ಮತ ಎಣಿಕೆ, ಕ್ಷಣ ಕ್ಷಣಕ್ಕೂ ಕುತೂಹಲ, ಬೆಂಬಲಿಗರ ಕಾತರ – ಘೋಷಣೆಯಾದ 70 ವಿಜೇತರ ವಿವರ ಇಲ್ಲಿದೆ

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಅತಿ ಹೆಚ್ಚು ಗ್ರಾಪಂಗಳು ಇರುವ ಬಂಟ್ವಾಳದಲ್ಲಿ ಮತ ಎಣಿಕೆ ಮೊಡಂಕಾಪು ಇನ್ಫೆಂಟ್ ಜೀಸಸ್ ಆಂಗ್ಲ ಮತ್ತು ಕನ್ನಡ ಮಾಧ್ಯಮ ಶಾಲೆಗಳಲ್ಲಿ ಇರುವ 89 ಎಣಿಕಾ ಟೇಬಲ್ ಗಳಲ್ಲಿ ನಡೆಯುತ್ತಿದ್ದು, ಚುನಾವಣಾ ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಎಣಿಕಾ ಕೇಂದ್ರದ ಹೊರಗೆ ಅಭ್ಯರ್ಥಿಗಳು ವಿಜಯೋತ್ಸವ ಆಚರಿಸುತ್ತಿದ್ದಾರೆ.

ಇದೇ ವೇಳೆ ಎರಡು ಗುಂಪುಗಳ ನಡುವೆ ಸಂಘರ್ಷಮಯ ವಾತಾವರಣವೂ ಮೂಡಿ ಬಳಿಕ ಪೊಲೀಸರ ಮಧ್ಯಪ್ರವೇಶದೊಂದಿಗೆ ಪರಿಸ್ಥಿತಿ ತಿಳಿಯಾಯಿತು.

ಬೆಳಗ್ಗೆ 8 ಗಂಟೆಯಿಂದಲೇ ಮತ ಎಣಿಕೆ ಪ್ರಕ್ರಿಯೆ ಆರಂಭಗೊಂಡಿದ್ದು, ಮೊದಲ ಸುತ್ತಿನ ಮತ ಎಣಿಕೆಯು ಮುಗಿಯವ ಸಂದರ್ಭ ಮಧ್ಯಾಹ್ನ ಸುಡುಬಿಸಿಲೇರಿತ್ತು. ಫಲಿತಾಂಶ ಘೋಷಣಾಪತ್ರವನ್ನು ಅಭ್ಯರ್ಥಿಗಳು ಪಡೆಯುವ ಮುನ್ನವೇ ಬೆಂಬಲಿಗರು ಸಂಭ್ರಮಾಚರಣೆಗಳನ್ನು ನಡೆಸುತ್ತಿದ್ದು, ಮತ್ತೊಂದು ಸುತ್ತಿನ ಎಣಿಕೆಗೆ ಬರುವ ಅಭ್ಯರ್ಥಿಗಳು ಹೊರಗೆ ಕಾಯುತ್ತಿದ್ದರು.

ಜಾಹೀರಾತು

ಇತ್ತೀಚಿನ ಮಾಹಿತಿ ಬಂದಾಗ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳೆರಡೂ ತಮ್ಮ ತಮ್ಮ ಬೆಂಬಲಿಗರು ವಿಜಯಿಯಾಗಿದ್ದಾರೆ ಎಂದು ಹೇಳುವ ಪಂಚಾಯಿತಿಗಳನ್ನು ಅವಲೋಕಿಸಿದಾಗ ಒಟ್ಟು 18 ಗ್ರಾಪಂಗಳಲ್ಲಿ 10 ಗ್ರಾಪಂಗಳ ವಿಜೇತರಲ್ಲಿ ಬಿಜೆಪಿ ಬೆಂಬಲಿತರು ಅಧಿಕವಿದ್ದರೆ, ಉಳಿದ 8 ಗ್ರಾಪಂಗಳಲ್ಲಿ 7 ಗ್ರಾಪಂಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಅಧಿಕ ಸಂಖ್ಯೆಯಲ್ಲಿದ್ದಾರೆ ಸಂಗಬೆಟ್ಟು, ಪಿಲಾತಬೆಟ್ಟು, ಕಾವಳಮುಡೂರು, ಉಳಿ, ಅಮ್ಮುಂಜೆ, ,ಮೇರಮಜಲು, ರಾಯಿ, ಅನಂತಾಡಿ,  ಇಡ್ಕಿದು, ವಿಟ್ಲಮುಡ್ನೂರುಗಳಲ್ಲಿ  ಬಿಜೆಪಿ ಬೆಂಬಲಿತರು ಗರಿಷ್ಠ ಸಂಖ್ಯೆಯಲ್ಲಿ ಜಯಗಳಿಸಿದ್ದರೆ, ಮಾಣಿಲ, ಪೆರ್ನೆ, ನಾವೂರು, ಕರಿಯಂಗಳ, ಕರೋಪಾಡಿ, ಫಜೀರು, ಪೆರ್ನೆಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಗರಿಷ್ಠ ಸಂಖ್ಯೆಯಲ್ಲಿ ಜಯಗಳಿಸಿದ್ದಾರೆ. ಬಿಜೆಪಿ 10, ಕಾಂಗ್ರೆಸ್ 7 ಪೆರಾಜೆ ಗ್ರಾಪಂ ಸಮಬಲದಲ್ಲಿದೆ ಎಂದು ರಾಜಕೀಯ ಪಕ್ಷಗಳು ಹೇಳಿಕೊಂಡಿವೆ. ಆದರೆ ಚುನಾವಣೆ ಪಕ್ಷ ಚಿಹ್ನೆಯಡಿ ನಡೆಯದ ಕಾರಣ ಕೇವಲ ವಿಜೇತ ಅಭ್ಯರ್ಥಿಗಳ ಘೋಷಣೆಯನ್ನಷ್ಟೇ ಮಾಡುತ್ತದೆ. ಸಂಜೆ 4 ಗಂಟೆಗೆ ಒದಗಿಸಲಾದ ಮಾಹಿತಿ ಪ್ರಕಾರ ವಿಜೇತರು ಇವರು.

 ಅಮ್ಮುಂಜೆ – ಕಾರ್ತಿಕ್ ಬಲ್ಲಾಳ್, ಭಾಗೀರತಿ, ಪ್ರಮೀಳಾ, ರವೀಂದ್ರ, ರೊನಾಲ್ಡ್ ಡಿಸೋಜ, ಲೀಲಾವತಿ, ಫೌಝಿಯಾ, ಅಬ್ದುಲ್ ರಝಾಕ್, ನೆಫೀಸಾ, ಲಕ್ಷ್ಮೀ, ವಾಮನ ಆಚಾರ್ಯ, ರಾಧಾಕೃಷ್ಣ ತಂತ್ರಿ, ಲೀಲಾವತಿ

ಕರಿಯಂಗಳ – ಗೀತಾ ಎಸ್, ಲಕ್ಷ್ಮೀಶ ಶೆಟ್ಟಿ, ಕೆ.ಅಬ್ದುಲ್ ಖಾದ್ರಿ, ವೀಣಾ, ಗೀತಾ, ನಾಗವೇಣಿ, ಮಹಮ್ಮದ್ ಶಮೀಮ್, ಲೋಕೇಶ್ ಪೂಜಾರಿ, ಚಂದ್ರಾವತಿ, ರಾಧಾ, ಚಂದ್ರಹಾಸ ಪಲ್ಲಿಪ್ಪಾಡಿ, ರಾಜು ಜಿ.ಕೋಟ್ಯಾನ್

ಜಾಹೀರಾತು

ಸಜಿಪಮುನ್ನೂರು – ಚಂದ್ರಕಲಾ, ಗಣೇಶ್, ಸಂದೀಪ್ ಕುಮಾರ್

ಮಾಣಿಲ – ಶೋಭಾ ಕೆ, ಮಾಲತಿ ಎನ್.ಕೆ, ರಾಜೇಶ್ ಕುಮಾರ್ ಬಾಳೆಕಲ್ಲು, ಶ್ರೀಧರ ಬಾಳೆಕಲ್ಲು, ರಾಜೇಶ್ ಕುಮಾರ್ ಬಿ, ವನಿತಾ, ಗೀತಾ, ಚಂದ್ರಶೇಖರ್ ಪೂಜಾರಿ,

ಅನಂತಾಡಿ – ರಶ್ಮಿ ಎಸ್.ಎನ್, ಮಮಿತಾ ಕೆ. ಕಿದೆನಾರು, ಪುರಂದರ ಗೌಡ

ಜಾಹೀರಾತು

ಮಾಣಿ – ಸೀತಾ, ಮೆಲ್ವಿನ್ ಕಿಶೋರ್ ಮಾರ್ಟಿಸ್, ಇಬ್ರಾಹಿಂ ಕೆ, ರಮಣಿ, ಸುದೀಪ್ ಕುಮಾರ್ ಶೆಟ್ಟಿ, ಮಿತ್ರಾಕ್ಷಿ, ಕೆ.ನಾರಾಯಣ ಶೆಟ್ಟಿ, ಸುಜಾತಾ, ಬಾಲಕೃಷ್ಣ ಆಳ್ವ ಕೊಡಾಜೆ, ಪ್ರೀತಿ ಪಿರೇರಾ

ಗೋಳ್ತಮಜಲು – ಇಕ್ಬಾಲ್, ಮಹಮ್ಮದ್ ಮುಸ್ತಾಫ, ಪ್ರೇಮ, ಹರಿಣಾಕ್ಷಿ, ಅಭಿಷೇಕ್ ಎನ್ ನೆಟ್ಲ, ಯೂಸುಫ್ ಹೈದರ್, ಸುಮಯ್ಯಾ,

ಮೇರಮಜಲು – ಚೆನ್ನಮ್ಮ, ಅನಿಲ್ ಫೆರ್ನಾಂಡಿಸ್, ಜಯಶ್ರೀ, ಅಶೋಕ್ ಪೂಜಾರಿ, ವೃಂದಾ, ಫ್ರಾನ್ಸಿಸ್ ಮೆಂಡೋನ್ಸಾ, ಸುಗಂಧಿ, ವಿಮಲ ನಾಯ್ಕ, ಸತೀಶ್ ನಾಯ್ಕ, ಸವಿತಾ, ಹರಿಣಾಕ್ಷಿ, ಪದ್ಮನಾಭ ಶೆಟ್ಟಿ

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಮತ ಎಣಿಕೆ, ಕ್ಷಣ ಕ್ಷಣಕ್ಕೂ ಕುತೂಹಲ, ಬೆಂಬಲಿಗರ ಕಾತರ – ಘೋಷಣೆಯಾದ 70 ವಿಜೇತರ ವಿವರ ಇಲ್ಲಿದೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*