ಶಿಥಿಲ ಸಂಬಂಧಗಳ ಕತೆ ಹೇಳುವ ಬಿಸಿ ಬೇಳೆ ಬಾತ್

  • ಹರೀಶ ಮಾಂಬಾಡಿ

www.bantwalnews.com

ಜಾಹೀರಾತು

email: bantwalnews@gmail.com Phone: 9448548127

‘ಮನೇಲಿದ್ದೇನಲ್ಲಾ, ಏನೋ ತಪ್ ಮಾಡ್ತೀನಿ ಎಂಬ ಗಿಲ್ಟೀ ಫೀಲಿಂಗ್..’

ತಾಯಿ ಕರೆ ಮಾಡಿದಾಗ ಮಗ ಉತ್ತರಿಸುವುದು ಹೀಗೆ. ಹೀಗನ್ನುತ್ತಲೇ ರಾಕಿ ತಾನು ಮನೆಯಲ್ಲಿ ಒಂಟಿಯಾಗಿ ಕುಳಿತುಕೊಳ್ಳುವುದೇ ಮಹಾಪರಾಧ, ಸೋಮಾರಿಗಳ ಕೆಲಸ ಎಂಬಂತೆ ಭಾವಿಸುತ್ತಾನೆ. ಚಡಪಡಿಸುತ್ತಾನೆ. ಹಾಡು ಕೇಳುತ್ತಾನೆ. ನ್ಯೂಸ್ ನೋಡುತ್ತಾನೆ. ಕೆಲ ಹೊತ್ತಿನ ಬಳಿಕ ಕಾಲಿಂಗ್ ಬೆಲ್ ಸದ್ದಾಗುತ್ತದೆ. ಆಗ ಅಲ್ಲಿ ಪ್ರವೇಶಿಸುವ ಎರಡು ಪಾತ್ರಗಳು ಕಥೆಯನ್ನು, ರಾಕಿಯ ಆಲೋಚನೆಗಳನ್ನು ಬದಲಾಯಿಸುತ್ತವೆ. ನಂತರ ನಡೆಯುವ ವಿದ್ಯಮಾನವನ್ನು ನೀವು ನೋಡಿದರೇ ಚೆನ್ನಾಗಿರುತ್ತದೆ.

ಜಾಹೀರಾತು

ವೇಗದ ಜಗತ್ತಿನ ನಡಿಗೆ ನಮ್ಮನ್ನು ವಾಸ್ತವದಿಂದ ದೂರ ಮಾಡುತ್ತಿದೆಯೇನೋ ಎಂದು ಯೋಚಿಸಲು ಪ್ರೇರಣೆ ನೀಡುವಂತಿದೆ ಚಿತ್ರಕತೆ. ಮೊಬೈಲ್ ನಲ್ಲಿ ಜಗತ್ತನ್ನೇ ಕಾಣುವ ಇಂದಿನ ದಿನಗಳಲ್ಲಿ, ಟಿ.ವಿ. ಸ್ವಿಚ್ ಆನ್ ಮಾಡಿದರೆ, ಸುದ್ದಿಯ ಮಹಾಪೂರವನ್ನೇ ಕಾಣುವ ಸಂದರ್ಭ, ಚಿತ್ರದ ಕೊನೆಯ ದೃಶ್ಯದಲ್ಲಿ ರಾಕಿ, ಬಾಗಿಲು ತೆರೆದು ಬಂದವರನ್ನು ಹುಡುಕುವುದು, ಆ ಸಂದರ್ಭ ಗೇಟಿನಲ್ಲಿ ವೃತ್ತಪತ್ರಿಕೆ ಮಡಿಸಿಟ್ಟಿರುವುದು, ಹಳೆಯ ಹೊಸತರ ಸಂಗಮವನ್ನು ಸಾಂಕೇತಿಕವಾಗಿ ಬಣ್ಣಿಸುತ್ತದೆ.

ಮನೆಯಲ್ಲಿ ಕುಳಿತು ಒಂಟಿತನ ಬೋರ್ ಆದಾಗ ಹಾಡುಗಳನ್ನು ಬದಲಾಯಿಸುವ ರಾಕಿ ಮನಸ್ಥಿತಿಯನ್ನು ತೋರಿಸುವ ದೃಶ್ಯಾವಳಿಗಳು ಸ್ವಲ್ಪ ಹೆಚ್ಚಾಯಿತು ಅಂದುಕೊಂಡರೂ ಬಳಿಕ ಸುಂದರ್, ಕುಮುದವಲ್ಲಿ ಪ್ರವೇಶವಾದೊಡನೆ ನಾವೂ ಕತೆಯೊಳಗೊಂದಾಗುತ್ತೇವೆ. ತೀರಾ ಭಾವುಕ ವ್ಯಕ್ತಿಗಳ ಕಣ್ಣಿಂದ ಹನಿಯೊಂದು ಬೀಳುವಂತೆ ಮಾಡುವ ಕೆಪ್ಯಾಸಿಟಿಯೂ ಕೆಲ ದೃಶ್ಯಗಳಿಗಿದೆ ಎನ್ನುವುದು ಪ್ಲಸ್ ಪಾಯಿಂಟ್. ಅಭಿನಂದನೆಗಳು ನಿರ್ಮಾಪಕ, ನಿರ್ದೇಶಕ ಅರವಿಂದ ಕೌಶಿಕ್, ನಿರ್ಮಾಪಕರಾದ ಶಿಲ್ಪಾ ಅರವಿಂದ್, ನವೀನ್ ಸಾಗರ್ ಅವರಿಗೆ. ಪ್ರಬುದ್ಧ ನಟನಾಗಿ ರಾಕೇಶ್ ಮಯ್ಯ ಇಷ್ಟವಾಗುತ್ತಾರೆ. ಅರ್ಜುನ್ ಸಂಗೀತ ಮುದ ನೀಡುತ್ತದೆ. ಪುಷ್ಪಾ ಅನಿಲ್ ಧ್ವನಿಯಲ್ಲೇ ಕತೆಯ ಮುಖ್ಯ ಪಾತ್ರಗಳಲ್ಲೊಂದಾಗುತ್ತಾರೆ. ಸತ್ವ ಮೀಡಿಯಾದಿಂದ ಇಂಥ ಇನ್ನಷ್ಟು ಸತ್ವಯುತವಾದ ಕಿರುಚಿತ್ರಗಳು ಹೊರಬರಲಿ.

ಇದು ಬಿಸಿಬೇಳೆಬಾತ್ ಟೀಸರ್.. ಕ್ಲಿಕ್ ಮಾಡಿರಿ.

ಜಾಹೀರಾತು

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಶಿಥಿಲ ಸಂಬಂಧಗಳ ಕತೆ ಹೇಳುವ ಬಿಸಿ ಬೇಳೆ ಬಾತ್"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*