ಫರಂಗಿಪೇಟೆ

ಬಿ.ಸಿ.ರೋಡ್ – ಮಂಗ್ಳೂರು ಹೈವೇಯಲ್ಲಿ ದರೋಡೆಗೆ ಸ್ಕೆಚ್: ಇಬ್ಬರ ಬಂಧನ

ಮಾರಿಪಳ್ಳದಲ್ಲಿ ಮಾರಕಾಸ್ತ್ರ ಹಿಡಿದು ದರೋಡೆ ಮಾಡಲು ಸ್ಕೆಚ್ ಹಾಕುತ್ತಾ ನಿಂತಿದ್ದ ಆರು ಮಂದಿಯ ಪೈಕಿ ಇಬ್ಬರನ್ನು ಬಂಟ್ವಾಳ ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಜಾಹೀರಾತು

ಮಂಗಳೂರು ತಾಲೂಕಿನ ಮೇಲಂಗಡಿ ನಿವಾಸಿ ಮಹಮ್ಮದ್ ಅರ್ಪಾಜ್ ಮತ್ತು ಆತನ ಸ್ನೇಹಿತ ಮಹಮ್ಮದ್ ಸುಹೈಲ್ ಯಾನೆ ತುಪೈಲ್ ಮಾರಿಪಳ್ಳ ಬಂಧಿತ ಆರೋಪಿಗಳು.

ಶುಕ್ರವಾರ ರಾತ್ರಿ ತುಂಬೆ ಗ್ರಾಮದ ಮಾರಿಪಳ್ಳ ರುದ್ರ ಭೂಮಿಯ ಸಮೀಪ ಗಸ್ತು ತಿರುಗುತ್ತಿದ್ದ ವೇಳೆ ಸುಮಾರು ಆರು ಜನರ ತಂಡ ರಾ.ಹೆ.ಯ ಮಾರಿಪಳ್ಳದಲ್ಲಿ ಅನುಮಾನಾಸ್ಪದವಾಗಿ ಕುಳಿತುಕೊಂಡಿದ್ದು, ಗಸ್ತಿನಲ್ಲಿದ್ದ ಪೊಲೀಸರನ್ನು ಕಂಡ ಕೂಡಲೇ ಸ್ಥಳದಿಂದ ಕಾಲ್ಕಿತ್ತರು.

ಜಾಹೀರಾತು

ಇದರಿಂದ ಅನುಮಾನಗೊಂಡ ಪೊಲೀಸರು ಇವರನ್ನು ಬೆನ್ನತ್ತಿದಾಗ ಮಹಮ್ಮದ್ ಅರ್ಪಾಜ್ ಮತ್ತು ಮಹಮ್ಮದ್ ಸುಹೈಲ್ ಪೋಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ತಕ್ಷಣ ಇವರಿಬ್ಬರನ್ನು ತೀವ್ರ ವಿಚಾರಣಗೆ ಗುರಿ ಪಡಿಸಿದಾಗ ಮಾರಿಪಳ್ಳದ ಶಾಕೀರ್ , ನೌಪಾಲ್, ಟಿ.ಶಮೀರ್, ಮತ್ತು ನಿಸಾರ್ ಅವರು ಒಟ್ಟು ಆರು ಮಂದಿ ಮಾರಿಪಳ್ಳ ರೊಟ್ಟಿಗುಡ್ಡೆ ರುದ್ರಭೂಮಿ ಬಳಿ ಒಟ್ಟು ಸೇರಿ ರಾತ್ರಿ ಸಮಯದಲ್ಲಿ ಲಾರಿ ಇತರ ವಾಹನ‌ ಚಾಲಕರ ದರೋಡೆಗೆ ಸಂಚು ರೂಪಿಸಿ ರಸ್ತೆ ಬದಿ ಬಂದು ನಿಂತಿದ್ದರೆಂದು ಪೊಲೀಸರ ವಿಚಾರಣೆಯ ವೇಳೆ ಬಯಲಿಗೆ ಬಂದಿದೆ.

ಇದಕ್ಕಾಗಿ ಬಳಸಲು ತಂದಿದ್ದ ಮೆಣಸಿನ ಹುಡಿ ,ಮಾರಕಾಯುಧ ವನ್ನು ಪೊಲೀಸರು ಈ ಸಂದರ್ಭದಲ್ಲಿ ಬಂಧಿತ ಆರೋಪಿಗಳಿಂದ ವಶ ಪಡಿಸಿದ್ದಾರೆ. ತಲೆಮರೆಸಿರುವ ನಾಲ್ವರು ಆರೋಪಿಗಳಿಗಾಗಿ ಪೋಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

ಎಸ್ಪಿ ರವೀಕಾಂತೇಗೌಡ ಅವರ ಮಾರ್ಗದರ್ಶನದಲ್ಲಿ, ಪ್ರೊ. ಐ.ಪಿ.ಎಸ್.ಅಕ್ಷಯ್ ಹೆಚ್.ಹಾಕೆ ಅವರ ನೇತೃತ್ವದಲ್ಲಿ ಗ್ರಾಮಾಂತರ ಎಸ್ ಐ. ಪ್ರಸನ್ನ ಕುಮಾರ್ ರವರು ಕಾರ್ಯಾಚರಣೆ ನಡೆಸಿದ್ದು, ಸಿಬ್ಬಂದಿ ಗಳಾದ ಸುರೇಶ್, ಜಯರಾಮ್, ಜನಾರ್ಧನ, ಅಜಯ್, ಬಸವರಾಜ್, ಮಂಜುನಾಥ, ಪಾಲ್ಗೊಂಡಿದ್ದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ