಂಧುಗಳು ಕೋವಿಡ್ ಲಸಿಕೆ ಪಡೆಯುವಲ್ಲಿ ಶೇ.100 ಸಾಧನೆ ಮಾಡುವ ನಿಟ್ಟಿನಲ್ಲಿ ಸೈಂಟ್ ಜೋಸೆಫ್ ಚರ್ಚ್ ನ ವೈ.ಸಿ.ಎಸ್. ಸೂರಿಕುಮೇರು ಬೊರಿಮಾರ್ ಘಟಕ ಕಾರ್ಯಪ್ರವೃತ್ತವಾಗಿದೆ. ಈ ಯೋಜನೆಯಂತೆ  ವೈ.ಸಿ.ಎಸ್. ಸೂರಿಕುಮೇರು ಘಟಕದ ಅಧ್ಯಕ್ಷೆ ರೀಮಾ ಪಿಂಟೋ 8 ಚರ್ಚ್ ನ ಧರ್ಮಗುರುಗಳಲ್ಲಿ ಜನರಿಗೆ ಲಸಿಕೆ ಪಡೆಯುವಂತೆ ಪ್ರೇರೇಪಿಸುವಂತೆ  ಮನವಿ ಮಾಡಿದ್ದು, ಅದರಂತೆ ಮೊದಲ ಹಂತದಲ್ಲಿ ಆಯಾ ಚರ್ಚ್ ಗಳ ವ್ಯಾಪ್ತಿಯಲ್ಲಿ ಅಲ್ಲಿನ ಧರ್ಮಗುರುಗಳು ಲಸಿಕೆ ಪಡೆಯುವಂತೆ ಜನತೆಯನ್ನು ವಿನಂತಿಸುವ ವೀಡಿಯೋವನ್ನು ಪ್ರತಿ ಚರ್ಚ್ ನ ಮನೆ ಮನೆಗಳಿಗೆ ವಾಟ್ಸಾಪ್ ಮುಖಾಂತರ ಕಳುಹಿಸಲಾಗಿದೆ. ವೀಡಿಯೋದಲ್ಲಿ, ಧರ್ಮಗುರುಗಳು ನನ್ನ ಒಲವಿನ ಸಹೋದರ ಸಹೋದರಿಯರೇ, ಕೋವಿಡ್ ರೋಗವನ್ನು ತಡೆಗಟ್ಟಲು ನಾನು ಲಸಿಕೆ ಪಡೆದಿರುವೆನು. ನೀವು ತೆಗೆದುಕೊಳ್ಳಿ. ನಮ್ಮ ಜೀವ ಸಂರಕ್ಷಿಸೋಣ, ಅದರ ಕಾಳಜಿ ವಹಿಸೋಣ, ಅವಶ್ಯವಿದ್ದಲ್ಲಿ ಮಾತ್ರ ಮನೆಯಿಂದ ಹೊರ ಬನ್ನಿ ಮಾಸ್ಕ್ ಬಳಸಿ ಅಂತರವನ್ನು ಕಾಪಾಡಿ.. ವ್ಯಾಕ್ಸಿನ್ ಪಡೆಯೋಣ ಕೊರೋನಾ ಓಡಿಸೋಣ ಎಂದು ಕೊಂಕಣಿ ಭಾಷೆಯಲ್ಲಿ ವಿನಂತಿಸಲಾಗುತ್ತಿದೆ. ಮುಂದಿನ ಹಂತದಲ್ಲಿ ಲಸಿಕೆ ಪಡೆಯಲು ಪ್ರತಿಯೊಬ್ಬರೂ ನೋಂದಣಿ ಮಾಡಲು ಪ್ರೇರೇಪಿಸುವುದು, ಲಸಿಕೆ ಲಭ್ಯತೆ ಕುರಿತಾಗಿ ಕ್ರೈಸ್ತ ಕುಟುಂಬಗಳಿಗೆ ಮಾಹಿತಿ ಒದಗಿಸುವ ಕುರಿತಾಗಿ ಸೂರಿಕುಮೇರು ಚರ್ಚ್ ನ ವೈಸಿಎಸ್ ಘಟಕ ಯೋಜನೆ ರೂಪಿಸಿದೆ. ಧರ್ಮಗುರುಗಳ ವಿಡಿಯೋ ಸಂದೇಶದಿಂದ ಆರೋಗ್ಯಜಾಗೃತಿ ಸಾಧ್ಯವಾಗುತ್ತದೆ ಎಂದ ವೈ.ಸಿ.ಎಸ್. ಸೂರಿಕುಮೇರು ಘಟಕದ ಸಚೇತಕಿ ಅನಿತಾ ರೋಷನ್ ಮಾರ್ಟಿಸ್ ಈ ಅಭಿಯಾನಕ್ಕೆ ಚಾಲನೆ ನೀಡಿದ ಎಂಟು ಚರ್ಚ್ ನ ಧರ್ಮಗುರುಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಲಸಿಕೆ ಪಡೆಯುವ ಬಗ್ಗೆ ಜಾಗೃತಿಯನ್ನು ಮೂಡಿಸುವ ವೈ.ಸಿ.ಎಸ್. ಸೂರಿಕುಮೇರು ಬೊರಿಮಾರ್ ಘಟಕದ ವಿದ್ಯಾರ್ಥಿಗಳ ಈ ಅಭಿಯಾನದ ಕುರಿತಾಗಿ ಮೊಗರ್ನಾಡ್ ವಲಯದ ಎಲ್ಲಾ ಚರ್ಚ್ ಗಳ ವ್ಯಾಪ್ತಿಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ವ್ಯಾಕ್ಸಿನ್ ಪಡೆಯೋಣ ಕೊರೋನಾ ಓಡಿಸೋಣ: ವೈ.ಸಿ.ಎಸ್. ಸೂರಿಕುಮೇರು ಘಟಕದಿಂದ ಲಸಿಕೆ ಅಭಿಯಾನ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*