ಸ್ವಸ್ತಿಕಾ ಸೇರಿದಂತೆ ಮೂರು ಹೊಸ ಕಾಲೇಜುಗಳಿಗೆ ಮಂಗಳೂರು ವಿವಿ ಅನುಮೋದನೆ

  • ಪದವಿ ಜೊತೆ ಉದ್ಯೋಗಕ್ಕೆ ಅವಕಾಶ ನೀಡುವ ಮಂಗಳೂರಿನ ಸ್ವಸ್ತಿಕಾ ನ್ಯಾಶನಲ್ ಸ್ಕೂಲ್

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ನೂತನ ಸೆನೆಟ್ ಸಭಾಂಗಣದಲ್ಲಿ ಮಂಗಳವಾರ ನಡೆದ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ವಿವಿ ವ್ಯಾಪ್ತಿಯಲ್ಲಿ ಮಂಗಳೂರಿನ ಊರ್ವಸ್ಟೋರ್ ಮೆನೇಜಸ್ ಟವರ್ಸ್ ನಲ್ಲಿ ಸ್ವಸ್ತಿಕಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶುರುವಾಗಲಿರುವ ಸ್ವಸ್ತಿಕಾ ನ್ಯಾಶನಲ್ ಸ್ಕೂಲ್ ಸೇರಿದಂತೆ ಮೂರು ಹೊಸ ಕಾಲೇಜುಗಳಿಗೆ ಅನುಮೋದನೆ ನೀಡಲಾಗಿದೆ.

ಮಲ್ಲಿಕಟ್ಟೆಯ ನಲಪಾಡ್ ಕಟ್ಟಡದಲ್ಲಿ ಎ ಆಂಡ್ ಎಂ ಎಜುಕೇಶನಲ್ ಟ್ರಸ್ಟ್ ವತಿಯಿಂದ ಎ ಆಂಡ್ ಎಂ ಎಜುಕೇಶನ್ ಕಾಲೇಜ್ ಆಫ್ ಕ್ರಿಯೇಟಿವಿಟಿ ಎಂಡ್ ಟೆಕ್ನಾಲಜಿ, ದೇರಳಕಟ್ಟೆ ನಾಟೆಕಲ್ ನಲ್ಲಿ ಕುನಿಲ್ ಜಿ.ಪಿ.ಎಜುಕೇಶನ್ ಟ್ರಸ್ಟ್ ವತಿಯಿಂದ ಕುನಿಲ್ ಜಿ.ಪಿ. ಕಾಲೇಜು ಇತರ ಸಂಸ್ಥೆಗಳು.

ಜಾಹೀರಾತು

ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಅನುಮೋದನೆ ನೀಡಲಾಗಿದೆ. ವಿವಿಯು 2021-22ನೇ ಶೈಕ್ಷಣಿಕ ವರ್ಷದಿಂದ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಕಾರ್ಯಪಡೆ ರಚಿಸುವುದು, ಡ್ರಗ್ಸ್ ಮುಕ್ತ ಕ್ಯಾಂಪಸ್ ಗೆ ಜಾಗೃತಿ ಕಾರ್ಯಕ್ರಮ, ವಿದ್ಯಾರ್ಥಿಗಳು ಕಾಲೇಜುಗಳಿಗೆ ಸೇರ್ಪಡೆಗೊಳ್ಳಲು ದಂಡನಾ ಶುಲ್ಕ ವಿಧಿಸದೇ ಇರುವುದು ಸಹಿತ ಹಲವು ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.

ಜಾಹೀರಾತು

ಸ್ವಸ್ತಿಕಾ ಕಾಲೇಜು ಹೇಗಿದೆ:

 ಮಂಗಳೂರಿನ ಊರ್ವಸ್ಟೋರ್ ನಲ್ಲಿರುವ ಮಿನೇಜಸ್ ಟವರ್ಸ್ ನಲ್ಲಿ ಆರಂಭವಾಗಿರುವ ಸ್ವಸ್ತಿಕಾ ನ್ಯಾಶನಲ್ ಸ್ಕೂಲ್ ನಲ್ಲಿ EARN while LEARN ಕಲಿಯುವಾಗಲೇ ಗಳಿಸಿ ಎಂಬ ಘೋಷವಾಕ್ಯವಿದೆ.

ಜಾಹೀರಾತು

ಏನಿದೆ ಇಲ್ಲಿ: ಇಂಗ್ಲೀಷ್ ಭಾಷಾ ಹಿಡಿತ ಪಡೆಯಲು ತರಬೇತಿ, ದ್ವಿತೀಯ ಮತ್ತು ತೃತೀಯ ಪದವಿ ವಿದ್ಯಾರ್ಥಿಗಳಿಗೆ ಕಲಿಯುವಾಗಲೇ ಗಳಿಕೆಯ ಅವಕಾಶ, ಕೌಶಲಾಧರಿತ ಕೋರ್ಸುಗಳು, ಸಿಎ, ಸಿಎಸ್, ಐಟಿ ಕೋರ್ಸುಗಳು, ಶೇ.100ರಷ್ಟು ಉದ್ಯೋಗಾವಕಾಶ, ಕ್ಯಾಂಪಸ್ ನೊಳಗೇ ಉದ್ಯೋಗಿಯಾಗುವ ತಯಾರಿ, ನುರಿತ ಬೋಧಕ ವರ್ಗ, ಕ್ಲಾಸ್ ರೂಮ್ ಕಲಿಕೆಯಿಂದ ಭಿನ್ನವಾದ ಕಲಿಕಾವಿಧಾನ ಇಲ್ಲಿದೆ ಎನ್ನುತ್ತಾರೆ ಇದರ ಚೇರ್ಮನ್ ಡಾ. ರಾಘವೇಂದ್ರ ಹೊಳ್ಳ.

ವ್ಯಕ್ತಿತ್ವ ವಿಕಸನದ ಕನಸುಗಾರ: ಬಂಟ್ವಾಳ ತಾಲೂಕಿನ ಬ್ರಹ್ಮರಕೂಟ್ಲು ಸಮೀಪ ನೆತ್ರಕೆರೆಯ ಡಾ. ರಾಘವೇಂದ್ರ ಹೊಳ್ಳ ಎನ್. ಅವರ ಕನಸಿನ ಕೂಸು ಈ ಶಿಕ್ಷಣ ಸಂಸ್ಥೆ. ಮಂಗಳೂರು ವಿವಿಯಲ್ಲಿ ಎಂ.ಎಸ್.ಡಬ್ಲ್ಯು, ಸಮಾಜಶಾಸ್ತ್ರದಲ್ಲಿ ಎಂ.ಫಿಲ್, ಮಾನವ ಸಂಪನ್ಮೂಲ ನಿರ್ವಹಣೆಯಲ್ಲಿ ಅಣ್ಣಾಮಲೈ ವಿವಿಯಿಂದ ಎಂಬಿಎ, ಇಂದಿರಾ ಗಾಂಧಿ ಮುಕ್ತ ವಿವಿಯಿಂದ ಪಿಜಿಡಿಪಿಆರ್ ಮಾಡಿದ ಅವರಿಗೆ ಮೈಸೂರು ವಿವಿ ಡಾಕ್ಟರೇಟ್ ನೀಡಿದೆ.

ಜಾಹೀರಾತು

ಕರಾವಳಿ ಕಾಲೇಜು, ಮಂಗಳೂರು ವಿವಿ, ಶ್ರೀನಿವಾಸ್ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಅನುಭವವುಳ್ಳ ಅವರಿಗೆ ಮಂಗಳೂರು ವಿಶೇಷ ವಿತ್ತ ವಲಯದಲ್ಲಿ (ಎಸ್.ಇ.ಝೆಡ್) ಮ್ಯಾನೇಜರ್ (ಆಡಳಿತ) ಆಗಿ 13 ವರ್ಷಗಳ ಅನುಭವವಿದೆ. ಬಾಲ್ಯದಿಂದ ಇದುವರೆಗೆ ಸ್ಕೌಟ್ಸ್, ಎನ್.ಎಸ್.ಎಸ್, ಎನ್.ಸಿ.ಸಿ, ಯೂತ್ ಕ್ಲಬ್, ವಿದ್ಯಾರ್ಥಿ ಸಂಘಟನೆ, ರೆಡ್  ಕ್ರಾಸ್, ಕರಾಟೆ, ನಾಟಕ, ಇವೆಂಟ್ ಮ್ಯಾನೇಜ್ಮೆಂಟ್ ನಲ್ಲಿ ಪಾಲ್ಗೊಂಡಿರುವ ಅವರು ಹಲವು ತರಬೇತಿ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ. ಪರಿಣಾಮಕಾರಿ ಭಾಷಣ ಕಲೆ ತರಬೇತಿ ನೀಡುವ ಅವರು 400ಕ್ಕೂ ಅಧಿಕ ಕಾರ್ಯಕ್ರಮ ನೀಡಿದ್ದಾರೆ. ಜೇಸಿ ಯ ಸಾಫ್ಟ್ ಸ್ಕಿಲ್ ಟ್ರೈನರ್ ಆಗಿರುವ ಅವರು, ಮಂಗಳೂರು ಜೇಸಿ ಸಾಮ್ರಾಟ್ ನ ಸ್ಥಾಪಕಾಧ್ಯಕ್ಷರೂ ಹೌದು. 200ಕ್ಕೂ ಅಧಿಕ ಮಂದಿಯನ್ನು ಜೇಸಿ ಆಂದೋಲನದಲ್ಲಿ ತೊಡಗಿಸಿಕೊಂಡಿರುವ ಅವರು, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಮಾಜಿಕ ವಿಷಯದಲ್ಲಿ ಪ್ರಬಂಧ ಮಂಡನೆ, ಕಾರ್ಯಾಗಾರಗಳಲ್ಲಿ ಭಾಗವಹಿಸಿದ್ದಾರೆ. ಸ್ವಸ್ತಿಕಾ ಕನ್ಸಲ್ಟೆನ್ಸಿ ಸರ್ವೀಸ್ ಇವರ ಸಾರಥ್ಯದಲ್ಲಿ ಈಗಾಗಲೇ ಹಲವಾರು ಜನರ ಅಗತ್ಯಗಳನ್ನು ಪೂರೈಸಿವೆ.

ಜಾಹೀರಾತು

ಬೋಧಕ ವರ್ಗ: ರಾಜೇಶ್ವರಿ ಡಿ. ಶೆಟ್ಟಿ (ಪ್ರಾಂಶುಪಾಲೆ), ಡಾ. ರಾಘವೇಂದ್ರ ಹೊಳ್ಳ ಎನ್, ಪ್ರತಿಭಾ, ದಿವ್ಯಾ, ಶಾಂತಿ ಕುಮಾರಿ, ಟಿನಿ ಡಿಕೋಸ್ಟ, ಪೂಜಾ ಎಸ್, ಪೂಜಾ ರಾವ್, ಮಹೇಶ್ ಮಯ್ಯ, ಉಷಾ.

ಕೋರ್ಸುಗಳು ಇವು: ಬಿಕಾಂ, ಬಿಬಿಎ, ಬಿಎಸ್ ಡಬ್ಲ್ಯು, ಇಂಗ್ಲೀಷ್ ಕೋರ್ಸ್, ಸಿಎ, ಸಿಎಸ್ ಕೋಚಿಂಗ್, ಟ್ಯಾಲಿ, ಮ್ಯಾನೇಜ್ಮೆಂಟ್, ಎಕ್ಸೆಲ್, ಎಂಎಸ್ ವರ್ಡ್, SAP ಮತ್ತು GST ಕೋರ್ಸುಗಳು ಸ್ವಸ್ತಿಕಾ ಕನ್ಸಲ್ಟೆನ್ಸಿ ಸರ್ವೀಸ್ ನಿಂದ ವಿಶೇಷ ತರಬೇತಿಗಳೂ ವಿದ್ಯಾರ್ಥಿಗಳಿಗೆ ಲಭ್ಯ.

ಅರ್ಹ BSW ಅಭ್ಯರ್ಥಿಗಳಿಗೆ ಶೇ.50 ಸ್ಕಾಲರ್ ಶಿಪ್ ಇದೆ.

ಜಾಹೀರಾತು

ಸೇರಬೇಕಾದರೆ ಏನಾಗಬೇಕು: ದ್ವಿತೀಯ ಪಿಯುಸಿ ಪೂರೈಸಿದವರು ಈ ಕೋರ್ಸುಗಳಿಗೆ ಸೇರಲು ಅರ್ಹರು.

ಹೆಚ್ಚಿನ ಮಾಹಿತಿಗೆ ಕರೆ ಮಾಡಿ: 9901326167

Website: www.swastikanationalschool.com

ಜಾಹೀರಾತು

Instagram: http://www.instagram.com/swastikans_mlore

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಸ್ವಸ್ತಿಕಾ ಸೇರಿದಂತೆ ಮೂರು ಹೊಸ ಕಾಲೇಜುಗಳಿಗೆ ಮಂಗಳೂರು ವಿವಿ ಅನುಮೋದನೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*