ಬಂಟ್ವಾಳ: ಪ್ರತಿ ಮಳೆಗಾಲದಲ್ಲಿ ಕೆರೆಗಾತ್ರದ ಹೊಂಡ ಬಿದ್ದು,ವಾಹನಸಂಚಾರಕ್ಕೆ ತೊಡಕಾಗುತ್ತಿದ್ದ ಬಿ.ಸಿ.ರೋಡಿನ ಬಸ್ ತಂಗುದಾಣ ಮತ್ತು ಯಾತ್ರಿನಿವಾಸ್ ಕಟ್ಡಡದ ಮುಂಭಾಗದ ಹೊಂಡಕ್ಕೆ ರಾ.ಹೆ.ಪ್ರಾ.ಗುರುವಾರ ತೇಪೆ ಹಾಕುವ ಕಾರ್ಯ ನಡೆಸಿತು.
ಜಾಹೀರಾತು
ಈ ಬಾರಿಯ ಪ್ರಥಮ ಮಳೆಗೂ ಆದೇ ಜಾಗಗಳಲ್ಲಿ ಕಾಣಿಸಿಕೊಂಡ ಹೊಂಡ ಬಳಿಕ ಕೆರೆಯ ಗಾತ್ರದಲ್ಲಿ ವಿಸ್ತರಿಸಿದೆ. ಪ್ರತಿವರ್ಷವು ಇಲ್ಲಿನ ಅಂಗಡಿದಾರರು ಈ ಹೊಂಡಕ್ಕೆ ಗಿಡ ನೆಟ್ಟು ವಾಹನ ಸವಾರರಿಗೆ ಎಚ್ಚರಿಕೆ ಮೂಡಿಸುತ್ತಿದ್ದರು. ಮಾಧ್ಯಮಗಳು ಕೂಡ ಈ ಎರಡು ಹೊಂಡದ ಬಗ್ಗೆ ವರ್ಷಂಪ್ರತಿ ಯಾಥಾವತ್ತಾಗಿ ಸಚಿತ್ರ ವರದಿ ಪ್ರಕಟಿಸಿ ಇಲಾಖೆಯ ಗಮನ ಸೆಳೆಯುತ್ತಾ ಬರುತ್ತಿದೆ. ಈ ಸಲ ಸಂಚಾರವನ್ನು ಡೈವರ್ಶನ್ ಮಾಡಲಾಗಿದೆ ಎಂದು ಫಲಕವನ್ನು ಹಾಕಲಾಗಿತ್ತು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಹೆದ್ದಾರಿ ಹೊಂಡಕ್ಕೆ ತಾತ್ಕಾಲಿಕ ಮುಕ್ತಿ"