ಯಕ್ಷಗಾನ ಹಿರಿಯರ ಸಂಸ್ಮರಣೆ, ತಾಳಮದ್ದಳೆ ಸಪ್ತಾಹ

ಉಜಿರೆಯ ಕುರಿಯ ವಿಟ್ಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನದ ನೇತೃತ್ವದಲ್ಲಿ ಕಾಸರಗೋಡು ಶೇಣಿ ಜಂಗಮದ ಸಹಭಾಗಿತ್ವದಲ್ಲಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರ ಕೃಪಾಶೀರ್ವಾದಗಳೊಂದಿಗೆ ಕುರಿಯ ಪ್ರತಿಷ್ಠಾನ ವಿಂಶತಿ – ಶೇಣಿ ಶತಕ ಸರಣಿ ಅಂಗವಾಗಿ ಆಯೋಜಿಸಿದ ತಾಳಮದ್ದಳೆ ಸಪ್ತಾಹ, ಬಯಲಾಟದ ಸಂದರ್ಭ ಶನಿವಾರ ವಿಟ್ಲ ಭಗವತೀ ದೇವಸ್ಥಾನದ ಸಭಾಂಗಣದಲ್ಲಿ ರಸಋಷಿ ದೇರಾಜೆ ಸಭಾಂಗಣ-ರಸಿಕರತ್ನ ವಿಟ್ಲ ಜೋಷಿ ವೇದಿಕೆಯಲ್ಲಿ ಸಂಸ್ಮರಣೆ, ಇಬ್ಬರಿಗೆ ಸಮ್ಮಾನ ಮತ್ತು ಬಯಲಾಟ ನಡೆಯಿತು.

ಜಾಹೀರಾತು

ಡಾ| ಎಂ.ಪ್ರಭಾಕರ ಜೋಷಿ ಅವರು ಯಕ್ಷದಿಗ್ಗಜರಾದ ಕುರಿಯ ವಿಠಲ ಶಾಸ್ತ್ರಿ, ಶೇಣಿ ಗೋಪಾಲಕೃಷ್ಣ ಭಟ್, ದೇರಾಜೆ ಸೀತಾರಾಮಯ್ಯ, ವಿಟ್ಲ ಗೋಪಾಲಕೃಷ್ಣ ಜೋಷಿ, ಪುಚ್ಚೆಕೆರೆ ಕೃಷ್ಣ ಭಟ್ ಅವರ ಸಂಸ್ಮರಣೆ ಮಾಡಿದರು. ಇದೇ ಸಂದರ್ಭ ಹಿರಿಯ ಸಾಹಿತಿ ವಾಟೆ ಮಹಾಲಿಂಗ ಭಟ್ ಅವರು ಪ್ರತಿಷ್ಠಾನದ ಪರವಾಗಿ ಕಲಾಪೋಷಕರು, ಸಂಘಟಕರಾದ ಪಿ.ಕೆ.ವೆಂಕಟ್ರಮಣ ಭಟ್ ಮತ್ತು ಸತೀಶ ಪುಣಿಂಚಿತ್ತಾಯ ಅವರನ್ನು ಸಮ್ಮಾನಿಸಿದರು.

ಜಾಹೀರಾತು

ವಿಟ್ಲ ಭಗವತೀ ದೇವಸ್ಥಾನದ ಮೊಕ್ತೇಸರ ಕೇಶವ ಆರ್.ವಿ., ಮೋನಪ್ಪ ಗುರುಸ್ವಾಮಿ, ಕನ್ಯಾನ ಬೆನಕ ಸ್ಟುಡಿಯೋ ಮಾಲಕ ವಿ.ಕುಮಾರಸ್ವಾಮಿ ಕನ್ಯಾನ, ವಿಟ್ಲ ಭಾರತ್ ಶಾಮಿಯಾನ ಮಾಲಕ ಡಿ.ಸಂಜೀವ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ಕುರಿಯ ಪ್ರತಿಷ್ಠಾನದ ಸಂಚಾಲಕ ಉಜಿರೆ ಎನ್.ಅಶೋಕ ಭಟ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಕೂಡ್ಲು ಶೇಣಿ ರಂಗಜಂಗಮದ ಸಂಚಾಲಕ ಶೇಣಿ ವೇಣುಗೋಪಾಲ ಭಟ್ ಸಹಕರಿಸಿದರು.

ಪಾದುಕಾಪ್ರದಾನ ಎಂಬ ಯಕ್ಷಗಾನ ತಾಳಮದ್ದಳೆಯಲ್ಲಿ ಕಲಾವಿದರಾಗಿ ಪಟ್ಲ ಸತೀಶ್ ಶೆಟ್ಟಿ, ದುರ್ಗಾಪರಮೇಶ್ವರೀ ಕುಕ್ಕಿಲ, ದೇಲಂತಮಜಲು ಸುಬ್ರಹ್ಮಣ್ಯ ಭಟ್, ವರ್ಷಿತ್ ಕಿಜೆಕ್ಕಾರು, ಡಾ| ಎಂ.ಪ್ರಭಾಕರ ಜೋಷಿ, ಮೂಡಂಬಲು ಗೋಪಾಲಕೃಷ್ಣ ಶಾಸ್ತ್ರಿ, ಶೇಣಿ ವೇಣುಗೋಪಾಲ ಭಟ್, ದಿನೇಶ ಶೆಟ್ಟಿ ಅಳಿಕೆ ಅವರು ಭಾಗವಹಿಸಿದ್ದರು. ಬಳಿಕ ಬಬ್ರುವಾಹನ ಎಂಬ ಯಕ್ಷಗಾನ ಬಯಲಾಟದಲ್ಲಿ ಕಲಾವಿದರಾದ ಪುತ್ತಿಗೆ ರಘುರಾಮ ಹೊಳ್ಳ, ಅಡೂರು ಗಣೇಶ ರಾವ್, ಚೈತನ್ಯಕೃಷ್ಣ ಪದ್ಯಾಣ, ರಾಮಚಂದ್ರ ಭಟ್ ಎಲ್ಲೂರು, ರಂಜಿತಾ ಎಲ್ಲೂರು, ಮಹೇಶ ಮಣಿಯಾಣಿ, ಅನನ್ಯಾ ಬಳಂತಿಮೊಗರು, ವನಿತಾ ಭಟ್ ಎಲ್ಲೂರು, ರಕ್ಷಿತಾ ಎಲ್ಲೂರು, ಪ್ರಕೃತಿ ಭಾಗವಹಿಸಿದ್ದರು.

ಜಾಹೀರಾತು

 

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಯಕ್ಷಗಾನ ಹಿರಿಯರ ಸಂಸ್ಮರಣೆ, ತಾಳಮದ್ದಳೆ ಸಪ್ತಾಹ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*