ನರೇಗಾಕ್ಕಿಲ್ಲ ಕೊರೊನಾ ಅಡ್ಡಿ, ಶ್ರಮಜೀವಿಗಳಿಗಿದೆ ಉದ್ಯೋಗ

ವಿಡಿಯೋಕ್ಕೆ ಇಲ್ಲಿ ಕ್ಲಿಕ್ ಮಾಡಿರಿ

ಜಾಹೀರಾತು

ಕೊರೊನಾ ಸಂದರ್ಭ ಲಾಕ್ ಡೌನ್ ಮಾಡಿದಾಗಲೂ ಬಂಟ್ವಾಳ ತಾಲೂಕಿನ ಕೃಷಿ ಕಾರ್ಯ ಚಟುವಟಿಕೆಗಳು ಹಿಂದೆ ಬಿದ್ದಿಲ್ಲ. ಸಾಮಾನ್ಯವಾಗಿ ಕೋವಿಡ್ ಸಂದರ್ಭ ಕೆಲಸಗಳನ್ನು ಕಳೆದುಕೊಂಡು ಧೃತಿಗೆಡುವ ಸನ್ನಿವೇಶಗಳಿದ್ದಾಗಲೂ ಬಂಟ್ವಾಳದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಉತ್ತಮ ಓಪನಿಂಗ್ ದೊರಕಿದೆ.

4,00,595 ಮಾನವ ದಿನಗಳ ಗುರಿ 2020-21ಕ್ಕೆ ನಿಗದಿಯಾಗಿದ್ದು, ಈಗಾಗಲೇ ತೆರೆದ ಬಾವಿ, ತೋಡುಗಳ ಹೂಳೆತ್ತುವಿಕೆ, ಅಂಗನವಾಡಿ, ಶಾಲೆಗಳ ತೋಟಗಳ ರಚನೆ, ಸ್ವಸಹಾಯ ಸಂಘಗಳ ಒಕ್ಕೂಟಗಳ ಮೂಲಕ ಕೆಲಸಗಳು ಆರಂಭಗೊಂಡಿವೆ. ಇದುವರೆಗೆ 44,663 ಮಾನವ ದಿನಗಳ ಕೆಲಸ ನಡೆದಿವೆ. ಎಲ್ಲ ಗ್ರಾಪಂಗಳಲ್ಲಿ ಕಾಯಕಬಂಧುಗಳನ್ನು ನೇಮಿಸಾಗುತ್ತದೆ ಎಂದು ತಾಪಂ ಇಒ ರಾಜಣ್ಣ ಮತ್ತು ಪ್ರಭಾರ ಸಹಾಯಕ ನಿರ್ದೇಶಕ ಪ್ರಶಾಂತ್ ಬಳಂಜ ತಿಳಿಸಿದ್ದಾರೆ.

ಎನ್.ಆರ್.ಇ.ಜಿ.ಗೆ 2019-20, 20-21ರಲ್ಲಿ ಹೆಸರು ನೋಂದಾಯಿಸಿದವರನ್ನು ಜಿಪಂ ಸಿಇಒ ಡಾ. ಸೆಲ್ವಮಣಿ ಸೂಚನೆಯಂತೆ ವೈಯಕ್ತಿಕವಾಗಿ ದೂರವಾಣಿ ಮೂಲಕ ಸಂಪರ್ಕಿಸಲಾಗಿದೆ. ಜಿಪಂ ಉಪಕಾರ್ಯದರ್ಶಿ ಆನಂದ್ ಕುಮಾರ್ ಮತ್ತು ಯೋಜನಾ ನಿರ್ದೇಶಕ ಮಧುಕುಮಾರ್ ಅವರು ಗ್ರಾಪಂಗಳಿಗೆ ಭೇಟಿ ನೀಡಿ ಪರಿಶೀಲನಾ ಕಾರ್ಯಗಳನ್ನು ನಡೆಸುತ್ತಿದ್ದಾರೆ ಎಂದಿದ್ದಾರೆ. ಈ ಬಾರಿ 44,663 ಮಾನವ ದಿನಗಳ ಕೆಲಸ ಈಗಾಗಲೇ ನಡೆದಿವೆ.

ತೆರೆದ ಬಾವಿ 212 ನಿರ್ಮಾಣದ ಗುರಿ ಇದ್ದು, 175 ಪ್ರಗತಿಯಲ್ಲಿದೆ. 149 ತೋಡುಗಳ ಹೂಳೆತ್ತುವಿಕೆ ನಡೆಯಬೇಕಿದ್ದು, 103 ಪ್ರಗತಿಯಲ್ಲಿದೆ. ಬಂಟ್ವಾಳ ವಲಯದ 58, ವಿಟ್ಲ ವಲಯದ 51 ಅಂಗನವಾಡಿಗಳು, ತಾಲೂಕಿನ 70 ಶಾಲೆಗಳಲ್ಲಿ ಪೌಷ್ಟಿಕ ತೋಟ ರಚನಾ ಕಾರ್ಯ ನಡೆಯುತ್ತಿದೆ. ನರೇಗಾ ಜೊತೆ ಎನ್.ಆರ್.ಎಲ್.ಎಂ. (ರಾಷ್ಟ್ರೀಯ ಜೀವನೋಪಾಯ ಅಭಿಯಾನ) ಸಂಜೀವಿನಿಯ ಒಗ್ಗೂಡಿಸುವಿಕೆಯಿಂದ ತೆಂಗು, ಅಡಕೆ, ಗೇರು, ಮಾವು, ದಾಳಿಂಬೆ, ಕೊಕ್ಕೊ, ಅಂಗಾಂಶ ಬಾಳೆ, ಪಪ್ಪಾಯ ಇತ್ಯಾದಿ ಬೆಳೆ ಕುರಿತ ಕೆಲಸಗಳನ್ನು ಸಂಬಂಧಿಸಿ ಸ್ವಸಹಾಯ ಸಂಘ, ಒಕ್ಕೂಟಗಳ ಮೂಲಕ ನಡೆಸಲಾಗುತ್ತಿದೆ ಹೆಚ್ಚಿನ ಪಂಚಾಯಿತಿಗಳು ನಿಗದಿತ ಗುರಿಯನ್ನು ತಲುಪಲಿವೆ ಎನ್ನುತ್ತಾರೆ ತಾಪಂ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ.

www.bantwalnews.com Editor: Harish Mambady Phone: 9448548127

ಜಾಹೀರಾತು

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ನರೇಗಾಕ್ಕಿಲ್ಲ ಕೊರೊನಾ ಅಡ್ಡಿ, ಶ್ರಮಜೀವಿಗಳಿಗಿದೆ ಉದ್ಯೋಗ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*