: ಕೊಳ್ನಾಡು ಗ್ರಾಮದ ವಾರ್ಡೊಂದರಲ್ಲಿ ಚುನಾವಣೆಗೆ ಸ್ಪರ್ಧೆಗಿಳಿದಿದ್ದ ಅಭ್ಯರ್ಥಿಗಳು ಮನೆಗೆ ತೆರಳುವ ಪ್ರದೇಶದಲ್ಲಿ ತೆಂಗಿನಕಾಯಿಯೊಂದರ ಮೇಲೆ ಯಾವುದೋ ಲಿಪಿಯಲ್ಲಿ ಬರೆದದ್ದು ನಿನ್ನೆ ರಾತ್ರಿ ಕಂಡುಬಂದಿದ್ದು, ಸ್ಥಳೀಯರು ಇದೊಂದು ವಾಮಾಚಾರದ ಕೃತ್ಯವಿರಬಹುದು ಎಂದು ಶಂಕಿಸಿದ್ದಾರೆ. ಕೊಳ್ನಾಡು ಗ್ರಾಮದ ಕುಳಾಲು ಮತ್ತು ಬಂಡಮುಗೇರು ಕ್ರಾಸ್ ನಲ್ಲಿಯೂ ತೆಂಗಿನಕಾಯಿಗಳು, ಲಿಂಬೆ ಹಣ್ಣು ಇಟ್ಟದ್ದು ಕಂಡುಬಂದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿ ಬೆಂಬಲಿಗರು ಕುಳಾಲಿನ ಕಾರಣಿಕ ಶಕ್ತಿ ಶ್ರೀ ವಾರಹಿ (ಮಲರಾಯಿ) ದೈವದ ಮೊರೆ ಹೋದರು.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಅಭ್ಯರ್ಥಿಗಳ ಮನೆಗೆ ತೆರಳುವ ರಸ್ತೆಯಲ್ಲಿ ವಾಮಾಚಾರ ಶಂಕೆ, ದೈವಕ್ಕೆ ಪ್ರಾರ್ಥನೆ"