ಸಾವಿನ ಬಾಗಿಲ ತಟ್ಟಿ ಪ್ರಾಣ ಉಳಿಸಲು ನದಿಗೆ ಜಿಗಿಯುವ ನೇತ್ರಾವತಿವೀರರು

ಹರೀಶ ಮಾಂಬಾಡಿ

ಪ್ರತಿ ಮಳೆಗಾಲ ಬಂದಾಗಲೂ ಆಪದ್ಭಾಂಧವರಾಗಿ ಮುನ್ನುಗ್ಗುವವರು ಗೂಡಿನಬಳಿಯ ಈ ಸಾಹಸಿಗರು. ಇವರು ಆಪತ್ಬಾಂಧವರು. ಮೃತ್ಯುವಿನ ದವಡೆಗೆ ಸಿಲುಕಿದವರನ್ನು ತಮ್ಮ ಪ್ರಾಣದ ಹಂಗು ತೊರೆದು ರಕ್ಷಿಸಲು ಸದಾ ಮುಂಚೂಣಿಯಲ್ಲಿರುವವರು. ಜೀವ ಉಳಿಸುವುದು ಮುಖ್ಯ ಎಂಬ ಧ್ಯೇಯದೊಂದಿಗೆ ಮಾನವೀಯ ಮೌಲ್ಯವನ್ನು ಮೈಗೂಡಿಸಿಕೊಂಡು ಮುನ್ನಡೆಯುವವರು. ಬಂಟ್ವಾಳ ತಾಲೂಕಿನ ಗೂಡಿನಬಳಿಯ ನೇತ್ರಾವತಿವೀರರು.

ಗೂಡಿನಬಳಿ ಸತ್ತಾರ್, ಶಮೀರ್, ಮಹಮ್ಮದ್, ತೌಸೀಫ್, ಇಬ್ರಾಹಿಂ, ಆರೀಫ್ ಅಷ್ಟೇ ಅಲ್ಲ, ಅವರನ್ನೇ ರೋಲ್ ಮಾಡೆಲ್ ಆಗಿ ನದಿಗೆ ಜಿಗಿಯುವವ ಯುವಕರ ತಂಡವೇ ಇಲ್ಲಿದೆ. ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸುವ ಹಲವಾರು ಮಂದಿಯನ್ನು ಅವರು ಪ್ರಾಣದ ಹಂಗು ತೊರೆದು ರಕ್ಷಿಸಿದ್ದಾರೆ.  ವರ್ಷದ ಹಿಂದೆ ನೇತ್ರಾವತಿಗೆ ಕುಟುಂಬವೊಂದರ ಎಲ್ಲ ಸದಸ್ಯರೂ ರಾತ್ರಿ ವೇಳೆ ಹಾರಿದಾಗ ಎರಡು ದಿನಗಳ ಕಾಲ ರಾತ್ರಿ ಹಗಲು ಅವರ ಶವಕ್ಕಾಗಿ ಹುಡುಕಾಡಿದ್ದು ಇದೇ ತಂಡ.  2020 ಮೇ ತಿಂಗಳಲ್ಲಿ ಗೂಡಿನಬಳಿಯ ನೇತ್ರಾವತಿ ನದಿ ಸೇತುವೆಗೆ ಬಂದ ಕಲ್ಲಡ್ಕ ಹನುಮಾನ್ ನಗರ ನಿವಾಸಿ ನಿಶಾಂತ್ (28) ದಿಢೀರನೆ ನದಿಗೆ ಹಾರಿದ. ಇದನ್ನು ಕಂಡು ಯುವಕರ ತಂಡ ತಡಮಾಡಲಿಲ್ಲ. ಅವರಲ್ಲಿದ್ದ ಶಮೀರ್, ಮಹಮ್ಮದ್, ತೌಸೀಫ್, ಜಾಹೀದ್, ಮುಕ್ತಾರ್, ಆರಿಫ್ ಮತ್ತಿತರರು ಜೀವದ ಹಂಗು ತೊರೆದು ನದಿಗೆ ಹಾರಿಯೇಬಿಟ್ಟರು. ಯುವಕನ್ನು ಮೇಲಕ್ಕೆ ತಂದರು. ಆ ಸಂದರ್ಭ ಆತನ ಪ್ರಾಣ ಉಳಿಸಲು ನಾನಾ ವಿಧದಲ್ಲಿ ಯತ್ನಿಸಿದರು. ಬಳಿಕ ಆತನನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಜೀವ ಉಳಿಸಲಾಗಲಿಲ್ಲ. ಆದರೆ ಆತನ ಪ್ರಾಣ ಉಳಿಸಲು ಯುವಕರು ನಡೆಸಿದ ಪ್ರಯತ್ನಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದವು. ಈದ್ ಸಂಭ್ರಮದಲ್ಲಿ ಬಂಧು ಮಿತ್ರರೊಡನೆ ಕಳೆಯುವ ಕ್ಷಣಗಳಲ್ಲಿ ಜಾತಿ, ಧರ್ಮ ಲೆಕ್ಕಿಸದೆ, ಮಾನವೀಯತೆಯ ನೆಲೆಯಲ್ಲಿ ವ್ಯಕ್ತಿಯೋರ್ವರ ಜೀವ ಉಳಿಸಲು ಪ್ರಯತ್ನಿಸಿದ ಕ್ಷಣವಿದು. ಕೊರೊನಾ ಸೋಂಕು ಸಂದರ್ಭ ಮೃತದೇಹ ಸುಡಲೂ ತಕರಾರು ತೆಗೆಯುವ, ಭೀತಿಪಡುವವರು ಇರುವ ಹೊತ್ತಿನಲ್ಲೇ ಮನುಷ್ಯನೊಬ್ಬನನ್ನು ಆತನಿಗೆ ರೋಗ ಇದೆಯೇ ಎಂಬುದನ್ನೂ ಲೆಕ್ಕಿಸದೆ, ಗುರುತು ಪರಿಚಯತವನ್ನೂ ಗಮನಿಸದೆ ತಮ್ಮ ಪ್ರಾಣದ ರಿಸ್ಕ್ ತೆಗೆದುಕೊಂಡು ಜೀವ ಉಳಿಸುವ ತಂಡವಿದು.ಈ ಯುವಕರಿಗೆ ಆಪದ್ಬಾಂಧವರು ಎಂಬ ಬಿರುದಿನೊಂದಿಗೆ ನೇತ್ರಾವತಿವೀರರು ಎಂದು ಗುರುತಿಸಿ ಸನ್ಮಾನಿಸಲಾಗಿದೆ. ಶವ ಮೇಲಕ್ಕೆತ್ತುವುದಷ್ಟೇ ಅಲ್ಲ, ಅದೆಷ್ಟೋ ಮಂದಿ ನದಿಗೆ ಹಾರುವ ಮುನ್ನವೇ ಯುವಕರ ಕೈಗೆ ಸಿಕ್ಕಿ ಮತ್ತೆ ಸುಖೀ ಜೀವನ ನಡೆಸುತ್ತಿರುವ ವೃತ್ತಾಂತಗಳೂ ಇವೆ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Harish Mambady
ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.

Be the first to comment on "ಸಾವಿನ ಬಾಗಿಲ ತಟ್ಟಿ ಪ್ರಾಣ ಉಳಿಸಲು ನದಿಗೆ ಜಿಗಿಯುವ ನೇತ್ರಾವತಿವೀರರು"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*