ಪಾಣೆಮಂಗಳೂರು ಗ್ರಾಮ ಬೊಂಡಾಲ 27ನೇ ವಾರ್ಡ್ ಶಾಂತಿಗುಡ್ಡೆ ಗುಂಡೂರು ಮಹಮ್ಮಾಯಿ ರಸ್ತೆಗೆ ಮಾಜಿ ಸಚಿವ ಬಿ.ರಮಾನಾಥ ರೈ ಅ. 22ರಂದು ತೆಂಗಿನಕಾಯಿ ಒಡೆಯುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು.
ಜಾಹೀರಾತು
ಬಂಟ್ವಾಳ ವಿಧಾನ ಸಭಾ ಚುನಾವಣೆ ಪೂರ್ವದಲ್ಲಿ ನಗರೋತ್ಥಾನ ಯೋಜನೆಯಡಿ 20ಲಕ್ಷ ರೂ. ಅನುದಾನ ಮಂಜೂರಾಗಿದ್ದು ಕಾಮಗಾರಿಯು ವಿವಿಧ ಕಾರಣಕ್ಕೆ ಚಾಲನೆ ಆಗಿರಲಿಲ್ಲ. ತನ್ನ ಅಧಿಕಾರದ ಅವಧಿಯಲ್ಲಿ ಈ ಕಾಮಗಾರಿಗೆ ಅನುದಾನ ಮಂಜೂರಾಗಿತ್ತು. ಅಂದು ಚುನಾವಣೆ ನೀತಿ ಸಂಹಿತೆ ಕಾರಣಕ್ಕೆ ಕಾಮಗಾರಿ ನಡೆದಿರಲಿಲ್ಲ. ಪ್ರಸ್ತುತ ನಾನು ಮಾಜಿ ಆದರೂ ಅಂದು ಮಂಜೂರಾತಿ ಆಗಿರುವ ಅಭಿವೃದ್ದಿ ಕಾಮಗಾರಿಯನ್ನು ಮುಂದುವರಿಸಿ ಕ್ರಮ ಕೈಗೊಂಡಿದ್ದಾಗಿ ಸ್ಥಳದಲ್ಲಿ ಇದ್ದ ಊರಿನ ಜನರಲ್ಲಿ ತಿಳಿಸಿದರು.
ಕಾಮಗಾರಿ ಚಾಲನೆ ಸಂದರ್ಭ ಯುವ ಕಾಂಗ್ರೆಸ್ ಉಪಾಧ್ಯಕ್ಷ ಬೊಂಡಾಲ ಚಿತ್ತರಂಜನ್ ಶೆಟ್ಟಿ, ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದಿಕ್ , ವೆಂಕಪ್ಪ ಪೂಜಾರಿ, ಗುತ್ತಿಗೆದಾರ ದೀರಜ್ ನಾಕ್ ಮತ್ತು ಸ್ಥಳೀಯರು ಉಪಸ್ಥಿತರಿದ್ದರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಶಾಂತಿಗುಡ್ಡೆ ಗುಂಡೂರು ಮಹಮ್ಮಾಯಿ ರಸ್ತೆ ಕಾಮಗಾರಿಗೆ ಚಾಲನೆ"