ಮಂಚಿಯಲ್ಲಿ ಬಿ.ವಿ.ಕಾರಂತ ನೆನಪಿನ ನಾಟಕೋತ್ಸವ ದಶಮಾನೋತ್ಸವ ಉದ್ಘಾಟನೆ

  • ಸದಭಿರುಚಿಯ ನಾಟಕಗಳಿಂದ ಜನತೆ ದೂರ: ಡಾ. ಏರ್ಯ ವಿಷಾದ

ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಮುಳುಗಿಹೋಗಿರುವ ನಾವು ಸದಭಿರುಚಿಯ ನಾಟಕಗಳಿಂದ ದೂರವಿರುವುದು ನೋವಿನ ಸಂಗತಿ ಎಂದು ಹಿರಿಯ ಸಾಹಿತಿ ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವ ಹೇಳಿದರು.

ಜಾಹೀರಾತು

ನೂಜಿಬೈಲು ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ವಠಾರ ಮಂಚಿಯಲ್ಲಿ ಜರಗಿದ ಬಿ.ವಿ.ಕಾರಂತ ರಂಗ ಭೂಮಿಕಾ ಟ್ರಸ್ಟ್ ಇದರ ಆಶ್ರಯದಲ್ಲಿ ನಡೆದ ಬಿ.ವಿ.ಕಾರಂತ ನೆನಪಿನ ಮಂಚಿ ನಾಟಕೋತ್ಸವ ದಶಮಾನದ ಸಂಭ್ರಮದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಬಿ.ವಿ.ಕಾರಂತರ ನಾಟಕಗಳನ್ನು ಶಾಲೆಗಳಲ್ಲಿ ಮಾಡುತ್ತಿದ್ದ ನೆನಪು ಅವಿಸ್ಮರಣೀಯ . ನಾಟಕಗಳಲ್ಲಿ ಹೆಚ್ಚು ಪ್ರಯೋಗಾತ್ಮಕ ನಾಟಕಗಳು ಮೂಡಿ ಬರಬೇಕು . ಶಿವರಾಮ ಕಆರಂತರ ಹೆಸರನ್ನು ಪಿಲಿಕುಳ ನಿಸರ್ಗಧಾಮಕ್ಕೆ ಇಟ್ಟ ಹೆಮ್ಮೆ ನಮಗಿದೆ ಎಂದು ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ವಿಟ್ಲ ಕನ್ನಡ ಸಂಘ ಅಧ್ಯಕ್ಷ ನಿವೃತ್ತ ಪ್ರಾಂಶುಪಾಲ ಅನಂತ ಕೃಷ್ಣ ಹೆಬ್ಬಾರ್, ನೂಜಿಬೈಲು ಅ.ಹಿ.ಪ್ರಾ.ಶಾಲಾ ಸಂಚಾಲಕಿ ಶಾಂತಲಾ ಎನ್.ಭಟ್ ಉಪಸ್ಥಿತರಿದ್ದರು.

ಜಾಹೀರಾತು

ಉಪಾಧ್ಯಕ್ಷ ಗಣೇಶ್ ಐತಾಳ್ ಸ್ವಾಗತಿಸಿದರು. ಅಧ್ಯಕ್ಷ ಕಜೆ ರಾಮಚಂದ್ರ ಭಟ್ ಪ್ರಾಸ್ತಾವಿಕ ಮಾತನ್ನಾಡಿದರು. ಬಾಲಕೃಷ್ಣ ಶೆಟ್ಟಿ ವಂದಿಸಿದರು. ನ್ಯಾಯವಾದಿ ರವೀಂದ್ರ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸುವರ್ಣ ಪ್ರತಿಷ್ಠಾನ ರಿ. ಮಂಗಳೂರು ಇವರಿಂದ ’ಮಳೆ ನಿಲ್ಲುವ ವರೆಗೆ’ ಕನ್ನಡ ನಾಟಕ ಜರಗಿತು.

ಪ್ರತಿದಿನ ಸಂಜೆ ನಾಟಕಗಳು ನಡೆಯುತ್ತವೆ. ಕಾರ್ಯಕ್ರಮಗಳ ವಿವರ ಹೀಗಿದೆ.

ಮೇ. 4:

ಜಾಹೀರಾತು

ಸಂಜೆಯ ಕಾರ್ಯಕ್ರಮ: ಅಧ್ಯಕ್ಷತೆ – ಎ.ಸಿ.ಭಂಡಾರಿ (ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ). ಉಪಸ್ಥಿತಿ: ಡಾ. ಪುಂಡಿಕಾಯಿ ಗಣಪಯ್ಯ ಭಟ್, ಡಾ. ಗೋಪಾಲ ಆಚಾರ್, ಬಿ.ಲೋಕನಾಥ. ಸನ್ಮಾನ – ತುಕಾರಾಮ ಪೂಜಾರಿ (ಅಧ್ಯಕ್ಷ, ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ, ಸಂಚಯಗಿರಿ). ಬಳಿಕ ನಾಟಕ ನವಸುಮ ರಂಗಮಂಚ ಕೊಡವೂರು ಇವರಿಂದ ಬಾಲಕೃಷ್ಣ ಕೊಡವೂರು ರಚನೆ, ನಿರ್ದೇಶನದ ದುರ್ದುಂಡೆ ದ್ರೌಣಿ – ತುಳು ನಾಟಕ.

ಮೇ. 5

ಮಧ್ಯಾಹ್ನ 2.30ರಿಂದ ಮೇದಿನಿ ಕೆಳ ಮನೆ ನಿರ್ದೇಶನದ ‘ದಾಳಿ’, ಕಿರುಚಿತ್ರ ಪ್ರದರ್ಶನ, ಮತ್ತು 3 ಗಂಟೆಯಿಂದ ನೀರಿದ್ದರೆ ನಾಳೆ ನೀರ ಅರಿವು – ನಮ್ಮ ಉಳಿವು ಸಂವಾದ ಕಾರ್ಯಕ್ರಮದಲ್ಲಿ ಮಂಚಿ ಶ್ರೀನಿವಾಸ ಆಚಾರ್, ಡಾ| ನಾರಾಯಣ ಶೆಣೈ, ಡಾ| ಕೊಂಕೋಡಿ ಕೃಷ್ಣ ಭಟ್ ಪ್ರಮುಖ ಮಾತುಗಾರರಾಗಿ ಭಾಗವಹಿಸಲಿರುವರು.

ಜಾಹೀರಾತು

ಸಂಜೆ ಗಂಟೆ 6 ರಿಂದ ಸಭಾ ಕಾರ್ಯಕ್ರಮವು ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರಾದ ಕೆ.ಮೋಹನ್ ರಾವ್ ಅಧ್ಯಕ್ಷತೆಯಲ್ಲಿ ಜರಗಲಿರುವುದು.  ಕೆ.ಜಿ.ಕೃಷ್ಣಮೂರ್ತಿ, ಹಿರಿಯ ರಂಗ ನಿರ್ದೇಶಕರು, ತುಮುರಿ, ಶ್ರೀನಿವಾಸ ದೇಶಪಾಂಡೆ, ಮುಖ್ಯ ಪ್ರಬಂಧಕರು, ಕರ್ಣಾಟಕ ಬ್ಯಾಂಕ್ ಪ್ರಧಾನ ಕಛೇರಿ ಮಂಗಳೂರು, ಪತ್ತುಮುಡಿ ಸೂರ್ಯನಾರಾಯಣ ರಾವ್, ಮಾಲಕರು, ಹೋಟೆಲ್ ಜನತಾ ಡಿ ಲಕ್ಷ್, ಮಂಗಳೂರು, ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು. ಹಿರಿಯ ರಂಗ ನಿರ್ದೇಶಕರಾದ ಶ್ರೀ ಜೀವನ್ ರಾಂ ಸುಳ್ಯ ಅವರಿಗೆ ಗೌರವಾರ್ಪಣೆಯನ್ನು ಮಾಡಲಾಗುವುದು. ಲಾನಣ್ಯ (ರಿ), ಬೈಂದೂರು ಇವರಿಂದ ರಾಜೇಂದ್ರ ಕಾರಂತರ ರಚನೆ ಮತ್ತು ಗಿರೀಶ್ ಬೈಂದೂರು ಇವರ ನಿರ್ದೇಶನದ ಮುದ್ದಣನ ಪ್ರಮೋಶನ್ ಪ್ರಸಂಗ ಕನ್ನಡ ನಾಟಕ ಪ್ರದರ್ಶನಗೊಳ್ಳುವುದು.

ಮೇ 6, ಸಮಾರೋಪ:

ಸಂಜೆ ಗಂಟೆ 6 ರಿಂದ ಸಮಾರೋಪ ಸಮಾರಂಭ ಮುಂಬೈ ವಿಶ್ವವಿದ್ಯಾನಿಲಯದ ವಿಶ್ರಾಂತ ಪಾಧ್ಯಾಪಕರಾದ ಡಾ| ತಾಳ್ತಜೆ ವಸಂತ ಕುಮಾರ ಅಧ್ಯಕ್ಷತೆಯಲ್ಲಿ ಜರಗಲಿರುವುದು.  ಬೆಂಗಳೂರಿನ ಹಿರಿಯ ಪತ್ರಕರ್ತರು, ಸಾಹಿತಿಗಳಾದ ಜೋಗಿ ಹಾಗೂ ಡಾ| ಪಿ.ಮನೋಹರ ಉಪಾಧ್ಯ, ಮಂಗಳೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು. ಮೂರ್ತಿ ದೇರಾಜೆ  ಮತ್ತು ಶಂಕರಪ್ರಸಾದ್, ಮಕ್ಕಳ ನಾಟಕ ವಿನ್ಯಾಸಕಾರರು, ವಿಟ್ಲ ಅವರನ್ನು ಗೌರವಿಸಲಾಗುವುದು. ರಂಗಭೂಮಿ, ಉಡುಪಿ ಇವರಿಂದ ಶಶಿಕುಮಾರ್ ಕಾವೂರು ರಚನೆ, ಮತ್ತು ರವಿರಾಜ್ ಎಚ್.ಪಿ ನಿರ್ದೇಶನದ ಐಸಿಯು ನೋಡುವೆ ನಿನ್ನ… ಕನ್ನಡ ನಾಟಕ ಪ್ರದರ್ಶನಗೊಳ್ಳುವುದು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಮಂಚಿಯಲ್ಲಿ ಬಿ.ವಿ.ಕಾರಂತ ನೆನಪಿನ ನಾಟಕೋತ್ಸವ ದಶಮಾನೋತ್ಸವ ಉದ್ಘಾಟನೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*