ಬಿ.ಸಿ.ರೋಡಿನ ರಸ್ತೆಗೆ ಒಂದು ಪದರ ಡಾಂಬರು, ಹೊಂಡಗಳಿಂದ ಮುಕ್ತಿ

ಬಿ.ಸಿ.ರೋಡಿನಲ್ಲಿ ರಾಷ್ಟ್ರೀಯ ಹೆದ್ದಾರಿ ಡಾಂಬರು ಹಾಕಲಾಗಿದ್ದು, ಒಂದು ಪದರವಷ್ಟೇ ಕಾಣಿಸುತ್ತಿದೆ.

Harish Mambady, www.bantwalnews.com

ಬಂಟ್ವಾಳ: ಬಿ.ಸಿ.ರೋಡಿನ ಹೆದ್ದಾರಿಯಲ್ಲಿ ಬುಧವಾರದಿಂದ ರಸ್ತೆಯಲ್ಲಿ ಹೊಂಡಗಳು ಕಾಣಿಸುತ್ತಿಲ್ಲ. ರಸ್ತೆಯಲ್ಲಿ ಒಂದು ಪದರ ಡಾಂಬರು ಹಾಕುವ ಕೆಲಸ ನಡೆದಿದೆ. ಇನ್ನೂ ಎರಡು ಪದರ ಡಾಂಬರು ಹಾಕುವ ಕೆಲಸ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿ.ಸಿ.ರೋಡಿನ ಹೃದಯ ಭಾಗವಾದ ಫ್ಲೈಓವರ್ ಪಕ್ಕದ ಜಾಗಗಳಲ್ಲಿ ಬೃಹತ್ ಗಾತ್ರದ ಹೊಂಡಗಳು ಕಾಣಿಸಿಕೊಂಡು ಸಾರ್ವಜನಿಕರಿಗೆ ತೊಂದರೆ ಆಗುತ್ತಿತ್ತು. ಸಣ್ಣಪುಟ್ಟ ಅಪಘಾತಗಳೂ ಇಲ್ಲಿ ನಡೆದು ಮತ್ತಷ್ಟು ಸಮಸ್ಯೆಗಳಿಗೆ ಕಾರಣವಾಗುತ್ತಿತ್ತು.

ಜಾಹೀರಾತು

ಇದು ಟೀಕೆಗಳಿಗೂ ಕಾರಣವಾಯಿತು. ಈ ಕುರಿತು ಪ್ರತಿಭಟನೆಗಳೂ ನಡೆದಿದ್ದವು. ಹೆದ್ದಾರಿ ರಿಪೇರಿಗೆ ಗಡುವನ್ನೂ ನೀಡಲಾಯಿತು. ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ಧಾರಿಯ ಭಾಗವಾದ ಬಿ.ಸಿ.ರೋಡ್, ಪಾಣೆಮಂಗಳೂರು ಕಲ್ಲುರ್ಟಿ ಸನ್ನಿಧಿ ಬಳಿ, ಮೇಲ್ಕಾರ್, ನರಹರಿ ಪರ್ವತ ಬಳಿ, ಕಲ್ಲಡ್ಕ, ದಾಸಕೋಡಿ, ಮಾಣಿ ಸಹಿತ ದಾರಿಯುದ್ದಕ್ಕೂ ಕೆರೆಗಾತ್ರದ ಹೊಂಡಗಳು ಕಾಣಿಸಿಕೊಂಡು ಸಾರ್ವಜನಿಕ ಬಳಕೆದಾರರ ಪ್ರಾಣಕ್ಕೆ ಸಂಚಕಾರವಾದ ಪ್ರಸಂಗಗಳೂ ನಡೆದಿದ್ದವು. ಅದರಲ್ಲೂ ಬಿ.ಸಿ.ರೋಡ್ ಫ್ಲೈಓವರ್ ಪಕ್ಕದಲ್ಲಿಯೇ ದೊಡ್ಡ ಹೊಂಡಗಳು ಎಷ್ಟು ಬಾರಿ ತೇಪೆ ಹಾಕಿದರೂ ಮತ್ತೆ ಕಾಣಿಸಿಕೊಂಡು ಟ್ರೋಲ್ ಗೆ ಒಳಗಾದವು.

ಇದೇ ಮಾರ್ಗದಲ್ಲಿ ಮಂಗಳೂರಿನಿಂದ ಬೆಂಗಳೂರು, ಮೈಸೂರು ಸಹಿತ ದೂರದೂರುಗಳಿಗೆ ತೆರಳುವವರು ಸಮಸ್ಯೆ ಅನುಭವಿಸುತ್ತಿದ್ದರು. ಇವುಗಳು ಎಷ್ಟು ಸಮಯ ಬಾಳಿಕೆ ಬರಬಹುದು ಎಂದು ಅನುಮಾನ ವ್ಯಕ್ತಪಡಿಸಿರುವ ಸಾರ್ವಜನಿಕರು, ಹೊಂಡಗಳು ಯಾಕೆ ಉದ್ಭವವಾಗುತ್ತಿವೆ ಎಂಬುದಕ್ಕೆ ವೈಜ್ಞಾನಿಕ ಕಾರಣ ಹುಡುಕಿ ಶಾಶ್ವತ ಪರಿಹಾರವನ್ನು ಸಿವಿಲ್ ಇಂಜಿನಿಯರಿಂಗ್ ತಜ್ಞರ ಮೂಲಕ ಮಾಡಿಸಬೇಕು ಎಂದು ಜನಪ್ರತಿನಿಧಿಗಳನ್ನು ರಸ್ತೆ ಬಳಕೆದಾರರು ಒತ್ತಾಯಿಸಿದ್ದಾರೆ.

ಬಿ.ಸಿ.ರೋಡಿನಲ್ಲಿ ಈಗ ಹಾಕಿರುವುದು ಡಿಬಿಎಂ (ಡೆಂಟ್ ಬಿಟುಮಿನಸ್ ಮೆಕಡಂ) ಅಂದರೆ ಒಂದು ಪದರದ ಡಾಂಬರು ಹಾಕುವ ಕಾರ್ಯವನ್ನು ನಡೆಸಿದ್ದೇವೆ. ಒಟ್ಟು ಮೂರು ಪದರಗಳ ಡಾಂಬರು ಹಾಕಲಾಗುತ್ತದೆ. ಗುಣಮಟ್ಟವನ್ನು ಪರಿಶೀಲಿಸಿಯೇ ಕಾಮಗಾರಿ ನಡೆಸಲಾಗುತ್ತಿದ್ದು, ಸುರತ್ಕಲ್ ನಿಂದ ಬಿ.ಸಿ.ರೋಡ್, ಹಾಗೆಯೇ ಬಿ.ಸಿ.ರೋಡಿನಿಂದ ಅಡ್ಡಹೊಳೆವರೆಗೆ ಎಲ್ಲೆಲ್ಲಿ ಸಮಸ್ಯೆಗಳು ಇದೆಯೋ ಆ ಜಾಗಗಳಲ್ಲಿ ರಸ್ತೆ ದುರಸ್ತಿ ಕಾರ್ಯ ನಿರಂತರವಾಗಿ ನಡೆಯಲಿದೆ ಎನ್ನುತ್ತಾರೆ ಎನ್.ಎಚ್.ಎ.ಐ ಎಂಜಿನಿಯರ್ ಅನಿರುದ್ಧ್.

ಜಾಹೀರಾತು
ಬಿ.ಸಿ.ರೋಡಿನಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 75ರ ಸ್ಥಿತಿ ಹೀಗಿದೆ.

ರಾಷ್ಟ್ರೀ ಹೆದ್ದಾರಿ 75 — NATIONAL HIGHWAY 75 at B.C.Road

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Harish Mambady
ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.

Be the first to comment on "ಬಿ.ಸಿ.ರೋಡಿನ ರಸ್ತೆಗೆ ಒಂದು ಪದರ ಡಾಂಬರು, ಹೊಂಡಗಳಿಂದ ಮುಕ್ತಿ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*