ಜಿಲ್ಲಾಡಳಿತ ವಿಧಿಸಿದ್ದ ನಿಷೇಧಾಜ್ಞೆ ಸಂದರ್ಭ ದ್ವಿಚಕ್ರ ಹೊರತುಪಡಿಸಿ, ಖಾಸಗಿ ವಾಹನಗಳ ಪ್ರವೇಶ ಇಲ್ಲ ಎಂಬ ಸೂಚನೆಯ ಹೊರತಾಗಿಯೂ ಕಳೆದೆರಡು ದಿನಗಳಿಂದ ಬಂಟ್ವಾಳ ತಾಲೂಕಿನಾದ್ಯಂತ ವಾಹನಗಳು ಸಂಚರಿಸುತ್ತಿದ್ದವು. ಸಂತೆ ರೀತಿಯ ವ್ಯಾಪಾರವೂ ಆರಂಭಗೊಂಡಿತ್ತು. ಶುಕ್ರವಾರ ಮತ್ತೆ ಕಟ್ಟುನಿಟ್ಟಾದ ಪೊಲೀಸರು ಬಿ.ಸಿ.ರೋಡಿನ ಕೈಕಂಬ, ಮೇಲ್ಕಾರ್, ಕಲ್ಲಡ್ಕ ಸಹಿತ ಆಯಕಟ್ಟಿನ ಪ್ರದೇಶಗಳಲ್ಲಿ ಸಂತೆವ್ಯಾಪಾರ, ಅನಗತ್ಯ ವಾಹನ ಸಂಚಾರಗಳಿಗೆ ಕಡಿವಾಣ ಹಾಕಿದರು.
ಜಾಹೀರಾತು
ನಿಗದಿತ ಅಂಗಡಿಗಳಲ್ಲದೆ ಇತರೆ ಅಂಗಡಿಗಳೂ ತೆರೆದಿರುವುದನ್ನು ಕಂಡು ಅವುಗಳನ್ನು ಮುಚ್ಚಿದರು. ಕೆಲವರು ಬೆಳ್ಳಂಬೆಳಗ್ಗೆ ಪೊಲೀಸರು ಬರುವುದಿಲ್ಲ ಎಂದು ಸುತ್ತಾಡಲು ಹೊರಟರೆ ಅವರನ್ನೂ ಬೆಂಬಿಡದ ಪೊಲೀಸರು ಕೋವಿಡ್ ನ ಪರಿಣಾಮದ ಕುರಿತು ಬುದ್ಧಿವಾದ ಹೇಳಿ, ಮನೆಯೊಳಗಿರುವಂತೆ ಸೂಚನೆ ನೀಡಿದರು. ಹಳ್ಳಿ ಪ್ರದೇಶಗಳಲ್ಲಿ ಮೂರು ನಾಲ್ಕು ಕಿಲೋಮೀಟರ್ ಹಾಲಿಗಾಗಿ ತೆರಳುವವರು, ಡೈರಿಗಳಿಗೆ ಹಾಲು ಕೊಂಡು ಹೋಗುವವರೂ ಇದರಿಂದ ಪರದಾಡಬೇಕಾಯಿತು.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಏಳನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ಅಕೌಂಟ್ ನಂಬ್ರ ಹೀಗಿದೆ. For Online Transaction: Account Name: Harish M G, Bank: Karnataka bank Account No: 0712500100982501 IFSC Code: KARB0000071 ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ
Be the first to comment on "ಬಿಗುವಾದ ಪೊಲೀಸರು: ನಿಷೇಧಾಜ್ಞೆ ಕಟ್ಟುನಿಟ್ಟು ಪಾಲನೆ"