ರಾಜೇಶ್ ನಾಯ್ಕ್, ಉಮಾನಾಥ ಕೋಟ್ಯಾನ್ ಅವರಿಗೆ ಬಂಟ್ವಾಳದಲ್ಲಿ ಸನ್ಮಾನ

ಈ ಬಾರಿ ರಾಜ್ಯ ವಿಧಾನಸಭೆಗೆ ಶಾಸಕರಾಗಿ ಆಯ್ಕೆಯಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮತ್ತು ಉಮಾನಾಥ ಕೋಟ್ಯಾನ್ ಅವರನ್ನು ಬಂಟ್ವಾಳ ಯಶವಂತ ವ್ಯಾಯಾಮ ಶಾಲೆಯಲ್ಲಿ ಅಭಿನಂದಿಸಿ ಸನ್ಮಾನಿಸಲಾಯಿತು.

ಜಾಹೀರಾತು

ಜಿ.ಎಸ್.ಬಿ.ಎಸ್.ವಿ.ಎಸ್.ದೇವಳ, ಶಾಲೆಯ ಹಳೇ ವಿದ್ಯಾರ್ಥಿ ಸಂಘ ಹಾಗೂ ಶ್ರೀ ಯಶವಂತ ವ್ಯಾಯಮ ಶಾಲೆ ಬಂಟ್ವಾಳ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ರಾಜೇಶ್ ನಾಯ್ಕ್., ಬಂಟ್ವಾಳ ದ ಶಾಸಕನಾಗಿ ಆಯ್ಕೆಯಾಗಲು ಪುಣ್ಯ ಬೇಕಾಗಿದೆ. ವೆಂಕಟರಮಣ ದೇವರ ಆಶ್ರೀವಾದ ನಿಮ್ಮ ಪ್ರೀತಿ ವಿಶ್ವಾಸ ಗೆಲುವಿಗೆ ಕಾರಣವಾಯಿತು. ಬಿಜೆಪಿ ಪಕ್ಷವನ್ನು ಉಳಿಸಿ ಬೆಳೆಸುವಲ್ಲಿ ಜಿ.ಎಸ್.ಬಿ.ಸಮಾಜದ ಕೊಡುಗೆ ಅನನ್ಯವಾದುದು ಎಂದರು.

ಸ್ಪರ್ಧಾತ್ಮಕ ಯುಗದಲ್ಲಿ  ಕೃಷಿಯೂ ಅಗತ್ಯ ಎಂದು ಒತ್ತಿ ಹೇಳಿದ ಅವರು, ಕೃಷಿಯಿಂದ ಸುಂದರ ಸರಳ ಜೀವನ ನಡೆಸಲು ಸಾಧ್ಯ. ಶಾಸಕನಾಗಿ ಕೃಷಿಯನ್ನು ಉಳಿಸಿ ಬೆಳೆಸುವ ಮೂಲಕ ಮಾದರಿ ತಾಲೂಕಿಗೆ ಪ್ರಥಮ ಪ್ರಾಶಸ್ತ್ಯ ಕೊಡುತ್ತೇನೆ. ಶಾಂತಿಯುತ ನೆಮ್ಮದಿಯ ಜೀವನಕ್ಕೆ ಭದ್ರ ಬುನಾದಿ ಯನ್ನು ಹಾಕುವುದು ಮತ್ತು‌ ಉದ್ಯೋಗ ಸ್ರಷ್ಟಿ ಮಾಡುವುದು ನನ್ನ ಕನಸು. ಶಾಸಕನ ಇತಿಮಿತಿಗಳನ್ನು ಅರಿತು ಕೆಲಸ  ಮಾಡುತ್ತೇನೆ  ನಿಮ್ಮೆಲ್ಲರ ಸಹಕಾರ ಬೇಕು ಎಂದರು.

ಎಸ್.ವಿ.ಎಸ್.ಶಾಲೆಯ ಹಳೆ ವಿದ್ಯಾರ್ಥಿ ಯಾದ ನಾನು ರಾಜಕೀಯ ಪ್ರವೇಶ ಮಾಡಿದರು ಹಳೆಯ ನೆನಪು ಮರೆತಿಲ್ಲ ಎಂದು ಶಾಸಕ ಉಮನಾಥ ಕೋಟ್ಯಾನ್  ಶಿಕ್ಷಕರಾದ ವಿಶ್ವನಾಥ ಬಾಳಿಗ, ಗಣಪತಿ ಶೆಣೈ ಹೆಸರುಗಳನ್ನು ಮೆಲುಕು ಹಾಕಿದರು.

ಜಾಹೀರಾತು

ಕಾರ್ಯಕರ್ತರು ನನ್ನ ಸರ್ವಸ್ವ ಅವರನ್ನು ನಾನು ಮರೆಯುವ ಪ್ರಶ್ನೆಯೇ ಇಲ್ಲ. ನಾನು ಬಡ ಕುಟುಂಬದಿಂದ ಬಂದವನು,  ಇಲ್ಲಿನ ಶಿಕ್ಷಣ ಸಂಸ್ಥೆ ನೀಡಿದ ಮಾತುಗಾರಿಕೆ ಮಾತ್ರ ನನ್ನನ್ನು ಶ್ರೀಮಂತನನ್ನಾಗಿ  ಮಾಡಿದೆ. ಎಂದರು. ಜಿ.ಎಸ್.ಬಿ.ಸಂಘದ ಅಧ್ಯಕ್ಷ ಡಾ ವಸಂತ ಬಾಳಿಗ ಕಾರ್ಯಕ್ರಮ ದ ಅಧ್ಯಕ್ಷ ತೆ ವಹಿಸಿದ್ದರು. ಯಶವಂತ ವ್ಯಾಯಮ ಶಾಲೆಯ ಅಧ್ಯಕ್ಷ ನಾರಾಯಣ ಕಾಮತ್, ವೆಂಕಟರಮಣ ದೇವಳದ ಧರ್ಮ ದರ್ಶಿ ಎ. ಗೋವಿಂದ ಪ್ರಭು,  ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಪ್ರಭಾಕರ ಪೈ, ಪ್ರಮುಖರಾದ ಹರಿಕ್ರಷ್ಣ ಬಂಟ್ವಾಳ, ಉದಯಕುಮಾರ್ ರಾವ್, ಜಿ.ಆನಂದ, ದೇವದಾಸ ಶೆಟ್ಟಿ, ದಿನೇಶ್ ಭಂಡಾರಿ, ಚಿದಾನಂದ ಶೆಣ್ಯೆ,  ಗಿರೀಶ್ ಪೈ, ರಾಮದಾಸ ಬಂಟ್ವಾಳ, ಸತೀಶ್ ನಾಯಕ್, ಶ್ರೀನಿವಾಸ ಪೈ ಮತ್ತಿತರು ಉಪಸ್ಥಿತರಿದ್ದರು.

ವ್ಯಾಯಮ‌ ಶಾಲೆಯ ಕಾರ್ಯದರ್ಶಿ ನಾಗೇಂದ್ರ ವಿ. ಬಾಳಿಗಾ ಸ್ವಾಗತಿಸಿದರು.  ವಸಂತ ಪ್ರಭು  ವಂದಿಸಿದರು. ರಮ್ಯ ಪ್ರಶಸ್ತಿ ಕಾರ್ಯ ಕ್ರಮ ನಿರೂಪಿಸಿದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ರಾಜೇಶ್ ನಾಯ್ಕ್, ಉಮಾನಾಥ ಕೋಟ್ಯಾನ್ ಅವರಿಗೆ ಬಂಟ್ವಾಳದಲ್ಲಿ ಸನ್ಮಾನ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*