ಹಿರಿಯ ರಂಗಕರ್ಮಿ ಮೋಹನ ಸೋನಾ ಅವರಿಗೆ ವಿಟ್ಲದಲ್ಲಿ ನುಡಿನಮನ

ಜಾಹೀರಾತು

ವಿಟ್ಲ: ಹಿರಿಯ ಕಲಾವಿದ ರಂಗಕರ್ಮಿ ಮೋಹನ ಸೋನಾ ಅವರಿಗೆ ನುಡಿನಮನ ಕಾರ್ಯಕ್ರಮ ಕನ್ನಡ ಸಂಘ ವಿಟ್ಲ  ವತಿಯಿಂದ ವಿಠಲ ಪ್ರೌಢ ಶಾಲೆಯಲ್ಲಿ ನಡೆಯಿತು.

ಈ ಸಂದರ್ಭ ಕನ್ನಡ ಸಂಘ ವಿಟ್ಲ ಗೌರವಾಧ್ಯಕ್ಷ  ಅನಂತ ಕೃಷ್ಣ ಹೆಬ್ಬಾರ್ ಮಾತನಾಡಿ ಮೋಹನ ಸೋನಾ ಅವರು ಮುಗ್ಧ ಮನಸ್ಸಿನ, ಒಬ್ಬ ಕಲಾಕಾರ ಹಾಗೂ ರಂಗಕರ್ಮಿ ಯಾಗಿದ್ದರು. ಪ್ರಕೃತಿಯನ್ನೇ ರಂಗಭೂಮಿ ಮಾಡಿಕೊಂಡ ಒಬ್ಬ ಅದ್ಭುತ ನಾಟಕಕಾರ ಎಂದು ಕಂಬನಿ ಮಿಡಿದರು. ಕನ್ನಡ ಸಂಘ ವಿಟ್ಲ ಅಧ್ಯಕ್ಷರಾದ ಶಂಕರನಾರಾಯಣ ಪ್ರಸಾದ್ ಮಾತನಾಡಿ ಸರಕಾರದ ಸಾಮಾಜಿಕ  ಕಾರ್ಯಕ್ರಮವಾದ ಸಾಕ್ಷರತಾ ಆಂದೋಲನ  ಜನಜಾಗೃತಿ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ, ಆ ಕಾಲಕ್ಕೆ ಆ ಕಾರ್ಯಕ್ರಮವನ್ನು ಸಮಾಜದ ಎಲ್ಲಾ ಜನರಿಗೆ ತಲುಪುವಂತೆ ಬೀದಿ ನಾಟಕ,ಹಾಡು ಇತ್ಯಾದಿ ಇತ್ಯಾದಿ ಗಳ ಮೂಲಕ ನಿರ್ವಹಿಸಿರುವ ಅವರ ಜಾಣ್ಮೆ ಅವಸ್ಮರಣೀಯ ಎಂದು ಹೇಳಿ ಅವರ ಆತ್ಮಕ್ಕೆ ಚಿರಶಾಂತಿ ಬಯಸಿದರು.

ಕಾರ್ಯಕ್ರಮದಲ್ಲಿ  ಅವರ ಒಡನಾಡಿ  ವಿಶ್ವನಾಥ ಗೌಡ, ಪ್ರಾಂಶುಪಾಲರಾದ ಆದರ್ಶ ಚೊಕ್ಕಾಡಿ, ಸೀತಾ ಲಕ್ಷ್ಮೀ ವರ್ಮಾ ಮತ್ತು ರಾಜಶೇಖರ್ ವಿಟ್ಲ ಉಪಸ್ಥಿತರಿದ್ದು ನುಡಿನಮನ ಸಲ್ಲಿಸಿದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಹಿರಿಯ ರಂಗಕರ್ಮಿ ಮೋಹನ ಸೋನಾ ಅವರಿಗೆ ವಿಟ್ಲದಲ್ಲಿ ನುಡಿನಮನ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*