ಬಂಟ್ವಾಳ: ಲಾಕ್ ಡೌನ್ ಹಿನ್ನೆಲೆಯಲ್ಲಿ ಮಾರ್ಗಸೂಚಿಯನ್ನು ಉಲ್ಲಂಘಿಸಿ ಅನಗತ್ಯ ಸಂಚಾರ ಕುರಿತು ದೂರುಗಳು ಬಂದಿದ್ದು, ಇವರಿಗೆ ಮುಲಾಜಿಲ್ಲದೆ ದಂಡ ವಿಧಿಸಬೇಕು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಸೂಚಿಸಿದ್ದಾರೆ.
ಈ ಕುರಿತು ಮಾತನಾಡಿದ ಶಾಸಕರು, ಸೋಮವಾರ ನಿಗದಿಪಡಿಸಲಾದ ಅಂಗಡಿಗಳಲ್ಲದೆ ಎಲ್ಲ ಅಂಗಡಿ ಮುಂಗಟ್ಟುಗಳೂ ತೆರವಾದ ಕುರಿತು ದೂರುಗಳು ಬಂದಿವೆ. ಮಂಗಳವಾರವೂ ಇದೇ ರೀತಿ ತೆರೆದಿದ್ದರೆ, ಅವುಗಳ ವಿಡಿಯೋ ರೆಕಾರ್ಡ್ ಮಾಡಿ, ದಂಡ ವಿಧಿಸುವ ಕ್ರಮ ಜರುಗಿಸಿ, ಅನಗತ್ಯ ವಾಹನ ಸಂಚಾರಿಗಳಿಗೂ ಕಠಿಣ ಕ್ರಮ ಜರುಗಿಸಿ, ಲಾಕ್ ಡೌನ್ ನಿಯಮಪಾಲನೆಯನ್ನು ಕಟ್ಟುನಿಟ್ಟಾಗಿ ಮಾಡುವಂತೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದ್ದಾರೆ.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಲಾಕ್ ಡೌನ್ ಸಂದರ್ಭ ಅನಗತ್ಯ ಸಂಚಾರ: ಮುಲಾಜಿಲ್ಲದೆ ದಂಡ ವಿಧಿಸಲು ಶಾಸಕ ಸೂಚನೆ"