- ಕೊರೊನಾ ಸೋಂಕಿಗೆ ಇಂದು 15 ಸಾವು, 1498 ಹೊಸ ಕೇಸ್
ರಾಜ್ಯದಲ್ಲಿ ಕೋವಿಡ್ 19 ಸೋಂಕಿತ ಪ್ರಕರಣಗಳ ಸಂಖ್ಯೆ ಇಂದು 1498 ಇದ್ದು, ಒಟ್ಟು ಸೋಂಕಿತರ ಸಂಖ್ಯೆ 26,815 ಆಗಿದೆ. ಇವರಲ್ಲಿ ಇಂದು 15 ಮಂದಿ ಸಾವನ್ನಪ್ಪಿದ್ದು, ಒಟ್ಟು ಸಾವನ್ನಪ್ಪಿದವರ ಸಂಖ್ಯೆ 416ಕ್ಕೇರಿದೆ. ಇಂದು 571 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, 11,098 ಮಂದಿ ಒಟ್ಟು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಒಟ್ಟಾರೆಯಾಗಿ ಇಡೀ ರಾಜ್ಯದಲ್ಲಿ ಕೋವಿಡ್ 19ಕ್ಕೆ ಚಿಕಿತ್ಸೆ ಪಡೆಯುತ್ತಿರುವವರು 15,297. ಅವರಲ್ಲಿ 279 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರು ನಗರದಲ್ಲಿ ಇಂದು 800 ಮಂದಿಗೆ ಸೋಂಕು ತಗಲಿದ್ದರೆ, ಒಟ್ಟು ಸಂಖ್ಯೆ 11,361 ಆಗಿದೆ. ಇವರಲ್ಲಿ 1810 ಬಿಡುಗಡೆ ಹೊಂದಿದ್ದು, 155 ಸಾವನ್ನಪ್ಪಿದ್ದಾರೆ. ಬೆಂಗಳೂರು ನಗರ ಒಂದರಲ್ಲೇ 9395 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗೆಯೇ ದಕ್ಷಿಣ ಕನ್ನಡದಲ್ಲಿ 677, ಧಾರವಾಡದಲ್ಲಿ 402 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟಿದೆ? ಮುಂದೆ ಓದಿರಿ.
DAKSHINA KANNADA: ದಕ್ಷಿಣ ಕನ್ನಡ ಜಿಲ್ಲೆಯ ಜನಸಂಖ್ಯೆ 20,89,649. ಅವರಲ್ಲಿ 21,881 ಮಂದಿ ಕೊರೊನಾ ಪರೀಕ್ಷೆ ಮಾಡಿದ್ದಾರೆ. ಅವರಲ್ಲಿ 21,395 ಮಂದಿಯ ಪರೀಕ್ಷಾ ಫಲಿತಾಂಶ ಬಂದಿದೆ. 1359 ಪಾಸಿಟಿವ್ ಆಗಿದೆ. ಇಂದು 83 ಮಂದಿ ಪಾಸಿಟಿವ್ ಆಗಿದೆ. ಈ ಪ್ರಕಾರವಾಗಿ ಜನಸಂಖ್ಯೆ ಆಧಾರದಲ್ಲಿ 0.065 ಶೇಕಡಾ ಮಂದಿ ಕೊರೊನಾ ಪಾಸಿಟಿವ್ ಆಗಿದ್ದಾರೆ. ಇಂದು 99 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು 683 ಮಂದಿ ಡಿಸ್ಚಾರ್ಜ್ ಆಗಿದ್ದರೆ, 650 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 26 ಮಂದಿ ಮರಣ ಹೊಂದಿದ್ದಾರೆ.
ಇಂದು ಮೂಡುಬಿದಿರೆ ನಿವಾಸಿ ಸುಮಾರು 65 ವರ್ಷದ ಪುರುಷ ಮಧುಮೇಹ, ಹೃದಯಸಂಬಂಧಿ ಕಾಯಿಲೆ ಮತ್ತು ನ್ಯುಮೋನಿಯಾದಿಂದ ಬಳಲುತ್ತಿದ್ದು, ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಇವರು ಇಂದು ಮೃತಪಟ್ಟಿದ್ದಾರೆ.
Be the first to comment on "ರಾಜ್ಯದಲ್ಲಿ ಒಟ್ಟು 11,098 ಗುಣಮುಖ, 15,297 ಮಂದಿಗೆ ಚಿಕಿತ್ಸೆ"